ಕೆ ಜಿ ಬಾಲಕೃಷ್ಣನ್ ರಿಂದ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಕೃತಿ ಬಿಡುಗಡೆ 
ದೇಶ

ಮಾಜಿ ಸುಪ್ರೀಂ ನ್ಯಾಯಮೂರ್ತಿಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಕೃತಿ ಬಿಡುಗಡೆ

ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಅಪರೂಪದ ಸಂಗ್ರಾಹ್ಯ ಚಿತ್ರಗಳು, ಹೆಚ್ಚು ಪ್ರಸಿದ್ದವಲ್ಲದ ಉಪಾಖ್ಯಾನಗಳಿಂದ ಕೂಡಿರುವ ವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಬಿಡುಗಡೆಯಾಗಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಅಪರೂಪದ ಸಂಗ್ರಾಹ್ಯ ಚಿತ್ರಗಳು, ಹೆಚ್ಚು ಪ್ರಸಿದ್ದವಲ್ಲದ ಉಪಾಖ್ಯಾನಗಳಿಂದ ಕೂಡಿರುವ ವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನಚರಿತ್ರೆ ಬಿಡುಗಡೆಯಾಗಿದೆ.

"Narendra Modi-Harbinger of Prosperity & Apostle of World Peace", ಎನ್ನುವ ಹೆಸರಿನ ಪುಸ್ತಕವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಬಿಡುಗಡೆ ಮಾಡಿದ್ದಾರೆ.

 ಲಾಕ್‌ಡೌನ್ ಮಧ್ಯೆ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ ಅಂತರ್ಜಾಲದಲ್ಲಿ ಆಯೋಜಿಸಲಾಗಿದ್ದು ಭಾರತ ಮತ್ತು ಯುಎಸ್ ಎರಡೂ ರಾಷ್ಟ್ರಗಳಲ್ಲಿನ ಗಣ್ಯರು ಈ ವೇಳೆ ಹಾಜರಿದ್ದರು. 

ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಜ್ಯೂರಿಸ್ಟ್ಸ್ ಅಧ್ಯಕ್ಷ ಮತ್ತು ಅಖಿಲ ಭಾರತ ಬಾರ್ ಅಸೋಸಿಯೇಶನ್ ಅಧ್ಯಕ್ಷ  ಆದಿಶ್ ಸಿ ಅಗರ್‌ವಾಲಾ, ಮೆರಿಕಾದ ಲೇಖಕ ಮತ್ತು ಕವಿ ಎಲಿಸಬೆತ್ ಹೊರಾನ್ ಜತೆಯಾಗಿ ಈ ಪುಸ್ತಕ ಬರೆದಿದ್ದು "ಮೋದಿಯವರ ಬಾಲ್ಯ ಮತ್ತು ಆರಂಭಿಕ ಜೀವನದ ಅಪರೂಪದ ಛಾಯಾಚಿತ್ರಗಳು ಜೀವನಚರಿತ್ರೆಯು ಚಹಾವನ್ನು ಮಾರಿದ ಹುಡುಗನೊಬ್ಬ ಎರಡನೇ ಬಾರಿ ದೇಶದ ಪ್ರಧಾನಿಯಾದವರೆಗೆ ಜೀವನವನ್ನು ಅದ್ಭುತವಾಗಿ ಚಿತ್ರಿಸಿದೆ.

ಕೆಲ ಅತ್ಯಪರೂಪದ ಸಂಗತಿಗಳನ್ನು ಒಳಗೊಂಡಿರುವ ಈ ಕೃತಿ ಹಾರ್ಡ್‌ಕವರ್ ಮತ್ತು ಇ-ಬುಕ್ ಎಂಬ ಎರಡು ಸ್ವರೂಪಗಳಲ್ಲಿ ಲಭ್ಯವಿದೆ  ಇಷ್ಟೇ ಅಲ್ಲದೆ ಇಂಗ್ಲಿಷ್, ಅರೇಬಿಕ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಮ್ಯಾಂಡರಿನ್, ರಷ್ಯನ್ ಮತ್ತು ಸ್ಪ್ಯಾನಿಷ್ ಸೇರಿ ಹಲವು ವಿದೇಶೀ ಭಾಷೆಗಳಲ್ಲಿ,  ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮರಾಠಿ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು ಸೇರಿ ಹಲವು ಭಾರತೀಯ ಭಾಷೆಯಲ್ಲಿ ಲಭ್ಯ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT