ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಸ್ಥಳಗಳನ್ನು ಹಿಂದೂಗಳಿಗೆ ಮರಳಿಸಿ: ಶಿಯಾ ವಕ್ಫ್ ಬೋರ್ಡ್ 
ದೇಶ

ರಾಮಜನ್ಮಭೂಮಿ ಸೇರಿ ಒಂಭತ್ತು ವಿವಾದಿತ ಸ್ಥಳಗಳನ್ನು ಹಿಂದೂಗಳಿಗೆ ಮರಳಿಸಿ: ಶಿಯಾ ವಕ್ಫ್ ಬೋರ್ಡ್

ಹಿಂದೂ ದೇವಾಲಯಗಳನ್ನು ನಾಶಪಡಿಸಿ ಅದರ ಮೇಲೆ ಕಟ್ಟಲಾದ ಮಸೀದಿಗಳನ್ನು ಹಿಂದೂಗಳಿಗೆ ಹಿಂತಿರುಗಿಸಬೇಕು ಎಂದು ಉತ್ತರ ಪ್ರದೇಶದ........

ಲಖನೌ(ಉತ್ತರ ಪ್ರದೇಶ): ಹಿಂದೂ ದೇವಾಲಯಗಳನ್ನು ನಾಶಪಡಿಸಿ ಅದರ ಮೇಲೆ ಕಟ್ಟಲಾದ ಮಸೀದಿಗಳನ್ನು ಹಿಂದೂಗಳಿಗೆ ಹಿಂತಿರುಗಿಸಬೇಕು ಎಂದು  ಉತ್ತರ ಪ್ರದೇಶದ ಶಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ವಸೀಮ್ ರಿಜ್ವಿ ಹೇಳಿದ್ದಾರೆ.
ಅಯೋಧ್ಯಾದ ರಾಮಜನ್ಮಭೂಮಿ ಸೇರಿ ಒಟ್ಟು ಒಂಭತ್ತು ವಿವಾದಿತ ಪ್ರದೇಶಗಳನ್ನು ಹಿಂದೂಗಳಿಗೆ ಮರಳಿಸಬೇಕೆಂದು ಮುಸ್ಲಿಂ ಬೋರ್ಡ್ ಗೆ ಒತ್ತಾಯಿಸಿದ್ದಾರೆ. ಅವರು ಆಲ್-ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಐಪಿಪಿಬಿ) ಅಧ್ಯಕ್ಷ ಮೌಲಾನಾ ರಾಬಿ ಹಸನ್ ನಾದ್ವಿ ಅವರಿಗೆ ಬರೆದ ಪತ್ರದಲ್ಲಿ ಈ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ಇತರರ ಧಾರ್ಮಿಕ ಸ್ಥಳಗಳನ್ನು ನಾಶಪಡಿಸಿ ಮಸೀದಿ ನಿರ್ಮಣ ಮಾಡುವುದು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂಡು ರಿಜ್ವಿ ಅಭಿಪ್ರಾಯ ಪಟ್ಟಿದ್ದಾರೆ. ರಿಜ್ವಿ ತಮ್ಮ ಪತ್ರದಲ್ಲಿ ದೇಶದಾದ್ಯಂತ ಇರುವ ಒಂಭತ್ತು ಧಾರ್ಮಿಕ ವಿವಾದಾತ್ಮಕ ಸ್ಥಳಗಳ ಹೆಸರನ್ನು ಪಟ್ಟಿ ಮಾಡಿದ್ದಾರೆ.
ಅಯೋಧ್ಯಾದ ಬಾಬರಿ ಮಸೀದಿ, ಮಥುರಾದ ಕೇಶವ ಮಂದಿರ, ವಾರಣಾಸಿಯ ವಿಶ್ವನಾಥ ದೇವಾಲಯ, ಜೌನ್ ಪುರದಲ್ಲಿನ ಅಟಲ್  ದೇವ ಮಂದಿರ, ಗುಜರಾತಿನ ಭಾತ್ನಾದ ರುದ್ರ ಮಹಾಲಯ ಮಂದಿರ, ಅಹಮದಾಬಾದ್ ನ ಭದ್ರಕಾಳಿ ಮಂದಿರ, ಪಶ್ಚಿಮ ಬಂಗಾಳದ ಪಾಂಡುವಾದಲ್ಲಿನ ಅದೀನಾ ಮಸೀದಿ, ಮಧ್ಯ ಪ್ರದೇಶದ ವಿದಿಷಾದ ವಿಜಯಾ ದೇವಿ ಮಂದಿರ ಮತ್ತು ದೆಹಲಿಯ ಕುತುಬ್ ಮಿನಾರ್ ಮಸೀದಿಗಳನ್ನು ಹಿಂದುಗಳಿಗೆ ಹಸ್ತಾಂತರಿಸಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಅಯೋಧ್ಯೆಯ ಒಂಭತ್ತು ಮಸೀದಿಗಳು ಮೊಘಲರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಇದೆಲ್ಲವೂ ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ನಿರ್ಮಾಣ ಆಗಿವೆ. ಇಷ್ಟಕ್ಕೂ ಇದು ಮುಸ್ಲೀಂ ಕಾನೂನಿ ರಿತಿಯಾಗಿ ನ್ಯಾಯಸಮ್ಮತವಾಗಿದೆಯೆ ಎಂದು ನಾನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಗೆ ಕೇಲಲು ಬಯಸುತ್ತೇನೆ ಎಂದು .ರಿಜ್ವಿ ಎಎನ್ ಐಗೆ ತಿಳಿಸಿದ್ದಾರೆ.
"ಅದೊಮ್ಮೆ ಅವೆಲ್ಲವೂ ನ್ಯಾಯಸಮ್ಮತವಾಗಿದ್ದಲ್ಲಿ ಸರಿ, ಹಾಗಿಲ್ಲವಾದರೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಬೇಕಾಗುವುದು. ಮತ್ತು ಒಮ್ಮತಾಭಿಪ್ರಾಯಕ್ಕೆ ಬರಬೇಕಾಗುತ್ತದೆ." ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT