ಆ್ಯಸಿಡ್ ದಾಳಿ ನಡೆಸಿದ ಪ್ರಮುಖ ಆರೋಪಿ ಸೋನು ಪೋಲೀಸರ ವಶದಲ್ಲಿ(ಹಿಂದುಸ್ಥಾನ್ ಟೈಮ್ಸ್ ಚಿತ್ರ) 
ದೇಶ

ಉತ್ತರ ಪ್ರದೇಶ: ಇಬ್ಬರು ಮಹಿಳಾ ಕ್ರೀಡಾಪಟುಗಳ ಮೇಲೆ ಆ್ಯಸಿಡ್ ದಾಳಿ

ಓರ್ವ ಮಹಿಳಾ ಕುಸ್ತಿ ಪಟು ಹಾಗೂ ಇನ್ನೋರ್ವ ಮಹಿಳಾ ಬಾಕ್ಸರ್ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ಮೀರತ್(ಉತ್ತರ ಪ್ರದೇಶ): ಓರ್ವ ಮಹಿಳಾ ಕುಸ್ತಿ ಪಟು ಹಾಗೂ ಇನ್ನೋರ್ವ ಮಹಿಳಾ  ಬಾಕ್ಸರ್ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ಎರಚಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮೂವರು ದುಷ್ಕರ್ಮಿಗಳು ಈ ಕೃತ್ಯ ನಡೆಸಿದರೆನ್ನಲಾಗಿದ್ದು ಪ್ರಧಾನ ಆರೋಪಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಸೋನಿ (27)  ಪ್ರಧಾನ ಆರೋಪಿಯಾಗಿದ್ದಾಳೆ.ಇದೇ ವೇಳೆ ತಪ್ಪಿಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗೆ ಹುಡುಕಾಟ ನಡೆದಿದೆ.
ಘಟನೆ ವಿವರ: ಕೆಲ ದಿನಗಳ ಹಿಂದೆ ಆರೋಪಿ ಸೋನಿ ಜೈಲಿನಲ್ಲಿರುವ ತನ್ನ ತಂದೆಯ ಭೇಟಿಗೆ ತೆರಳಿದ್ದಳು ಆ ವೇಳೆ ಶಾಲು ಎನ್ನುವ ಕುಸ್ತಿ ಪಟು ಸಹ ಜೈಲಿಗೆ ತಂದೆಯನ್ನು ಕಾಣುವ ಸಲುವಾಗಿ ಆಗಮಿಸಿದ್ದಳು. ಆಗ ಸರತಿಯಲ್ಲಿ ನಿಲ್ಲುವ ವಿಚಾರದ ಕುರಿತು ಸೋನಿ ಹಾಗೂ ಶಾಲುವಿನ ನಡುವೆ ಜಗಳವಾಗಿತ್ತು. ಆಗ ಶಾಲುವಿಗೆ ಪಾಠ ಕಲಿಸಲು ಮುಂದಾದ ಸೋನಿ ತನ್ನ ಗೆಳೆಯ ವಿಜಯ್ ಹಾಗೂ ಇನ್ನೊಬ್ಬ ವ್ಯಕ್ತಿಯ ನೆರವಿನಿಂದ ಶಾಲುವಿನ ಮೇಲೆ .ಆ್ಯಸಿಡ್  ಎರಚುವ ಯೋಜನೆ ತಯಾರಿಸಿದ್ದಳು.
ಅದರಂತೆ ಮೀರತ್ ನಲ್ಲಿರುವ ಕ್ರೀಡಾಂಗಣಕ್ಕೆ ಅಭ್ಯಾಸಕ್ಕಾಗಿ ಶಾಲು ತನ್ನ ಗೆಳತಿ, ಬಾಕ್ಸರ್ ಆಗಿರುವ ಗರೀಮಾ (19) ಳೊಡನೆ ಆಗಮಿಸುತ್ತಿದ್ದಾಗ ಸೋನಿ ಹಾಗೂ ಸಹಚರರು ಅವರನ್ನು ಅಡ್ಡಗಟ್ಟಿ ಆ್ಯಸಿಡ್  ಎರಚಿದ್ದಾರೆ.
ಘಟನೆಯಲ್ಲಿ ಶಾಲುವಿನ ಬೆನ್ನಿಗೆ ಶೇ.20ರಷ್ಟು ಸುಟ್ಟ ಘಾಯಗಳಾಗಿದ್ದರೆ ಗರೀಮಾ ಅವರ ಮೊಣಕೈ ಸುಟ್ಟಿದೆ. ಇದೀಗ ಅವರುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಮುಕ್ತ ಮಾರುಕಟ್ಟೆಯಲ್ಲಿ ಆ್ಯಸಿಡ್  ಮಾರಾಟವನ್ನು 2013ರಲ್ಲಿಯೇ ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಹಾಗಿದ್ದೂ ಆರೋಪಿಗಳು ಹೇಗೆ ಆ್ಯಸಿಡ್  ಪಡೆದಿದ್ದಾರೆ ಎನ್ನುವುದನ್ನು ತನಿಖೆ ನಡೆಸಿ ತಿಳಿದುಕೊಳ್ಳಲಾಗುತ್ತದೆ. ನಾಪತ್ತೆಯಾಗಿರುವ ಆರೋಪಿ ವಿಜಯ್ ಆ್ಯಸಿಡ್  ಸರಬರಾಜು ಮಾಡಿದ್ದಾನೆ ಎನ್ನಲಾಗಿದ್ದು ಅವನ ತಂದೆಯನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆಗೆ ಯತ್ನ, ಉದ್ದೇಶಪೂರ್ವಕ ಗಾಯಗೊಳಿಸುವ ಪ್ರಕರಣದಡಿಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ಪೋಲೀಸರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT