ಸಂಗ್ರಹ ಚಿತ್ರ 
ದೇಶ

ತಿರುಮಲದಲ್ಲಿ ಜನವರಿ  6 ಹಾಗೂ 7 ರಂದು  ಭಕ್ತರಿಗೆ ವೈಕುಂಠ ದ್ವಾರ ದರ್ಶನ

ತಿರುಪತಿ-ತಿರುಮಲದ ವೆಂಕಟರಮಣಸ್ವಾಮಿಯ  ದೇಗುಲದಲ್ಲಿ ಜನವರಿ  6 ಮತ್ತು  7ರಂದು ಎರಡು ದಿನಗಳ ಕಾಲ ವೈಕುಂಠ ಏಕಾದಶಿ, ದ್ವಾದಶಿಯ  ಅಂಗವಾಗಿ  ಭಕ್ತಾಧಿಗಳಿಗೆ  ವೈಕುಂಠ ದ್ವಾರ  ದರ್ಶನ ಕಲ್ಪಿಸಲಾಗುವುದು  ಎಂದು   ಟಿಟಿಡಿ  ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ. 

ತಿರುಮಲ: ತಿರುಪತಿ-ತಿರುಮಲದ ವೆಂಕಟರಮಣಸ್ವಾಮಿಯ  ದೇಗುಲದಲ್ಲಿ ಜನವರಿ  6 ಮತ್ತು  7ರಂದು ಎರಡು ದಿನಗಳ ಕಾಲ ವೈಕುಂಠ ಏಕಾದಶಿ, ದ್ವಾದಶಿಯ  ಅಂಗವಾಗಿ  ಭಕ್ತಾಧಿಗಳಿಗೆ  ವೈಕುಂಠ ದ್ವಾರ  ದರ್ಶನ  ಕಲ್ಪಿಸಲಾಗುವುದು  ಎಂದು   ಟಿಟಿಡಿ  ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ. 

ಏಕಾದಶಿ  ಅಂಗವಾಗಿ ಒಂದು ಕೋಟಿ  70 ಲಕ್ಷ ರೂ  ವೆಚ್ಚದಲ್ಲಿ ವ್ಯವಸ್ಥೆ ಕೈಗೊಳ್ಳಲಾಗಿದೆ.  ಸುಮಾರು  ಒಂದು ಲಕ್ಷದ   80 ಸಾವಿರ  ಭಕ್ತರಿಗೆ  ಮಾತ್ರ ವೈಕುಂಠ ದ್ವಾರ ಮೂಲಕ  ದರ್ಶನ  ಕಲ್ಪಿಸುವ  ಅವಕಾಶವಿದೆ.  ಇದನ್ನು ಗಮನದಲ್ಲಿಟ್ಟುಕೊಂಡು  ಭಕ್ತಾಧಿಗಳು   ದೇವಾಲಯ  ಮಂಡಳಿಯೊಂದಿಗೆ  ಸಹಕರಿಸುವಂತೆ ಮನವಿ ಮಾಡಿದ್ದಾರೆ. ನಾರಾಯಣಗಿರಿ ಉದ್ಯಾನವನದಲ್ಲಿ ೨೬ ಕೋಟಿ ರೂ ವೆಚ್ಚದಲ್ಲಿ   ನಿರ್ಮಿಸಿರುವ  ಹೊಸ ಸರತಿ ಸಾಲಿನ  ವ್ಯವಸ್ಥೆಯನ್ನು  ಇದೇ  ೫ ರಿಂದ ಭಕ್ತರ ಸೇವೆಗೆ  ಮುಕ್ತಗೊಳಿಸಲಾಗುತ್ತಿದೆ ಎಂದು  ಸಿಂಘಾಲ್ ಪ್ರಕಟಿಸಿದರು.
 
ಈ  ತಿಂಗಳ  21,28 ರಂದು  ದಿವ್ಯಾಂಗರಿಗೆ,  ಮಾರ್ಚ್ 22 ಮತ್ತು 29 ರಂದು ಹಸುಗೂಸು  ಹೊಂದಿರುವ ತಂದೆ ತಾಯಿಯರಿಗೆ ದೇವರ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದರು.

ವಿಶಾಖಪಟ್ಟಣಂನಲ್ಲಿ 22 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ  ತಿಮ್ಮಪ್ಪನ  ದೇವಾಲಯವನ್ನು ಏಪ್ರಿಲ್‌ನಲ್ಲಿ  ಪ್ರಾರಂಭಗೊಳಿಸಲಾಗುವುದು. ಫೆಬ್ರವರಿ 1 ರಂದು ರಥಸಪ್ತಮಿ  ಕಾರ್ಯಕ್ರಮವನ್ನು  ಅದ್ದೂರಿಯಾಗಿ  ನಡೆಸಲಾಗುವುದು.  ಆಡಳಿತಾತ್ಮಕ ತೊಂದರೆಗಳಿಂದಾಗಿ ಈ ವರ್ಷದ  ಡೈರಿಗಳನ್ನು ನಿಗದಿತ  ಸಮಯದಲ್ಲಿ  ಭಕ್ತರಿಗೆ ಒದಗಿಸಲು ಸಾಧ್ಯವಾಗಿಲ್ಲ ಅನಿಲ್ ಕುಮಾರ್ ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT