ಸಂಗ್ರಹ ಚಿತ್ರ 
ದೇಶ

ಸೇನಾ ನಿರ್ವಹಣೆಗೇ ರಕ್ಷಣಾ ನಿಧಿ ಬಳಕೆಯಾಗುತ್ತದೆ ಎಂಬುದು ಸುಳ್ಳು: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ಸರ್ಕಾರದ ಬಜೆಟ್ ನಲ್ಲಿ ರಕ್ಷಣಾ ಇಲಾಖೆಗೆ ನೀಡಲಾಗುವ ಸಂಪೂರ್ಣ ಹಣ ಸೇನೆಯ ನಿರ್ವಹಣೆಗೇ ಬಳಕೆಯಾಗುತ್ತದೆ ಎಂಬುದು ಸುಳ್ಳು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.

ನವದೆಹಲಿ: ಸರ್ಕಾರದ ಬಜೆಟ್ ನಲ್ಲಿ ರಕ್ಷಣಾ ಇಲಾಖೆಗೆ ನೀಡಲಾಗುವ ಸಂಪೂರ್ಣ ಹಣ ಸೇನೆಯ ನಿರ್ವಹಣೆಗೇ ಬಳಕೆಯಾಗುತ್ತದೆ ಎಂಬುದು ಸುಳ್ಳು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ಬಜೆಟ್‌ನಲ್ಲಿ ಒದಗಿಸಲಾಗುವ ರಕ್ಷಣಾ ನಿಧಿಯನ್ನು ಸಂಪೂರ್ಣವಾಗಿ ಸೇನೆಯನ್ನು ನಿರ್ವಹಿಸುವುದಕ್ಕೇ ಬಳಸಲಾಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಇದು ತಪ್ಪು. ರಕ್ಷಣೆ ನೀಡಲಾಗುವ ನಿಧಿಯಲ್ಲಿ ಶೇ. 35ರಷ್ಟು ಹಣ ರಾಷ್ಟ್ರ ನಿರ್ಮಾಣಕ್ಕೆಂದು ವಿನಿಯೋಗವಾಗುತ್ತದೆ. ಉದಾಹರಣೆಯಾಗಿ ದೇಶದ ಗಡಿ ಪ್ರದೇಶಗಳಲ್ಲಿ ನಿರ್ಮಿಸಲಾಗುವ ರಸ್ತೆ, ಸೇತುವೆ ಇಂತಹ ಮೊದಲಾದ ಮೂಲ ಸೌಕರ್ಯಗಳಿಗಾಗಿ ವಿನಿಯೋಗಿಸಲಾಗುತ್ತದೆ. ಈ ಮೂಲ ಸೌಕರ್ಯಗಳಿಂದ ಗಡಿ ಭಾಗದಲ್ಲಿ ಅತ್ಯಂತ ದುರ್ಗಮ ಪ್ರದೇಶಗಳಲ್ಲಿ ವಾಸವಾಗಿರುವ ಭಾರತೀಯರನ್ನು ನಾವು ಮುಖ್ಯ ವಾಹಿನಿಗೆ ತರಲು ಸಾಧ್ಯವಾಗುತ್ತದೆ. ದೇಶವನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 
ಇದೇ ವೇಳೆ ಚೀನಾ ಸೇನೆಯನ್ನು ಉದಾಹರಿಸಿದ ಬಿಪಿನ್ ರಾವತ್ ಅವರು, ಚೀನಾ ಸೇನೆ ಇಂದು ವಿಶ್ವದಲ್ಲಿ ಬಲಿಷ್ಟವಾಗಿದೆ ಎಂದರೆ ಅದಕ್ಕೆ ವಿತ್ತೀಯ ಕೊರತೆ ಇಲ್ಲದಿರುವುದೇ ಕಾರಣ. ಆರ್ಥಿಕ ಕೊರತೆ ಸೇನೆಯನ್ನು ಕಾಡಬಾರದು ಎಂಬ ಚೀನಾ ದೇಶದ ನಡೆಯೇ ಆ ದೇಶ ಸೇನೆಯನ್ನು ಇಂದು ಬಲಿಷ್ಟವಾಗಿರಿಸಿದೆ. ಇಂದು ಅಮೆರಿಕಕ್ಕೂ ಚೀನಾ ಸೇನೆ ಸೆಡ್ಡು ಹೊಡೆಯುತ್ತಿದೆ ಎಂದು ಹೇಳಿದರು.
ಅಂತೆಯೇ ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡುವ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ ಜನರಲ್‌ ರಾವತ್‌, "ನೀವು ನಿಮ್ಮ ದಾಳಿಯನ್ನು ಮೇಲ್ಮಟ್ಟಕ್ಕೆ ಒಯ್ದರೆ ನಾವೂ ನಮ್ಮ ಪ್ರತಿ ದಾಳಿಯನ್ನು ಮೇಲ್ಮಟ್ಟಕ್ಕೆ ಒಯ್ಯಲೇಬೇಕಾಗುತ್ತದೆ. ಗಡಿಯಲ್ಲಿನ ಚಕಮಕಿಯಿಂದ ಸೇನೆಗಿಂತಲೂ ಹೆಚ್ಚಾಗಿ ಜನರು ವ್ಯಾಪಕ ನಾಶ, ನಷ್ಟ,ಹಾನಿ ಅನುಭವಿಸುತ್ತಿದ್ದಾರೆ ಎಂದು ರಾವತ್ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT