ಮಾವೋವಾದಿ 
ದೇಶ

ಜಾರ್ಖಂಡ್ ಮಾಜಿ ಸಚಿವ ರಮೇಶ್ ಮುಂಡಾ ಹತ್ಯೆಗೆ ರೂ. 5 ಕೋಟಿ ಸುಪಾರಿ: ಮಾವೋವಾದಿ ಮುಖಂಡ

2008ರಲ್ಲಿ ನಡೆದ ಜೆಡಿಯು ಶಾಸಕ, ಮಾಜಿ ಸಚಿವ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮಾವೋವಾದಿ ಮುಖಂಡನಿಂದ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಮಾಜಿ ಸಚಿವನ್ನ ಹತ್ಯೆಗೆ 5

ರಾಂಚಿ: 2008ರಲ್ಲಿ ನಡೆದ ಜೆಡಿಯು ಶಾಸಕ, ಮಾಜಿ ಸಚಿವ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮಾವೋವಾದಿ ಮುಖಂಡನಿಂದ ಮತ್ತೊಂದು ಮಾಹಿತಿ ಲಭ್ಯವಾಗಿದ್ದು, ಮಾಜಿ ಸಚಿವನ್ನ ಹತ್ಯೆಗೆ 5 ಕೋಟಿ ಸುಪಾರಿ ನೀಡಲಾಗಿತ್ತು ಎಂದು ಹೇಳಿದ್ದಾನೆ.
5 ಕೋಟಿ ಸುಪಾರಿ ನೀಡಿದ್ದನ್ನು ಬಂಧಿತ ಮಾವೋವಾದಿ ನಾಯಕ ಪಹಾನ್ ಒಪ್ಪಿಕೊಂಡಿದ್ದು, ಮಾಜಿ ಸಚಿವ  ಗೋಪಾಲಕೃಷ್ಣ ಪಟಾರ್ ಸುಪಾರಿ ನೀಡಿದ್ದರು ಎಂದು ಹೇಳಿರುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. 2008ರಲ್ಲಿ ನಡೆದ ಜೆಡಿಯು ಶಾಸಕ ರಮೇಶ್ ಮುಂಡಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಮಾಜಿ ಸಚಿವ ಗೋಪಾಲಕೃಷ್ಣ ಪಟಾರ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಅ.09 ರಂದು ಬಂಧಿಸಿತ್ತು. 
ತಮ್ಮ ರಾಜಕೀಯ ವಿರೋಧಿಯನ್ನು ಹತ್ಯೆ ಮಾಡಲು ನಕ್ಸಲರೊಂದಿಗೆ ಕೈಜೋಡಿಸಿದ ಆರೋಪದ ಮೇಲೆ ಪಟಾರ್ ಅಲಿಯಾಸ್ ರಾಜ ಪೆಟೆರ್ 5 ಕೋಟಿ ಸುಪಾರಿ ನೀಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಜುಲೈ 9, 2008ರಲ್ಲಿ ರಮೇಶ್ ಮುಂಡಾ ಅವರು ತಮ್ಮ ಸ್ವಕ್ಷೇತ್ರ ತಮರ್ ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಹತ್ಯೆ ಮಾಡಲಾಗಿತ್ತು. ದಾಳಿಯಲ್ಲಿ ಅವರ ಇಬ್ಬರು ಗನ್ ಮ್ಯಾನ್ ಗಳು ಸಹ ಮೃತಪಟ್ಟಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Live: Bihar Election Results 2025: ಮ್ಯಾಜಿಕ್ ಸಂಖ್ಯೆ 122 ಮೀರಿ 166 ಸ್ಥಾನಗಳಲ್ಲಿ NDA ಮುನ್ನಡೆ; ಇಂಡಿಯಾ ಬಣ 59 ಸ್ಥಾನಗಳಲ್ಲಿ ಮುಂದೆ

Bihar trends- ಬಿಹಾರ ಮತ ಎಣಿಕೆ ಪ್ರಗತಿಯಲ್ಲಿ, ಆರಂಭಿಕ ಟ್ರೆಂಡ್ ನಲ್ಲಿ NDA ಮುನ್ನಡೆ, ಮಹಾಘಟಬಂಧನ್ ಹಿನ್ನಡೆ

Bihar Election Results 2025: ಮತ ಎಣಿಕೆ ಆರಂಭ, ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್, ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್

Bihar Election Results 2025: ಇಂದು ಬಿಹಾರ ಚುನಾವಣೆ ಮತ ಎಣಿಕೆ, ಕೆಲವೇ ಹೊತ್ತಿನಲ್ಲಿ ಭವಿಷ್ಯ ನಿರ್ಧಾರ; ಗೆಲುವಿನ 'ಹಾರ' ಯಾರ ಪಾಲು?

'ನಮಗೆ ಆತುರವಿಲ್ಲ, ಪಕ್ಷ ಕಟ್ಟಲು ರಕ್ತ -ಬೆವರು ಸುರಿಸಿದ್ದೇವೆ: ಅಧಿಕಾರಕ್ಕಾಗಿ ಇನ್ನೂ 5 ವರ್ಷ ಕಾಯುತ್ತೇವೆ; ಸಮ್ಮಿಶ್ರ ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ'

SCROLL FOR NEXT