ಅನ್ವರ್ ಜಲಾಲ್ಪುರಿ 
ದೇಶ

ಭಗವದ್ಗೀತೆಯನ್ನು ಉರ್ದುವಿಗೆ ಭಾಷಾಂತರಿಸಿದ್ದ ಕವಿ ಅನ್ವರ್ ಜಲಾಲ್ಪುರಿ ನಿಧನ

ಖ್ಯಾತ ಉರ್ದು ಕವಿ ಅನ್ವರ್ ಜಲಾಲ್ಪುರಿ (71) ಮೆದುಳಿನ ಆಘಾತದಿಂದ ಮೃತರಾಗಿದ್ದಾರೆ.

ನವದೆಹಲಿ: ಖ್ಯಾತ ಉರ್ದು ಕವಿ ಅನ್ವರ್ ಜಲಾಲ್ಪುರಿ (71) ಮೆದುಳಿನ ಆಘಾತದಿಂದ ಮೃತರಾಗಿದ್ದಾರೆ. 
ಕಳೆದ ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೀಡಾದ ಅನ್ವರ್ ಅವರನ್ನು ಲಖ್ನೋ ದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಗವದ್ಗೀತೆಯನ್ನು ಉರ್ದು ಭಾಷೆಗೆ ಅನುವಾದಿಸಿದ್ದ ಅನ್ವರ್ ಇದಕ್ಕಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದರು.
ಇಷ್ಟೇ ಅಲ್ಲದೆ ಅನ್ವರ್ ಅವರಿಗೆ ಸಿನಿಮಾರಂಗದ ಸಂಪರ್ಕವೂ ಇದ್ದು ಬಾಲಿವುಡ್ ನ 'ದೊ ಇಷ್ಕಿಯಾ' ಚಿತ್ರಕ್ಕಾಗಿ ನಾಸಿರುದ್ದೀನ್ ಶಾ, ಅರ್ಷಾದ್ ವರ್ಸಿ, ಮಾಧುರಿ ದೀಕ್ಷಿತ್ ವರೊಡನೆ ಕೆಲಸ ಮಾಡಿದ್ದರು. ಆದರೆ 2017ರ ನವೆಂಬರ್ ನಲ್ಲಿ ಅವರ ಮಗಳು ಮೃತರಾದ ನಂತರ ಅನ್ವರ್ ಸಾಕಷ್ಟು ಚಿಂತೆಗೀಡಾಗಿದ್ದು ದುಃಖದಿಂದ ಕುಗ್ಗಿ ಹೋಗಿದ್ದರು.
ಮೃತರ ಅಂತ್ಯಕ್ರಿಯೆಗಳು ಅವರ ಹುಟ್ಟೂರಾದ ಜಲಾಲ್ಪುರದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ