ಸಾಂದರ್ಭಿಕ ಚಿತ್ರ 
ದೇಶ

2019 ಲೋಕಸಭಾ ಚುನಾವಣೆಗೆ ಫೇಸ್‏ಬುಕ್ ನಿಂದ 'ನೂರಾರು ಜನರ' ಟಾಸ್ಕ್ ಫೋರ್ಸ್ ಸ್ಥಾಪನೆ!

2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ದುರುಪಯೋಗವಾಗದಂತೆ ತಡೆಯಲು ನೂರಾರು ಜನರನ್ನು ಹೊಂದಿರುವ ಕಾರ್ಯಪಡೆ ಸ್ಥಾಪಿಸುವುದಾಗಿ ಫೇಸ್ ಬುಕ್ ಇಂದು ಹೇಳಿದೆ.

ನವದೆಹಲಿ: 2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್  ದುರುಪಯೋಗವಾಗದಂತೆ  ತಡೆಯಲು  ನೂರಾರು ಜನರನ್ನು ಹೊಂದಿರುವ ಕಾರ್ಯಪಡೆ ಸ್ಥಾಪಿಸುವುದಾಗಿ ಫೇಸ್ ಬುಕ್ ಇಂದು ಹೇಳಿದೆ.

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ  ರಾಜಕೀಯ ಪಕ್ಷಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ತಜ್ಞರ ಗುಂಪನ್ನು ಒಂದುಗೂಡಿಸುವುದಾಗಿ  ಯುರೋಪ್, ಮಧ್ಯ ಪೂರ್ವ ಮತ್ತು ಆಫ್ರಿಕಾ ನೀತಿ ( ಇಎಂಇಎ) ಉಪಾಧ್ಯಕ್ಷ ರಿಚರ್ಡ್ ಅಲ್ಲನ್ ತಿಳಿಸಿದ್ದಾರೆ.

ಈ ಗುಂಪಿನಲ್ಲಿ ಭದ್ರತಾ ಹಾಗೂ ವಿಷಯ ಸಂಬಂಧಿತ ಕಟೆಂಟ್ ಪರಿಣಿತರು ಇರಲಿದ್ದು, ಭಾರತದಲ್ಲಿ ಚುನಾವಣಾ-ಸಂಬಂಧಿತ ದುರುಪಯೋಗದ ಎಲ್ಲಾ ರೀತಿಯ ರೂಪಗಳನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸಲಿದ್ದಾರೆ ಎಂದು  ಕಾರ್ಯಾಗಾರವೊಂದರಲ್ಲಿ ಪಾಲ್ಗೊಂಡು ಅಲ್ಲನ್ ಮಾತನಾಡುತ್ತಿದ್ದರು.

ನೈಜ ರಾಜಕೀಯ ಸುದ್ದಿಗಳು ಹಾಗೂ ರಾಜಕೀಯ ಪ್ರಚಾರ ಎಂಬುದಾಗಿ ಪ್ರತ್ಯೇಕಿಸಬೇಕಾದದ್ದು, ಕಾರ್ಯಪಡೆಯ ಪ್ರಮುಖ ಸವಾಲಾಗಿರುತ್ತದೆ. ಈ ತಂಡದಲ್ಲಿ ಹೆಚ್ಚಿನವರೂ ದೇಶವಾಸಿಗಳೇ ಇರಲಿದ್ದು,ಚುನಾವಣೆಗೆ ಸಂಬಂಧಿಸಿದ ವಿಷಯಗಳಿಗೆ  ಕಂಪನಿ ಮತ್ತು ಹೊಸದಾಗಿ ನೇಮಕಗೊಂಡಿರುವ ಕೆಲಸಗಾರರು ಇಬ್ಬರೂ ಕೆಲಸ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.

2016ರ  ಅಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ರಷ್ಯಾಗೆ ಸಂಬಂಧಿಸಿದ ಖಾತೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ  ಒಡಕನ್ನುಂಟುಮಾಡುವಂತಹ ಸಂದೇಶಗಳನ್ನು ಹರಡಲಾಗುತ್ತಿದೆ ಎಂದು ಅಮೆರಿಕಾ ಆರೋಪಿಸಿದ ನಂತರ ಫೇಸ್ ಬುಕ್ ತೀವ್ರ ರೀತಿಯ ಪರಿಶೀಲನೆ ನಡೆಸುತ್ತಿದೆ.
ಭಾರತ ಸೇರಿದಂತೆ ವಿಶ್ವದ ಎಲ್ಲ ಕಡೆಗಳಲ್ಲಿಯೂ ಮುಕ್ತ ಹಾಗೂ ಪಾರದರ್ಶಕ ರೀತಿಯಲ್ಲಿ ಚುನಾವಣೆ ನಡೆಯಲು ಫೇಸ್ ಬುಕ್ ನೆರವು ನೀಡಲಿದೆ ಎಂದು ಅಲ್ಲನ್ ಹೇಳಿದರು.
ಭಾರತದಿಂದ 12 ಸೇರಿದಂತೆ ವಿಶ್ವದ 50 ಕ್ಕೂ ಹೆಚ್ಚು ಭಾಷೆಗಳಲ್ಲಿನ  ವಿಷಯವನ್ನು  ಸಮುದಾಯ ಕಾರ್ಯಾಚರಣೆ" ತಂಡದ ಸದಸ್ಯರು  ಪರಿಶೀಲಿಸಲಿದ್ದಾರೆ. 2018ರೊಳಗೆ  ಸುಮಾರು 20 ಸಾವಿರ ಜನರು ಈ ಕೆಲಸ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT