ರಾಜಸ್ಥಾನ: ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನ ಸೋಂಕು ಹರಡದಂತೆ ತಪ್ಪಿಸಲು ದೇಶದಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ರಾಜಸ್ಥಾನದ ಕಾಂಗ್ರೆಸ್ನ ಶಾಸಕನೊಬ್ಬ ಮದ್ಯ ಸೇವನೆಯಿಂದ ಕೊರೊನಾ ವೈರಸ್ ಸಾಯುತ್ತೆ. ಹೀಗಾಗಿ ಮದ್ಯದಂಗಡಿ ಒಪನ್ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾನೆ. ಸದ್ಯ ಈತನ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜಸ್ಥಾನದ ಸಂಗೋಡ್ ಶಾಸಕ ಭರತ್ ಸಿಂಗ್ ಕುಂದಾನ್ಪುರ್ ಎಂಬವರು ಈ ಬಗ್ಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು ಮದ್ಯದಂಗಡಿ ತೆರೆಯಲು ಅವಕಾಶ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಆಲ್ಕೋಹಾಲ್ ಸ್ಯಾನಿಟೈಸರ್ನಿಂದ ಹ್ಯಾಂಡ್ವಾಶ್ ಮಾಡುವ ಮೂಲಕ ಕೊರೊನಾ ವೈರಸ್ ಸಾಯೋದಾದ್ರೆ. ಮದ್ಯ
ಸೇವನೆಯಿಂದಲೂ ಗಂಟಲಿನಲ್ಲಿರುವ ವೈರಸ್ಗಳು ಸಾಯುತ್ತದೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ.
ಇನ್ನು ಅಕ್ರಮ ಮದ್ಯ ಮಾರಾಟದ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಿರುವ ಶಾಸಕ, ರಾಜ್ಯದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಅದಕ್ಕೆ ಜನರು ಜಾಸ್ತಿ ಹಣ ನೀಡಿ ಖರೀದಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳನ್ನ ಪರಿಗಣಿಸಿ ಮದ್ಯದಂಗಡಿ ತೆರೆಯೋಕೆ ಅನುಮತಿ ನೀಡುವಂತೆ ಶಾಸಕ ಭರತ್ ಸಿಂಗ್ ಮನವಿ ಮಾಡಿದ್ದಾರೆ.