ಹಾದಿಯಾ 
ದೇಶ

ಕೇರಳ ಲವ್ ಜಿಹಾದ್ ಪ್ರಕರಣ: ಹಾದಿಯಾ ತಪ್ಪೊಪ್ಪಿಗೆ ಪತ್ರ (ಕಾಂಡೋನೇಷನ್ ಲೆಟರ್) ನೀಡಬೇಕು, ಪ್ರಾಂಶುಪಾಲರ ಹೇಳಿಕೆ

ಕೇರಳ ಲವ್ ಜಿಹಾದ್ ಪ್ರಕರಣದ ಯುವತಿ ಹಾದಿಯಾ ಇದೀಗ ಪುನಃ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.

ನವದೆಹಲಿ: ಕೇರಳ ಲವ್ ಜಿಹಾದ್ ಪ್ರಕರಣದ ಯುವತಿ ಹಾದಿಯಾ ಇದೀಗ ಪುನಃ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.ಆಕೆಗೆ ಸೂಕ್ತ ಭದ್ರತೆಯೊಡನೆ ಸೇಲಂ ಗೆ ಕಳಿಸಿದ ನ್ಯಾಯಾಲಯ ಸೇಲಂ ಕಾಲೇಜಿನಲ್ಲಿ ಆಕೆಗೆ ಮರುಪ್ರವೇಶ ನೀಡುವಂತೆ ಸೂಚಿಸಿದೆ.
ಇದೇ ವೇಳೆ ಶಿವರಾಜ್ ಹೋಮಿಯೋಪತಿ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ,ಪ್ರಾಂಶುಪಾಲರು  ಜಿ ಕಣ್ಣನ್  "ತಾವು ಆಕೆಗೆ ಮರುಪ್ರವೇಶಕ್ಕೆ ಅವಕಾಶ ನೀಡುತ್ತೇವೆ. ಆದರೆ ಕಾಲೇಜು ನಿಯಮಾನುಸಾರ ಆಕೆ ತಪ್ಪೊಪ್ಪೊಗೆ ಪತ್ರ (ಕಾಂಡೋನೇಷನ್ ಲೆಟರ್)  ಬರೆದು ನೀಡಬೇಕಾಗುತ್ತದೆ. ಆಕೆಯು ತೊಂಭತ್ತು ದಿನಗಳಿಗೆ ಮೇಲ್ಪಟ್ಟು ರಜೆ ಪಡೆದ ಕಾರಣ ಎಲ್ಲಾ ವಿದ್ಯಾರ್ಥಿಗಳಂತೆ ಅವಳಿಗೂ ಈ ನಿಯಮ ಪಾಲನೆ ಅಗತ್ಯವಾಗಿದೆ. ಈ ಪತ್ರವನ್ನು ನಾವು ಎಂಜಿಆರ್ ವಿಶ್ವವಿದ್ಯಾನಿಲಯಕ್ಕೆ ಕಳಿಸುತ್ತೇವೆ. ಎಂದಿದ್ದಾರೆ.
"ಕೋರ್ಟ್ ಆದೇಶವು ಇನ್ನೂ ನಮಗೆ ತಲುಪಿಲ್ಲ ನ್ಯಾಯಾಲಯವು ನಮಗೆ ಏನನ್ನು ಮಾಡಲು ನಿರ್ದೇಶಿಸುತ್ತದೆಯೋ , ನಾವು ಹಾಗೆ ಮಾಡುತ್ತೇವೆ. ನ್ಯಾಯಾಲಯವು ನಮ್ಮನ್ನು ಕೇಳಿದರೆ ಮಾತ್ರ ನಾವು ಆಕೆಯ ರಕ್ಷಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. " ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT