ಸಾಂಕೇತಿಕ ಚಿತ್ರ​ 
ದೇಶ

ಸ್ಥಳೀಯ ವಿವಾದ ಕಾರಣ ನೇಪಾಳಿ ಪೊಲೀಸರಿಂದ ಗುಂಡಿನ ದಾಳಿ; ಎಸ್ಎಸ್ ಬಿ ಮಹಾ ನಿರ್ದೇಶಕರ ಸ್ಪಷ್ಟನೆ

ಭಾರತ-ನೇಪಾಳ ಗಡಿಯ ಸೀತಾಮಾರ್ಹಿ ಜಿಲ್ಲೆಯಲ್ಲಿ ನಡೆದಿರುವ ಗುಂಡಿನ ದಾಳಿ ಘಟನೆ ನೇಪಾಳ ಭೂ ಪ್ರದೇಶ ವ್ಯಾಪ್ತಿಯೊಳಗೆ ನಡೆದಿರುವ ಸ್ಥಳೀಯ ವಿಷಯವಾಗಿದೆ ಎಂದು ಸಹಸ್ತ್ರ ಸೀಮಾ ಬಲ್ (ಎಸ್‌ಎಸ್ ಬಿ) ಮಹಾ ನಿರ್ದೇಶಕ ಕುಮಾರ್ ರಾಜೇಶ್ ಚಂದ್ರ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಭಾರತ-ನೇಪಾಳ ಗಡಿಯ ಸೀತಾಮಾರ್ಹಿ ಜಿಲ್ಲೆಯಲ್ಲಿ ನಡೆದಿರುವ ಗುಂಡಿನ ದಾಳಿ ಘಟನೆ ನೇಪಾಳ ಭೂ ಪ್ರದೇಶ ವ್ಯಾಪ್ತಿಯೊಳಗೆ ನಡೆದಿರುವ ಸ್ಥಳೀಯ ವಿಷಯವಾಗಿದೆ ಎಂದು ಸಹಸ್ತ್ರ ಸೀಮಾ ಬಲ್ (ಎಸ್‌ಎಸ್ ಬಿ) ಮಹಾ ನಿರ್ದೇಶಕ ಕುಮಾರ್ ರಾಜೇಶ್ ಚಂದ್ರ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

ಸ್ಥಳದಿಂದ ಬಂದಿರುವ ವರದಿಗಳ ಪ್ರಕಾರ, ಘಟನೆ ಸಂಪೂರ್ಣವಾಗಿ ಸ್ಥಳೀಯ ವಿಷಯವಾಗಿದ್ದು, ಭಾರತದ ಕಡೆಯ ಜಾನಕಿ ನಗರ ಗ್ರಾಮದ ಗಡಿಯ ನಿವಾಸಿಗಳು ಮತ್ತು ನೇಪಾಳ ಪೊಲೀಸ್ ಸಿಬ್ಬಂದಿಗಳ ನಡುವೆ ಇಂದು ಬೆಳಿಗ್ಗೆ ನಡೆದ ಗಲಾಟೆಯ ನಂತರ ಈ ಘಟನೆ  ನಡೆದಿದೆ ಎಂದು ಚಂದ್ರ ಹೇಳಿದ್ದಾರೆ.

ಜಾನಕಿ ನಗರದ ಕುಟುಂಬವೊಂದರಲ್ಲಿ ವಿವಾಹವಾಗಿದ್ದ ಮಹಿಳೆ ನೇಪಾಳ ಕಡೆಯಿಂದ ಕೆಲವು ಸಂಬಂಧಿಕರೊಂದಿಗೆ ತನ್ನ ಅತ್ತೆಯ ಮನೆಗೆ ಆಗಮಿಸುತ್ತಿದ್ದರು. ನೇಪಾಳದಲ್ಲಿ ಕೋವಿಡ್ ನಿರ್ಬಂಧಗಳು ಜಾರಿಯಲ್ಲಿದ್ದು, ಜನರು ಗುಂಪುಗೂಡದಂತೆ ಪೊಲೀಸರು ಸೂಚಿಸಿದ್ದಾರೆ. ಇದರಿಂದ ಜಾನಕಿ ನಗರ ನಿವಾಸಿಗಳು ಹಾಗೂ ನೇಪಾಳ ಪೊಲೀಸರ ನಡುವೆ ಗಲಾಟೆಗೆ ಕಾರಣವಾಗಿ ಕೊನೆಗೆ ಗುಂಡು ಹಾರಿಸುವ ಹಂತಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷಿನ್ ಖರೀದಿ: ನವರಾತ್ರಿ ವೇಳೆ ಮಹಿಳೆಯೊಬ್ಬರ ಸಂಭ್ರಮಕ್ಕೆ ಯೋಜನೆ ಕಾರಣವಾಗಿರುವುದು ಸಾರ್ಥಕ ತರಿಸಿದೆ ಎಂದ ಸಿಎಂ

SCROLL FOR NEXT