ರಸನಾ ಗ್ರಾಮದಲ್ಲಿರುವ ಅಪ್ರಾಪ್ತ ಬಾಲಕಿ ಮನೆ ಈಗ ಮುಚ್ಚಿರುವುದು 
ದೇಶ

ಕತುವಾ ಬಾಲಕಿ ಮೇಲೆ ಅತ್ಯಾಚಾರ, ಕೊಲೆ: ವಲಸೆ ಹೋಗುತ್ತಿರುವ ಅಲೆಮಾರಿ ಬೇಕರ್ವಾಲ್ ಜನಾಂಗ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕ್ರೂರ ಕೊಲೆಯಿಂದ ಕತುವಾ ಜಿಲ್ಲೆಯ...

ರಸಾನ(ಕತುವಾ)ಜಮ್ಮು-ಕಾಶ್ಮೀರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕ್ರೂರ ಕೊಲೆಯಿಂದ ಕತುವಾ ಜಿಲ್ಲೆಯ ಗಡಿ ರಸನಾ ಗ್ರಾಮದಲ್ಲಿನ ಅಲೆಮಾರಿ ಬಾಕರ್ವಾಲ್ ಸಮುದಾಯದ ಮಂದಿ ಆರಂಭಿಕ ಋತುಮಾನ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ.
ಕಳೆದ 40 ವರ್ಷಗಳಲ್ಲಿ ಬೈಸಾಕಿ ಅಂದರೆ ವಿಷು ಹಬ್ಬದ ನಂತರ ವಲಸೆ ಹೋಗುವ ಪದ್ಧತಿ ಈ ಜನಾಂಗದಲ್ಲಿರುತ್ತದೆ. ಆದರೆ ಈ ವರ್ಷ  ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಿಂದಾಗಿ ನಮಗಿಲ್ಲಿ ಬದುಕುವುದೇ ಕಷ್ಟವಾಗುತ್ತಿದೆ. ಅದರಿಂದಾಗಿ ಬೇಗನೆ ವಲಸೆ ಹೋಗಲು ಆರಂಭಿಸಿದ್ದೇವೆ ಎನ್ನುತ್ತಾರೆ 72 ವರ್ಷದ ಮೊಹಮ್ಮದ್ ಜಾನ್.
ಹವಾಮಾನ ಪರಿಸ್ಥತಿಯನ್ನು ನೋಡಿಕೊಂಡು ಕೂಡ ಈ ವರ್ಷ ಬೇಗನೆ ವಲಸೆ ಹೋಗುತ್ತಿದ್ದೇವೆ ಎಂದು ಅವರು ಹೇಳುತ್ತಾರೆ.
ಈ ವರ್ಷ ಹವಾಮಾನ ಕೂಡ ನಮ್ಮ ಅನುಕೂಲಕ್ಕೆ ತಕ್ಕಂತೆ ಇಲ್ಲ. ನಮ್ಮ ಸಮುದಾಯ ನಮಗೆ ಮುಖ್ಯವಾಗಿದೆ. ನಮ್ಮ ಸಮುದಾಯದವರು ಬೇಗನೆ ಜಾಗ ತೊರೆಯಲು ನಿರ್ಧರಿಸಿದ್ದಾರೆ ಎಂದರು.
ಅತ್ಯಾಚಾರಕ್ಕೀಡಾಗಿ ಕೊಲೆಯಾದ ಅಪ್ರಾಪ್ತ ಬಾಲಕಯ ಕುಟುಂಬದವರು ಮತ್ತು ರಾಸನ, ಕೂಟ್ಹ ಮತ್ತು ಪಕ್ಕದ ಗ್ರಾಮಗಳ 35 ಇತರ ಬರೆರ್ವಾಲ್ ಕುಟುಂಬದವರು ಈಗಾಗಲೇ ತಮ್ಮ ಗ್ರಾಮಗಳನ್ನು ತೊರೆದು ಶಿವಾಲಿಕ್ ಬೆಟ್ಟಕ್ಕೆ ಹೋಗಿ ನೆಲೆಸಿದ್ದಾರೆ. ಗ್ರಾಮದಲ್ಲಿ ಕೋಮು ಸೌಹಾರ್ದತೆ ಕೆಲವು ವರ್ಷಗಳ ಹಿಂದೆಯೇ ಬದಲಾಗಿದೆ. ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯಾದರೂ ಕೂಡ ಗ್ರಾಮಗಳ ಬಹುಸಂಖ್ಯಾತ ಸಮುದಾಯಗಳ ಯಾರೊಬ್ಬರೂ ಬಾಲಕಿಯ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ಸೂಚಿಸಲಿಲ್ಲ ಎಂದಿದ್ದಾರೆ.
ಗ್ರಾಮದಲ್ಲಿನ ಹಿಂದೂಗಳು ಬಕೆರ್ವಾಲ್ ಸಮುದಾಯಕ್ಕೆ ಹುಲ್ಲು ಬೆಳೆಸಲು ಜಮೀನುಗಳನ್ನು ನೀಡುತ್ತಿದ್ದರು, ಅದು ಕೂಡ ಕೆಲವು ವರ್ಷಗಳ ಹಿಂದೆ ನಿಂತುಹೋಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಿ ರಾಮ್ ಮಾತುಗಳನ್ನು ಗ್ರಾಮದ ಹಿಂದೂಗಳು ಕೇಳುತ್ತಾರೆ ಎಂದರು ಜಾನ್.
ಕಳೆದ ಜನವರಿ 10ರಂದು ರಸನಾ ಗ್ರಾಮದಲ್ಲಿ 8 ವರ್ಷದ ಬಾಲಕಿ ಕುದುರೆಗಳನ್ನು ಮೇಯಿಸುತ್ತಿದ್ದಾಗ ಆಕೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಕೊಲೆಯ ಪ್ರಮುಖ ಆರೋಪಿ ಸಂಜಿ ರಾಮ್ ಮನೆ ಮತ್ತು ದೇವಸ್ಥಾನದ ಮಧ್ಯೆ ಬಾಲಕಿಯ ಶವ ಒಂದು ವಾರ ಕಳೆದ ಮೇಲೆ ಪತ್ತೆಯಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT