ರಾಮೇಶ್ವರಂ: ಮಾನಾಲಿ ದ್ವೀಪದ ಹತ್ತಿರ ಹಾನಿಗೊಳಗಾದ ಮೀನುಗಾರಿಕೆಯ ದೋಣಿಯಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಮೀನುಗಾರರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಇಂದು ಬೆಳಗ್ಗೆ ದಕ್ಷಿಣ ಪಂಬನ್ ಸೇತುವೆಯ ಮಾನಾಲಿ ದ್ವೀಪದ ಹತ್ತಿರ ಹಾನಿಗೊಳಗಾದ ದೋಣಿಯಲ್ಲಿ ಸಮುದ್ರದ ಮಧ್ಯದಲ್ಲಿ ಸಿಲುಕಿ ಭಯಭೀತಿಗೊಂಡಿದ್ದ ಮೀನುಗಾರರನ್ನು ಐಎನ್ ಎಸ್ ಪರಂಡುವಿನ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೌಕಾ ಹೆಲಿಕಾಪ್ಟರ್ ನೆರವಿನಿಂದ ರಕ್ಷಿಸಿದ್ದಾರೆ.