ದೇಶ

ಭಾರತದ ಆತ್ಮರಕ್ಷಣೆಗೆ ನಿಂತ ದೆಹಲಿ ಮತದಾರರಿಗೆ ಧನ್ಯವಾದಗಳು: ಪ್ರಶಾಂತ್ ಕಿಶೋರ್ 

Srinivasamurthy VN

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಜಯಭೇರಿ ಭಾರಿಸಿದ ಬೆನ್ನಲ್ಲೇ ಇದೇ ವಿಚಾರವಾಗಿ ಮಾತನಾಡಿರುವ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ದೆಹಲಿ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಶೋರ್ ಅವರು, 'ಭಾರತದ ಆತ್ಮ ರಕ್ಷಣೆಗೆ ನಿಂತ ದೆಹಲಿಗೆ ಧನ್ಯವಾದಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ. 

ಸಿಎಎ, ಎನ್ ಪಿಆರ್ ಮತ್ತು ಎನ್ ಆರ್ ಸಿ ವಿಚಾರವಾಗಿ ಮಿತ್ರ ಪಕ್ಷ ಬಿಜೆಪಿಯನ್ನು ಟೀಕಿಸಿದ್ದ ಪ್ರಶಾಂತ್ ಕಿಶೋರ್ ರನ್ನು ಜೆಡಿಯು ಪಕ್ಷ ಉಚ್ಛಾಟಿಸಿತ್ತು. ಅದಾಗ್ಯೂ ಬಿಜೆಪಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದ ಪ್ರಶಾಂತ್ ಕಿಶೋರ್ ದೆಹಲಿ ಚುನಾವಣೆ ಮತ್ತು ಇತರೆ ವಿಚಾರವಾಗಿ ಬಿಜೆಪಿಯನ್ನು ಟೀಕಿಸುತ್ತಾ ಬಂದಿದ್ದರು. ಇದೀಗ ದೆಹಲಿ ಚುನಾವಣೆಯಲ್ಲಿ ಆಪ್ ಪರ ಮತ ನೀಡಿದ ಮತದಾರರಿಗೆ ಧನ್ಯವಾದ ಹೇಳುವ ಮೂಲಕ ಬಿಜೆಪಿಗೆ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ.

ಅಂದಹಾಗೆ ಇದೇ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ತಂಡವೇ ಈ ಬಾರಿಯ ಎಎಪಿ ಅಭಿಯಾನವನ್ನು ರೂಪಿಸಿ ಪಕ್ಷವು ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. 

SCROLL FOR NEXT