ಬಂಧಿತ ಆರೋಪಿಗಳು 
ದೇಶ

ಗಲ್ಫ್ ರಾಷ್ಟ್ರಗಳ ಶೇಖ್ ಗಳೊಂದಿಗೆ ವಿವಾಹ ಜಾಲ ಪತ್ತೆ ಹಚ್ಚಿದ ಪೊಲೀಸರು: 20 ಮಂದಿ ಬಂಧನ

ಮದುವೆ ಹೆಸರಿನಲ್ಲಿ ಹೆಣ್ಣು ಮಕ್ಕಳ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಹೈದರಾಬಾದ್ ಪೊಲೀಸರು 20 ಮಂದಿಯನ್ನು ವಶಕ್ಕೆ ...

ಹೈದರಾಬಾದ್ : ಮದುವೆ ಹೆಸರಿನಲ್ಲಿ ಹೆಣ್ಣು ಮಕ್ಕಳ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಹೈದರಾಬಾದ್ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಆಗಸ್ಟ್ ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಓಮಾನಿ ಶೇಕ್ ಎಂಬಾತನೊಂದಿಗೆ ವಿವಾಹ ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಐವರು ಓಮಾನಿ ಮತ್ತು ಮೂವರು ಖತಾರಿ ಶೇಕ್ ಗಳು, ಮೂವರು ಖಾಜಿಗಳು, ನಾಲ್ಕು ಮಂದಿ ಲಾಡ್ಜ್ ಮಾಲೀಕರು, ಹಾಗೂ ಐವರು ಮ್ಯಾರೇಜ್ ಬ್ರೋಕರ್ ಗಳನ್ನು ಬಂಧಿಸಿದ್ದಾರೆ. ಭಾನುವಾರ ಮುಂಬಯಿಯಲ್ಲಿ  ಫರೀದ್ ಅಹ್ಮದ್ ಖಾನ್ ಎಂಬ ಖಾಜಿಗಳ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದರು. 
ಬಡಕುಟುಂಬದ ಹೆಣ್ಣುಮಕ್ಕಳಿಗೆ ದುಡ್ಡಿನ ಆಮಿಷ ತೋರಿಸಿ ನಂತರ ಖಾಜಿಗಳ ಸಹಾಯದೊಂದಿಗೆ ವಿವಾಹ ನಡೆಸುತ್ತವೆ. ವಿವಾಹದ ಸಂದರ್ಭದಲ್ಲಿಯೇ ‘ತಲಾಖ್’ನ ಖಾಲಿ ಹಾಳೆಗಳಿಗೆ ಮಹಿಳೆ/ಬಾಲಕಿಯ ಬಳಿ ಸಹಿ ಹಾಕಿಸಿಕೊಳ್ಳಲಾಗುತ್ತದೆ. ನಂತರ ಇವರನ್ನು ವಿದೇಶಿಗರಿಗೆ ಮಾರಾಟ ಮಾಡಲಾಗುತ್ತದೆ. 
ಇದಕ್ಕಾಗಿ ಅರಬ್  ಜನ 3 ರಿಂದ 10 ಲಕ್ಷ ರು ಖರ್ಚು ಮಾಡುತ್ತಾರೆ, ಇದರಲ್ಲಿ ಹೆಚ್ಚಿನ ಹಣ ಬ್ರೋಕರ್ ಗಳಿಗೆ ಮತ್ತು ಖಾಜಿಗಳಿಗೆ ಸೇರುತ್ತದೆ. ವಿವಾಹವಾಗುವ ಹೆಣ್ಣು ಮಗಳ ಕುಟುಂಬಕ್ಕೆ ಕೇವಲ ಸ್ವಲ್ಪ ಹಣ ಮಾತ್ರ ಸಿಗುತ್ತದೆ ಎಂದು ದಕ್ಷಿಣ ವಲಯದ ಡಿಸಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ. ಹೈದಾರಾಬಾದ್ ನಂತ ಈ ಜಾಲ ಹರಡಿದ್ದು,  ಶಂಕಿತ 48 ಮಂದಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.  
ಒಪ್ಪಂದದ ವಿವಾಹದ ಮೂಲಕ ಇವರು ಕನಿಷ್ಠ 20 ಮಹಿಳೆಯರು ಹಾಗೂ ಬಾಲಕಿಯರನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT