ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲ: ಅವಧಿಗೂ ಮುನ್ನ ನಿವೃತ್ತಿಗೆ ಮುಂದಾದ ಐಪಿಎಸ್ ಅಧಿಕಾರಿ 
ದೇಶ

ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲ: ಅವಧಿಗೂ ಮುನ್ನ ನಿವೃತ್ತಿಗೆ ಮುಂದಾದ ಐಪಿಎಸ್ ಅಧಿಕಾರಿ

ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲನಾಗಿದ್ದೇನೆ ಎಂದು ತೆಲಂಗಾಣ ರಾಜ್ಯ ಪೊಲೀಸ್ ಅಕಾಡೆಮಿ (ಟಿಎಸ್ ಪಿಎ)ಯ ನಿರ್ದೇಶಕ ವಿ.ಕೆ ಸಿಂಗ್ ಅವಧಿಗೂ ಮುನ್ನವೇ ನಿವೃತ್ತಿ ಬಯಸಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. 

ನವದೆಹಲಿ: ವ್ಯವಸ್ಥೆ ಬದಲಾವಣೆ ಮಾಡುವಲ್ಲಿ ವಿಫಲನಾಗಿದ್ದೇನೆ ಎಂದು ತೆಲಂಗಾಣ ರಾಜ್ಯ ಪೊಲೀಸ್ ಅಕಾಡೆಮಿ (ಟಿಎಸ್ ಪಿಎ)ಯ ನಿರ್ದೇಶಕ ವಿ.ಕೆ ಸಿಂಗ್ ಅವಧಿಗೂ ಮುನ್ನವೇ ನಿವೃತ್ತಿ ಬಯಸಿ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. 

ಪೊಲೀಸ್ ಇಲಾಖೆಗೆ ಸೇರುವಾಗ ಹಲವು ಕನಸುಗಳನ್ನು ಹೊತ್ತಿದ್ದೆ. ಪೊಲೀಸ್ ವ್ಯವಸ್ಥೆಯ ಬದಲಾವಣೆಯ ಕನಸು ನನಸಾಗಿಯೇ ಉಳಿಯಿತು, ವ್ಯವಸ್ಥೆಯ ಬದಲಾವಣೆಯಲ್ಲಿ ವಿಫಲನಾಗಿದ್ದೇನೆ ಈ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ನಿವೃತ್ತಿಗೆ ಅನುಮತಿ ನೀಡಬೇಕೆಂದು ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದು, 2020 ರ ಅಕ್ಟೋಬರ್ 2 ರಂದು ನಿವೃತ್ತಿಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. 1987 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್, ಈ ವರ್ಷದ ನವೆಂಬರ್ ತಿಂಗಳಲ್ಲಿ ನಿವೃತ್ತರಾಗಬೇಕಿತ್ತು.

ತಾವು ಅವಧಿಗೂ ಮುನ್ನವೇ ನಿವೃತ್ತಿ ಬಯಸಿ ಪತ್ರಬರೆದಿರುವುದನ್ನು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಹೊರಗೆ ತಮ್ಮ ಸೇವೆ ಬಳಕೆಯಾಗಬಹುದೆಂಬ ಅಭಿಪ್ರಾಯ ಸಿಂಗ್ ಅವರದ್ದಾಗಿದೆ. ಜನರ ನಡುವೆ ಬದಲಾವಣೆ, ಸುಧಾರಣೆ ತರಲು ಕೆಲಸ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯಾದ ಅ.2 ರಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಬಯಸಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

ನನ್ನ ಸೇವೆಗಳಿಂದ ತೆಲಂಗಾಣ ಸರ್ಕಾರವೂ ಸಂತುಷ್ಟವಾಗಿಲ್ಲ. ಸರ್ಕಾರದ ಸೇವೆಗಳನ್ನು ಉತ್ತಮಗೊಳಿಸಲು ನನ್ನ ಸಲಹೆಗಳೂ ವ್ಯವಸ್ಥೆಯನ್ನು ಹೆಚ್ಚು ಬದಲಾವಣೆ ಮಾಡಲು ಸಾಧ್ಯವಾಗಲಿಲ್ಲ. ನಾನು ಸರ್ಕಾರಕ್ಕೆ ಹೊರೆಯಾಗಬಾರದೆಂದು ಭಾವಿಸಿ ಈ ನಿರ್ಧಾರಕ್ಕೆ ಬಂದಿದ್ದೀನಿ, ಸರ್ಕಾರದ ವಿರುದ್ಧ ಏನೂ ಇಲ್ಲ ಎಂದು ಸಿಂಗ್ ಹೇಳಿದ್ದಾರೆ. ಸ್ಪಷ್ಟ ನ್ಯಾಯದ ಕಲ್ಪನೆ, ಸ್ಪಷ್ಟ ಆತ್ಮಸಾಕ್ಷಿಯೊಂದಿಗೆ ಕೆಲಸ ಮಾಡಿದರೆ ಪೊಲೀಸ್ ವೃತ್ತಿ ಅತ್ಯುತ್ತಮವಾದ್ದು, ಯಾರಾದರೂ ಸರ್ಕಾರಿ ಸೇವೆಗೆ ಸೇರಬೇಕೆಂದರೆ ನಾನು ಪೊಲೀಸ್ ಸೇವೆಗೆ ಸೇರಿ ಎಂದೇ ಹೇಳುತ್ತೇನೆ ಎಂದು ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!