ಭಾರತ ಚೀನಾ 
ದೇಶ

ಗಲ್ವಾನ್ ಘರ್ಷಣೆ, ಇತಿಹಾಸದ ಸಣ್ಣ ಕ್ಷಣವಷ್ಟೇ ಎಂದ ಚೀನಾ ರಾಯಭಾರಿ! ಬದಲಾಯಿತೇ ಚೀನಾದ ಧ್ವನಿ?

ಗಲ್ವಾನ್ ಘರ್ಷಣೆ ಇತಿಹಾಸದ ಸಣ್ಣ ಕ್ಷಣವಷ್ಟೇ, ಭಾರತ ತನ್ನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇಡಬೇಕು ಎಂದು ಚೀನಾ ರಾಯಭಾರಿ ಕರೆ ನೀಡಿದ್ದಾರೆ. 

ನವದೆಹಲಿ: ಗಲ್ವಾನ್ ಘರ್ಷಣೆ ಇತಿಹಾಸದ ಸಣ್ಣ ಕ್ಷಣವಷ್ಟೇ, ಭಾರತ ತನ್ನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇಡಬೇಕು ಎಂದು ಚೀನಾ ರಾಯಭಾರಿ ಕರೆ ನೀಡಿದ್ದಾರೆ. 

ಚೀನಾ ಹಾಗೂ ಭಾರತ ಎರಡೂ ಪುರಾತನ ಸಂಸ್ಕೃತಿಗಳು, ಎರಡೂ ಪರಸ್ಪರ ಗೌರವಿಸಬೇಕು, ಎರಡೂ ಸಮಾನ ರಾಷ್ಟ್ರಗಳೆಂದು ಅರಿಯಬೇಕು, ಭಿನ್ನಾಭಿಪ್ರಾಯಗಳ ವಿಷಯದಲ್ಲಿ ಸಮಾನ ಅಂಶಗಳನ್ನು ಪರಿಗಣಿಸಬೇಕು ಎಂದು ಚೀನಾ ರಾಯಭಾರಿ ವಿದ್ಯಾರ್ಥಿ-ಶಿಕ್ಷಕರುಗಳೊಂದಿಗಿನ ಸಂವಾದದಲ್ಲಿ ಸನ್ ವೀಡಾಂಗ್ ಹೇಳಿದ್ದಾರೆ. 

ದ್ವಿಪಕ್ಷೀಯ ಸಂಬಂಧಗಳು, ಒಂದೇ ಸಮಯದಲ್ಲಿ ಒಂದೇ ವಿಷಯದ ಪರಿಣಾಮದಿಂದ ಹಾಳಾಗಬಾರದು ಎಂದು ಹೇಳಿರುವ ಚೀನಾ ರಾಯಭಾರಿಯ ಹೇಳಿಕೆಯಲ್ಲಿ ಈಗಿನ ಸಂದರ್ಭಕ್ಕೆ ಆಳವಾದ ಅರ್ಥ ಧ್ವನಿಸುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. 

ಗಲ್ವಾನ್ ಘರ್ಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಚೀನಾ ರಾಯಭಾರಿ, ಇತಿಹಾಸದ ದೃಷ್ಟಿಯಿಂದ ನೋಡಿದರೆ ಗಲ್ವಾನ್ ಘರ್ಷಣೆ ಸಣ್ಣ ಘಟನೆಯಾಗಿದೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಾಗ ಉಭಯ ಪಕ್ಷಗಳೂ ಸಮಾನ ಅಂಶಗಳನ್ನು ಪರಿಗಣಿಸಬೇಕೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರು ಶೇ. 8.5 ರಷ್ಟು ಬೆಳವಣಿಗೆಯೊಂದಿಗೆ ಮುಂಬೈ, ದೆಹಲಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ! ಇಲ್ಲಿದೆ ವರದಿ...

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡುವೆ ಸಿದ್ದರಾಮಯ್ಯ 'ಫೇಸ್ ಬುಕ್ 'ನಲ್ಲಿ ಲೈವ್ ಬಂದರೆ ಹೇಗಿರುತ್ತದೆ? ಈ Video ನೋಡಿ..

ರಾಜ್ಯಪಾಲರು ಮಸೂದೆಗಳನ್ನು ಅನಿರ್ದಿಷ್ಟವಾಗಿ ವಿಳಂಬ ಮಾಡಲು ಸಾಧ್ಯವಿಲ್ಲ; ಹಾಗೆಂದು ಅನುಮೋದನೆಗೆ ನಾವು ಕಾಲಮಿತಿ ನಿಗದಿಪಡಿಸಲಾಗದು: ಸುಪ್ರೀಂ ಕೋರ್ಟ್

ಕುನೋದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಭಾರತದಲ್ಲಿ ಜನಿಸಿದ ಚೀತಾ; Video

ದಾಖಲೆಯ 10ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್; ಮೋದಿ ಭಾಗಿ; Video

SCROLL FOR NEXT