ಪ್ರಧಾನಿ ಮೋದಿಗಾಗಿ ಗುಡಿ ಕಟ್ಟಿದ ತಮಿಳುನಾಡು ರೈತ 
ದೇಶ

ಪ್ರಧಾನಿ ಮೋದಿಗಾಗಿ ಗುಡಿ ಕಟ್ಟಿದ ತಮಿಳುನಾಡು ರೈತ

ತಮಿಳುನಾಡಿನ ತಿರುಚಿರಾಪಳ್ಳಿಯ ರೈತನೊಬ್ಬ ತನ್ನ ಹೊಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಿ ಗುಡಿಯೊಂದನ್ನು ನಿರ್ಮಾಣ ಮಾಡಿದ್ದಾನೆ. 

ಕೊಯಮತ್ತೂರು: ತಮಿಳುನಾಡಿನ ತಿರುಚಿರಾಪಳ್ಳಿಯ ರೈತನೊಬ್ಬ ತನ್ನ ಹೊಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಾಗಿ ಗುಡಿಯೊಂದನ್ನು ನಿರ್ಮಾಣ ಮಾಡಿದ್ದಾನೆ. 

ಏರಾಕುಡಿ ಗ್ರಾಮದ 50 ವರ್ಷದ ಪಿ.ಶಂಕರ್ ಎನ್ನುವವರು ತಮ್ಮ ಹೊಲದಲ್ಲಿ ನಿರ್ಮಿಸಿದ ಮೋದಿ ದೇವಾಲಯವನ್ನು ಕಲೆದ ವಾರ ಉದ್ಘಾಟನೆ ಮಾಡಿದ್ದಾರೆ. 

ಈ ಗುಡಿ 8 ಚದರ ಅಡಿ ವಿಸ್ತೀರ್ಣ ಇದ್ದು, ಗುಡಿಯಲ್ಲಿರುವ ಮೋದಿ ಪ್ರತಿಮೆಗೆ ಅವರು ಪ್ರತೀನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರಧಾನಿ ಮೋದಿಅವರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಕಲ್ಯಾಣ ಯೋಜನೆಯಿಂದ ಪ್ರಭಾವಿತಗೊಂಡು ಗುಂಡಿಯನ್ನು ನಿರ್ಮಿಸಿದ್ದೇನೆ. ಈ ಗುಡಿ ನಿರ್ಮಾಣಕ್ಕೆ ರೂ.1.2 ಲಕ್ಷ ವೆಚ್ಚವಾಗಿದೆ ಎಂದು ಶಂಕರ್ ತಿಳಿಸಿದ್ದಾರೆ. 

ಅಯ್ಯ (ಮೋದಿ) ಅವರಿಗಾಗಿ ದೇಗುಲ ನಿರ್ಮಾಣ ಮಾಡಲು 8 ತಿಂಗಳ ಹಿಂದೆಯೇ ಆಲೋಚನೆ ನಡೆಸಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ವಾರಗಳ ಹಿಂದೆ ದೇಗುಲ ಉದ್ಘಾಟನೆ ಮಾಡಲಾಯಿತು ಎಂದಿದ್ದಾರೆ. 

ಪ್ರಧಾನಮಂತ್ರಿ ಕಿಸಾನ್ ಸಮ್ಮನಾ ನಿಧಿಯಿಂದ ರೂ.2,000 ಬರುತ್ತಿದೆ. ವೈಯಕ್ತಿಕವಾಗಿಯೂ ಮೋದಿಯೆಂದರೆ ನನಗೆ ಬಹಳ ಇಷ್ಟ. ಅವರನ್ನು ಬಹಳ ವರ್ಷದಿಂದ ನೋಡುತ್ತಲೇ ಇದ್ದೇನೆಂದಿದ್ದಾರೆ. 

ಇನ್ನು ಸಂಕರ್ ಅವರು ಬಿಜೆಪಿ ಕಾರ್ಯಕರ್ತರೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಇವರು ಯಾವುದೇ ಸ್ಥಳೀಯ, ರಾಷ್ಟೀಯ ಮಂಡಳಿಗಳಲ್ಲಿ ಸದಸ್ಯರಲ್ಲ ಎಂಬುದು ಖಚಿತಗೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT