ಜೆ ಪಿ ನಡ್ಡಾ 
ದೇಶ

ಏಕತೆ ಮತ್ತು ಒಗ್ಗಟ್ಟು ತೋರಿಸುವ ಸಮಯ, ವಂಶ ಬೆಳೆಸುವ ಯೋಚನೆಗೆ ಸ್ವಲ್ಪ ಕಾಯಬೇಕು: ಜೆ ಪಿ ನಡ್ಡಾ 

ಭಾರತ-ಚೀನಾ ಗಡಿಯ ಲಡಾಕ್ ನಲ್ಲಿ ಸೇನಾ ಸಂಘರ್ಷದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಮಾತಿನ ಛಾಟಿ ಮುಂದುವರಿದಿದ್ದು ಅದು ಬುಧವಾರ ಸಹ ಮುಂದುವರಿದಿದೆ. 

ನವದೆಹಲಿ:ಭಾರತ-ಚೀನಾ ಗಡಿಯ ಲಡಾಕ್ ನಲ್ಲಿ ಸೇನಾ ಸಂಘರ್ಷದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಮಾತಿನ ಛಾಟಿ ಮುಂದುವರಿದಿದ್ದು ಅದು ಬುಧವಾರ ಸಹ ಮುಂದುವರಿದಿದೆ. 

ಟ್ವೀಟ್ ನಲ್ಲಿ ಅವರು ಯಾರ ಹೆಸರನ್ನೂ ಸ್ಪಷ್ಟವಾಗಿ ನಮೂದಿಸದೆ ಒಂದು ರಾಜ ಮನೆತನ ಸರ್ಕಾರಕ್ಕೆ ಪ್ರಶ್ನೆ ಕೇಳುತ್ತಲೇ ಇರುತ್ತದೆ, ಅದರ ಅನುಯಾಯಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಲೇ ಇರುತ್ತಾರೆ, ಅವರ ಕೆಲಸವೇ ಅದು ಎಂದು ಆರೋಪಿಸಿದ್ದಾರೆ. 

ವಿರೋಧ ಪಕ್ಷವೆಂದರೆ ನಾವೊಬ್ಬರೆ ಎಂಬ ಭ್ರಮೆ ಈ ದೇಶದಲ್ಲಿ ಒಂದು ರಾಜಮನೆತನದ ಪಕ್ಷಕ್ಕೆ ಮತ್ತು ಅದರ ಅನುಯಾಯಿಗಳಿಗಿದೆ. ಆ ರಾಜ ಮನೆತನ ಆಗಾಗ ತಂತ್ರಗಳನ್ನು ಎಸೆಯುತ್ತಿರುತ್ತದೆ, ಅದರ ಅನುಯಾಯಿಗಳು ನಕಲಿ ಸುದ್ದಿಗಳನ್ನು ಹಬ್ಬಿಸುತ್ತಿರುತ್ತಾರೆ. ಲಡಾಕ್ ಬಿಕ್ಕಟ್ಟು ಇತ್ತೀಚಿನ ಅಂತಹ ನಕಲಿ ಸುದ್ದಿಗಳಲ್ಲೊಂದು ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

ಸರ್ಕಾರವನ್ನು ಪ್ರಶ್ನೆ ಮಾಡುವುದು ವಿರೋಧ ಪಕ್ಷಗಳ ಹಕ್ಕು. ಕಳೆದ ಸರ್ವಪಕ್ಷ ಸಭೆಯಲ್ಲಿ ಆರೋಗ್ಯಕರ ಚರ್ಚೆಗಳು ನಡೆದಿದ್ದವು. ಹಲವು ವಿರೋಧ ಪಕ್ಷಗಳ ನಾಯಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದರು. ಸರ್ಕಾರದ ನಿರ್ಧಾರವನ್ನು ಕೂಡ ಬೆಂಬಲಿಸಿದರು. ಆದರೆ ಒಂದು ಕುಟುಂಬ ಮಾತ್ರ ಅದಕ್ಕೆ ತದ್ವಿರುದ್ಧ, ಅಪವಾದ, ಆ ಕುಟುಂಬ ಯಾವುದು ಎಂದು ನಿಮಗೆ ಊಹಿಸಬಹುದೇ ಎಂದು ನಡ್ಡಾ ಕೇಳಿದ್ದಾರೆ.

ತಿರಸ್ಕರಿಸಲ್ಪಟ್ಟ ಮತ್ತು ಹೊರಹಾಕಲ್ಪಟ್ಟ ರಾಜವಂಶವು ಎಲ್ಲಾ ವಿರೋಧ ಪಕ್ಷಗಳಿಗೆ ಸಮನಾಗಿಲ್ಲ, ಅದರ ಹಿತಾಸಕ್ತಿ ದೇಶದ ಹಿತಾಸಕ್ತಿಯಲ್ಲ. ಇಂದು ಇಡೀ ದೇಶ ಒಂದಾಗಿದ್ದು, ನಮ್ಮ ಸೇನಾಪಡೆಯನ್ನು ಬೆಂಬಲಿಸುತ್ತಿದೆ. ಇದು ಒಗ್ಗಟ್ಟು ಮತ್ತು ಐಕ್ಯತೆ ತೋರಿಸುವ ಸಮಯ ಎಂದು ನಡ್ಡಾ ಹೇಳಿದ್ದಾರೆ.

ಈ ದೇಶದ ಒಂದು ಮನೆತನದವರಿಂದಾಗಿ ನಾವು ಸಾವಿರಾರು ಚದರಡಿ ಜಾಗವನ್ನು ಬಿಟ್ಟುಕೊಟ್ಟಿದ್ದೇವೆ. ಸಿಯಾಚಿನ್ ಹಿಮನದಿ ಬಹುತೇಕ ಭಾಗ ಕಳೆದುಕೊಂಡಿದ್ದೇವೆ. ಭಾರತ ದೇಶದ ಜನರು ಈ ಮನೆತನವನ್ನು ತಿರಸ್ಕರಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo Crisis|ಒಂದೇ ದಿನ 400 ವಿಮಾನಗಳ ಹಾರಾಟ ರದ್ದು, ಸುಪ್ರೀಂ ಕೋರ್ಟ್ ತಲುಪಿದ ಪ್ರಕರಣ

3rd ODI: ಬರೊಬ್ಬರಿ 2 ವರ್ಷ, ಸತತ 20 ಪಂದ್ಯ.. ಕೊನೆಗೂ ಟಾಸ್ ಗೆದ್ದ ಭಾರತ, ಕುಖ್ಯಾತ ದಾಖಲೆಗೆ ಕೆಎಲ್ ರಾಹುಲ್ ಬ್ರೇಕ್..!

'360 ನ್ನೂ ಚೇಸ್ ಮಾಡಿದ್ದಾರೆ.. ತಪ್ಪುಗಳನ್ನು ಸರಿಪಡಿಸಿಕೊಂಡು ಆಡಬೇಕು': ತಂಡಕ್ಕೆ ಕೆಎಲ್ ರಾಹುಲ್ ಖಡಕ್ ಎಚ್ಚರಿಕೆ!

ಸಾರ್ವಜನಿಕವಾಗಿ ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ HDK: ಅಗೌರವ ಆಗಬಾರದೆಂಬ ದೃಷ್ಟಿಯಿಂದ ಹೇಳಿದ್ದೆ ಎಂದ ಕೇಂದ್ರ ಸಚಿವ

ಪುಟಿನ್ ಭೋಜನಕೂಟ ಭಾಗಿಯಾಗಿದ್ದಕ್ಕೆ ಶಶಿ ತರೂರ್ ವಿರುದ್ಧ ಕಾಂಗ್ರೆಸ್ ಕೆಂಗಣ್ಣು; ಪಕ್ಷ ತೊರೆಯುತ್ತಾರಾ ಮಾಜಿ ರಾಜತಂತ್ರಜ್ಞ?

SCROLL FOR NEXT