ಗುರುದಾಸ್ ಪುರ ಉಪ ಚುನಾವಣೆಗೆ ಬಿಜೆಪಿ ಸಿದ್ದತೆ 
ದೇಶ

ಗುರುದಾಸ್ ಪುರ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಹೆಸರು ಇಂದು ಬಹಿರಂಗ

ಗುರುದಾಸ್ ಪುರ್ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ನಡೆಸುತ್ತಿರುವ ಬಿಜೆಪಿಗೆ ಶ್ರೀ ಶ್ರೀ ರವಿಶಂಕರ್ ಬೆಂಬಲಿತ ಕವಿತಾ ಖನ್ನಾ ಮತ್ತು ..........

ನವದೆಹಲಿ: ಗುರುದಾಸ್ ಪುರ್ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ನಡೆಸುತ್ತಿರುವ ಬಿಜೆಪಿಗೆ ಶ್ರೀ ಶ್ರೀ ರವಿಶಂಕರ್ ಬೆಂಬಲಿತ  ಕವಿತಾ ಖನ್ನಾ  ಮತ್ತು ರಾಮ್ ದೇವ್ ಬೆಂಬಲಿತ ಸ್ವರಣ್ ಸಲಾರಿಯಾ ಅವರ ನಡುವೆ ಯಾರನ್ನು ಅಂತಿಮಗೊಳಿಸಲಿದೆ ಎನ್ನುವುದು ಕುತೂಹಲ ಮೂಡಿಸಿದೆ
ಅಕ್ಟೋಬರ್ 11 ರಂದು ಉಪಚುನಾವಣೆ ನಡೆಯಲಿದ್ದು ಇಂದು  ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅನಾವರಣಗೊಳಿಸಲಿದೆ.
ನಟ, ರಾಜಕಾರಣಿ ವಿನೋದ್ ಖನ್ನಾ ಅವರ ನಿಧನದ ದ ಕಾರಣ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷವು ಪಂಜಾಬ್ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸುನೀಲ್ ಜಖರ್ ಅವರನ್ನು ಗುರುದಾಸ್ ಪುರ್ ಅಭ್ಯರ್ಥಿಯನ್ನಾಗಿ ಮಾಡುವ ಯೋಚನೆಯಲ್ಲಿದೆ. 
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಸುನೀಲ್ ಹೆಸರನ್ನು ಅಂತಿಮ ಗೊಳಿಸಿದ ಬಳಿಕ ದೆಹಲಿಯಲ್ಲಿ ಪಕ್ಷದ ಉನ್ನತ ಮೂಲಗಳು ಈ ಸುದ್ದಿಯನ್ನು ಪ್ರಕಟಿಸಿದೆ. ಜಖರ್  ಹೆಸರನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂದ ಶಿಫಾರಸು ಮಾಡಿದ್ದರು.
ಬಿಜೆಪಿಯ ಯಲ್ಲಿ, ಗುರುದಾಸ್ ಪುರ್ ಲೋಕಸಭಾ ಕ್ಷೇತ್ರಕ್ಕಾಗಿ 2014 ರಲ್ಲಿ ನನಡೆದಂತೆಯೇ ಪಕ್ಷದ ಒಳಗೇ ಪವರ್ ಪಾಲಿಟಿಕ್ಸ್ ನಡೆಯುತ್ತದೆ ಎಂದು ಪಕ್ಷದ ಆಂತರಿಕ ಮೂಲಗಳೀಂದ ತಿಳಿದು ಬಂದಿದೆ.
2009 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಸಿಂಗ್ ಬಾಜ್ವಾ ಅವರ ಎದುರಲ್ಲಿ ವಿನೋದ್ ಖನ್ನಾ ಸೋತಿದ್ದರು. 2014 ರಲ್ಲಿ, ರಾಮ್ ದೇವ್, ಕೈಗಾರಿಕೋದ್ಯಮಿ ಸ್ವರಣ್ ಸಲಾರಿಯಾ ಗೆ  ಚುನಾವಣೆ ಅಭ್ಯರ್ಥಿಯಾಗಲು ಮನವಿ ಮಾಡಿದ್ದರು. ಆದರೆ, ಪಕ್ಷದ ಹಿರಿಯ ಮುಖಂದ ಎಲ್.ಕೆ.ಅಡ್ವಾಣಿ ಖನ್ನಾ ಅವರನ್ನು ಇದೇ ಕ್ಷೇತ್ರದಿಂದ ಮತ್ತೆ ಚುನಾವಣೆಗೆ ನಿಲ್ಲುವಂತೆ ಹೇಳಿದ್ದರು. 
ಪಕ್ಷದ ಮಾರ್ಗದರ್ಶನ ಮಂದಳಿ ಸದಸ್ಯರಾಗಿ ಆಯ್ಕೆಯಾದ ನಂತರ ಪಕ್ಷದ ವ್ಯವಹಾರದಿಂದ ದೂರವಿರಲು ಅಡ್ವಾಣಿ ಬಯಸಿದರು. ಕವಿತಾ ಖನ್ನಾ ಅವರು ಆರ್ಟ್ ಆಫ್ ಲಿವಿಂಗ್ ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರ ಬೆಂಬಲ ಹೊಂದಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT