ಅನ್ವರ್ ಜಲಾಲ್ಪುರಿ 
ದೇಶ

ಭಗವದ್ಗೀತೆಯನ್ನು ಉರ್ದುವಿಗೆ ಭಾಷಾಂತರಿಸಿದ್ದ ಕವಿ ಅನ್ವರ್ ಜಲಾಲ್ಪುರಿ ನಿಧನ

ಖ್ಯಾತ ಉರ್ದು ಕವಿ ಅನ್ವರ್ ಜಲಾಲ್ಪುರಿ (71) ಮೆದುಳಿನ ಆಘಾತದಿಂದ ಮೃತರಾಗಿದ್ದಾರೆ.

ನವದೆಹಲಿ: ಖ್ಯಾತ ಉರ್ದು ಕವಿ ಅನ್ವರ್ ಜಲಾಲ್ಪುರಿ (71) ಮೆದುಳಿನ ಆಘಾತದಿಂದ ಮೃತರಾಗಿದ್ದಾರೆ. 
ಕಳೆದ ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೀಡಾದ ಅನ್ವರ್ ಅವರನ್ನು ಲಖ್ನೋ ದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಗವದ್ಗೀತೆಯನ್ನು ಉರ್ದು ಭಾಷೆಗೆ ಅನುವಾದಿಸಿದ್ದ ಅನ್ವರ್ ಇದಕ್ಕಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದರು.
ಇಷ್ಟೇ ಅಲ್ಲದೆ ಅನ್ವರ್ ಅವರಿಗೆ ಸಿನಿಮಾರಂಗದ ಸಂಪರ್ಕವೂ ಇದ್ದು ಬಾಲಿವುಡ್ ನ 'ದೊ ಇಷ್ಕಿಯಾ' ಚಿತ್ರಕ್ಕಾಗಿ ನಾಸಿರುದ್ದೀನ್ ಶಾ, ಅರ್ಷಾದ್ ವರ್ಸಿ, ಮಾಧುರಿ ದೀಕ್ಷಿತ್ ವರೊಡನೆ ಕೆಲಸ ಮಾಡಿದ್ದರು. ಆದರೆ 2017ರ ನವೆಂಬರ್ ನಲ್ಲಿ ಅವರ ಮಗಳು ಮೃತರಾದ ನಂತರ ಅನ್ವರ್ ಸಾಕಷ್ಟು ಚಿಂತೆಗೀಡಾಗಿದ್ದು ದುಃಖದಿಂದ ಕುಗ್ಗಿ ಹೋಗಿದ್ದರು.
ಮೃತರ ಅಂತ್ಯಕ್ರಿಯೆಗಳು ಅವರ ಹುಟ್ಟೂರಾದ ಜಲಾಲ್ಪುರದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT