ಜಮ್ಮು: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಸೈನಿಕರ ಪುಂಡಾಟಿಕೆ ಮಿತಿ ಮೀರಿದೆ. ಅಂತಾರಾಷ್ಟ್ರೀಯ ಗಡಿ ಪ್ರದೇಶದ ಬಳಿ ಬಿಎಸ್ ಎಫ್ ಯೋಧರೊಬ್ಬರ ಕತ್ತನ್ನು ಬರ್ಬರವಾಗಿ ಸೀಳಿ ಕ್ರೌರ್ಯ ಪ್ರದರ್ಶಿಸಿದ್ದಾರೆ. ಈ ಘಟನೆ ಉಭಯ ದೇಶಗಳ ನಡುವೆ ಆಕ್ರೋಶ ಭುಗಿಲೆಳುವಂತೆ ಮಾಡಿದೆ.
ರಾಮಗಢ ಸೆಕ್ಟರ್ ನಲ್ಲಿ ನಿನ್ನೆ ದಿನ ಈ ಹೀನ ಕೃತ್ಯ ನಡೆದಿದ್ದು, ಅಂತಾರಾಷ್ಟ್ರೀಯ ಗಡಿ ವಲಯ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲೆಡೆ ಹೈ ಆಲರ್ಟ್ ಘೋಷಿಸಲಾಗಿದೆ. ಗಡಿ ಭದ್ರತಾ ಪಡೆ ಪಾಕಿಸ್ತಾನ ವಲಯದ ಸಹವರ್ತಿ ಪಡೆಯ ವಿರುದ್ಧ ಬಲವಾದ ದೂರನ್ನು ದಾಖಲಿಸಿದೆ.
ಗಸ್ತಿನಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ನರೇಂದರ್ ಕುಮಾರ್ ಅವರ ಕತ್ತು ಸೀಳಿರುವುದಲ್ಲದೇ, ದೇಹಕ್ಕೆ ಮೂರು ಬುಲೆಟ್ ಗಾಯಗಳಾಗವೆ. ಆದರೆ, ಘಟನೆ ನಡೆದು ಆರು ತಾಸು ಕಳೆದರೂ ಪಾಕಿಸ್ತಾನ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಬಿಎಸ್ ಎಫ್ ತಂಡದಿಂದ ಯಾವುದೇ ದಾಳಿ ನಡೆಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ಯೋಧನ ಹುಡುಕಾಟ ನಡೆಸುತ್ತಿರಬೇಕಾದ್ದರೆ ಭಾರತದ ಬಿಎಸ್ ಎಫ್ ಯೋಧ ಕಂಡುಬಂದಿದ್ದು, ಈ ಪ್ರದೇಶದಲ್ಲಿ ಜಲ ವಿವಾದ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಸಮನ್ವಯ ಕ್ರಿಯೆಯಿಂದ ಆತನನ್ನು ಬರದಂತೆ ತಡೆಗಟ್ಟಲಾಗಿದೆ.ನಂತರ ಸೂರ್ಯಾಸ್ತವರೆಗೂ ಕಾಯ್ದು ಕಡು ಸಾಹಸದ ಮೂಲಕ ಪಾರ್ಥಿವ ಶರೀರವನ್ನು ಹೊರಗೆ ತರಲಾಗಿದೆ ಎಂದು ಪಾಕಿಸ್ತಾನದ ರೇಂಜರ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos