ಸುನಂದ ಪುಷ್ಕರ್ 
ದೇಶ

ಸಾಯುವ ಮುನ್ನ ತರೂರ್ ಪತ್ನಿ ಮಾನಸಿಕವಾಗಿ ನೊಂದಿದ್ದರು: ಸುನಂದಾ ಪುಷ್ಕರ್ ವಕೀಲರ ವಾದ

ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ತಾನು ಸಾವನ್ನಪ್ಪುವ ಮುನ್ನ ಮಾನಸಿಕ ಸಂಕಟದಿಂದ ಬಳಲುತ್ತಿದ್ದಳು ಎಂದು ಪುಷ್ಕರ್ ಪರ ವಕೀಲರು ಹೇಳಿದ್ದಾರೆ. ತರೂರ್ ಜತೆಗಿನ ಜಗಳದ ತರುವಾಯ ಆಕೆ ಮಾನಸಿಕವಾಗಿ ನೊಂದಿದ್ದಳೆಂದು  ಅವರು ವಾದಿಸಿದ್ದಾರೆ.

ನವದೆಹಲಿ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ತಾನು ಸಾವನ್ನಪ್ಪುವ ಮುನ್ನ ಮಾನಸಿಕ ಸಂಕಟದಿಂದ ಬಳಲುತ್ತಿದ್ದಳು ಎಂದು ಪುಷ್ಕರ್ ಪರ ವಕೀಲರು ಹೇಳಿದ್ದಾರೆ. ತರೂರ್ ಜತೆಗಿನ ಜಗಳದ ತರುವಾಯ ಆಕೆ ಮಾನಸಿಕವಾಗಿ ನೊಂದಿದ್ದಳೆಂದು  ಅವರು ವಾದಿಸಿದ್ದಾರೆ.

ಮರಣೋತ್ತರ ವರದಿಯನ್ನು ಉಲ್ಲೇಖಿಸಿ, ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಸಿಬಿಐ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಅವರ ಮುಂದೆ ವಾದ ಮಂಡಿಸಿದ್ದಾರೆ. ಅಲ್ಲದೆ ಪುಷ್ಕರ್ ಅವರ ಮೃತದೇಹದ ಹಲವು ಕಡೆ ಗಾಯಗಳ ಗುರುತಿದ್ದು ಅವು ಸುಮಾರು ನಾಲ್ಕು ದಿನ 12 ಗಂಟೆಗಳಷ್ಟು ಹಳೆಯದು ಎಂದು ಅವರು ಉಲ್ಲೇಖಿಸಿದ್ದಾರೆ.

ವಕೀಲರು ಪುಷ್ಕರ್ ಸ್ನೇಹಿತೆ ನಳಿನಿಯವರ ಹೇಳಿಕೆ ಓದಿದ್ದಾರೆ.ಅದರಲ್ಲಿ ತರೂರ್ ಅವರಿಗೆ ತರಾರ್ ಎಂಬ ಮಹಿಳೆಯೊಂದಿಗೆ  ಸಂಬಂಧವಿದೆ ಎಂದು ವಿವರಿಸಲಾಗಿದೆ.

"ನನಗೆ ಪುಷ್ಕರ್ ಅವರಿಂದ ಕರೆ ಬಂದಿತ್ತು. ಅವರು ತನ್ನ ಪತಿ ತರೂರ್ ತರಾರ್ ಎಂಭಾಕೆಯೊಂದಿಗೆ ಹಂಚಿಕೊಂಡ ಕೆಲವು ಸಂದೇಶವನ್ನು ಕಂಡುಕೊಂಡಿದ್ದರು. ಅಲ್ಲದೆ ತರಾರ್ ಶಶಿ ತರೂರ್ ಅವರಿಗೆ ಬರೆದ ಇ-ಮೇಲ್ ಸಹ ಇದ್ದು ಅದರಲ್ಲಿ ಆಕೆ ತರೂರ್ ಅವರನ್ನು "ಮೈ ಡಾರ್ಲಿಂಗ್" ಎಂದು ಸಂಬೋಧಿಸಿದ್ದಾಳೆ." ನಳಿನಿ ಹೇಳಿಕೆಯಲ್ಲಿ ವಿವರಿಸಿದೆ.

ಆದಾಗ್ಯೂ, ತರೂರ್ ಪರವಾಗಿ ಹಾಜರಾದ ವಕೀಲ ವಿಕಾಸ್ ಪಹ್ವಾ ಈ ಆರೋಪವನ್ನು ನಿರಾಕರಿಸಿದ್ದಾರೆ. ಎರಡೂ ಕಡೆಯವರು ಮಂಡಿಸಿದ ವಾದ ಆಲಿಸಿದ ಬಳಿಕ ನ್ಯಾಯಾಧೀಶ ಕುಮಾರ್ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿ ಆದೇಶಿಸಿದರು.ಅಷ್ಟರಲ್ಲಿ ಎಲ್ಲಾ ಸಂಬಂಧಿತ ದಾಖಲೆಗಳನ್ನು ಒಟ್ಟುಗೂಡಿಸಲು ಸಿಕ್ಯೂಷನ್‌ಗೆ ನಿರ್ದೇಶಿಸಿದರು.

ಜನವರಿ 17, 2014 ರ ರಾತ್ರಿ ಪುಷ್ಕರ್ ಅವರು ದೆಹಲಿಯ ಐಷಾರಾಮಿ ಹೋಟೆಲ್‌ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯ ಹತ್ಯೆಯ ನಂತರ, ತರೂರ್ ವಿರುದ್ಧ ಭಾರತೀಯ ದಂಡ ಸಂಹಿತೆಯ 498-ಎ (ಪತಿ ಅಥವಾ ಅವನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವ ಪ್ರಕರಣ) ಸೆಕ್ಷನ್ 306 (ಆತ್ಮಹತ್ಯೆಗಾಗಿ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT