ಸಾಂದರ್ಭಿಕ ಚಿತ್ರ 
ದೇಶ

2019 ಲೋಕಸಭಾ ಚುನಾವಣೆಗೆ ಫೇಸ್‏ಬುಕ್ ನಿಂದ 'ನೂರಾರು ಜನರ' ಟಾಸ್ಕ್ ಫೋರ್ಸ್ ಸ್ಥಾಪನೆ!

2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ದುರುಪಯೋಗವಾಗದಂತೆ ತಡೆಯಲು ನೂರಾರು ಜನರನ್ನು ಹೊಂದಿರುವ ಕಾರ್ಯಪಡೆ ಸ್ಥಾಪಿಸುವುದಾಗಿ ಫೇಸ್ ಬುಕ್ ಇಂದು ಹೇಳಿದೆ.

ನವದೆಹಲಿ: 2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್  ದುರುಪಯೋಗವಾಗದಂತೆ  ತಡೆಯಲು  ನೂರಾರು ಜನರನ್ನು ಹೊಂದಿರುವ ಕಾರ್ಯಪಡೆ ಸ್ಥಾಪಿಸುವುದಾಗಿ ಫೇಸ್ ಬುಕ್ ಇಂದು ಹೇಳಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ  ರಾಜಕೀಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ತಜ್ಞರ ಗುಂಪನ್ನು ಒಂದುಗೂಡಿಸುವುದಾಗಿ  ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ ನೀತಿ ( ಇಎಂಇಎ) ಉಪಾಧ್ಯಕ್ಷ ರಿಚರ್ಡ್ ಅಲ್ಲನ್ ತಿಳಿಸಿದ್ದಾರೆ.

ಈ ಗುಂಪಿನಲ್ಲಿ ಭದ್ರತಾ ಹಾಗೂ ವಿಷಯ ಸಂಬಂಧಿತ ಕಟೆಂಟ್ ಪರಿಣಿತರು ಇರಲಿದ್ದು, ಭಾರತದಲ್ಲಿ ಚುನಾವಣಾ-ಸಂಬಂಧಿತ ದುರುಪಯೋಗದ ಎಲ್ಲಾ ರೀತಿಯ ರೂಪಗಳನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸಲಿದ್ದಾರೆ ಎಂದು  ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡು ಅಲ್ಲನ್ ಮಾತನಾಡುತ್ತಿದ್ದರು.

ನೈಜ ರಾಜಕೀಯ ಸುದ್ದಿಗಳು ಹಾಗೂ ರಾಜಕೀಯ ಪ್ರಚಾರ ಎಂಬುದಾಗಿ ಪ್ರತ್ಯೇಕಿಸಬೇಕಾದದ್ದು, ಕಾರ್ಯಪಡೆಯ ಪ್ರಮುಖ ಸವಾಲಾಗಿರುತ್ತದೆ. ಈ ತಂಡದಲ್ಲಿ ಹೆಚ್ಚಿನವರೂ ದೇಶವಾಸಿಗಳೇ ಇರಲಿದ್ದು,ಚುನಾವಣೆಗೆ ಸಂಬಂಧಿಸಿದ ವಿಷಯಗಳಿಗೆ  ಕಂಪನಿ ಮತ್ತು ಹೊಸದಾಗಿ ನೇಮಕಗೊಂಡಿರುವ ಕೆಲಸಗಾರರು ಇಬ್ಬರೂ ಕೆಲಸ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.

2016ರ  ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ರಷ್ಯಾಗೆ ಸಂಬಂಧಿಸಿದ ಖಾತೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ  ಒಡಕನ್ನುಂಟುಮಾಡುವಂತಹ ಸಂದೇಶಗಳನ್ನು ಹರಡಲಾಗುತ್ತಿದೆ ಎಂದು ಅಮೆರಿಕಾ ಆರೋಪಿಸಿದ ನಂತರ ಫೇಸ್ ಬುಕ್ ತೀವ್ರ ರೀತಿಯ ಪರಿಶೀಲನೆ ನಡೆಸುತ್ತಿದೆ.
ಭಾರತ ಸೇರಿದಂತೆ ವಿಶ್ವದ ಎಲ್ಲ ಕಡೆಗಳಲ್ಲಿಯೂ ಮುಕ್ತ ಹಾಗೂ ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಯಲು ಫೇಸ್ ಬುಕ್ ನೆರವು ನೀಡಲಿದೆ ಎಂದು ಅಲ್ಲನ್ ಹೇಳಿದರು.
ಭಾರತದಿಂದ 12 ಸೇರಿದಂತೆ ವಿಶ್ವದ 50 ಕ್ಕೂ ಹೆಚ್ಚು ಭಾಷೆಗಳಲ್ಲಿನ  ವಿಷಯವನ್ನು  ಸಮುದಾಯ ಕಾರ್ಯಾಚರಣೆ" ತಂಡದ ಸದಸ್ಯರು  ಪರಿಶೀಲಿಸಲಿದ್ದಾರೆ. 2018ರೊಳಗೆ  ಸುಮಾರು 20 ಸಾವಿರ ಜನರು ಈ ಕೆಲಸ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT