ಸಂಗ್ರಹ ಚಿತ್ರ 
ದೇಶ

ಮಾತೃಭೂಮಿ ರಕ್ಷಣೆ, ದೇಶದ ಸೇವೆ ಎಂದಿಗೂ ನಮ್ಮ ಗೌರವ: ಮೋದಿ ದೀಪಾವಳಿ ಶುಭಾಶಯಕ್ಕೆ ಬಿಎಸ್ಎಫ್ ಪ್ರತಿಕ್ರಿಯೆ

ಮಾತೃಭೂಮಿ ರಕ್ಷಣೆ ಮಾಡುವುದು ಹಾಗೂ ದೇಶಕ್ಕಾಗಿ ಸೇವೆ ಮಾಡುತ್ತಿರುವುದು ನಮ್ಮ ಗೌರವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೀಪಾವಳಿ ಶುಭಾಶಯಕ್ಕೆ ಗಡಿ ಭದ್ರತಾ ಪಡೆ ಪ್ರತಿಕ್ರಿಯೆ ನೀಡಿದೆ. 

ನವದೆಹಲಿ: ಮಾತೃಭೂಮಿ ರಕ್ಷಣೆ ಮಾಡುವುದು ಹಾಗೂ ದೇಶಕ್ಕಾಗಿ ಸೇವೆ ಮಾಡುತ್ತಿರುವುದು ನಮ್ಮ ಗೌರವ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೀಪಾವಳಿ ಶುಭಾಶಯಕ್ಕೆ ಗಡಿ ಭದ್ರತಾ ಪಡೆ ಪ್ರತಿಕ್ರಿಯೆ ನೀಡಿದೆ. 

ಮಾತೃಭೂಮಿ ರಕ್ಷಣೆ ಮಾಡುವುದು, ಸೇವೆ ಸಲ್ಲಿರುವುದು ನಮ್ಮ ಗೌರವವಾಗಿದೆ. ದೇಶದ ಗಡಿ ಸಮಗ್ರತೆಯನ್ನು ಎತ್ತಿಹಿಡಿಯುವಲ್ಲಿ ನಮ್ಮ ಜೀವ ಅಪಾಯಕ್ಕೆ ಸಿಲುಕಿದರೂ ಸರಿ ನಾವು ಸದಾಕಾಲ ಸಿದ್ಧರಿರುತ್ತೇವೆ. ನಮ್ಮ ವೀರ ಯೋಧರ ಕುಟುಂಬಕ್ಕೆ ಸೆಲ್ಯೂಟ್ ಹೊಡೆಯುತ್ತೇವೆ. ಜೈ ಹಿಂದ್ ಎಂದು ಬಿಎಸ್ಎಫ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದೆ. 

ದೀಪಾವಳಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿಯವರು, ದೀಪಾವಳಿಯ ಹಬ್ಬದಂದು ನಮ್ಮ ಯೋಧರಿಗಾಗಿ ದೀಪವನ್ನು ಬೆಳಗಿಸೋಣ. ದೇಶವನ್ನು ನಿರ್ಭಯದಿಂದ ಕಾಯುತ್ತಿರುವ ನಮ್ಮ ವೀರ ಯೋಧರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಗಡಿ ಕಾಯುತ್ತಿರುವ ಯೋಧರ ಕುಟುಂಬಕ್ಕೆ ನಾವು ಕೃತಜ್ಞರಾಗಿರುತ್ತೇವೆ ಎಂದು ಹೇಳಿದ್ದರು. 

ಇಂದೂ ಕೂಡ ರಾಜಸ್ಥಾನದ ಜೈಸಾಲ್ಮೇರ್'ನ ಲೋಂಗೆವಾಲಗೆ ತೆರಳಿರುವ ಮೋದಿಯವರು, ಭಾರತೀಯ ಸೇನಾಪಡೆಯ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾರೆ.
 
ಈ ವೇಳೆ ಯೋಧರೊಂದಿಗೆ ಮಾತನಾಡಿರುವ ಮೋದಿಯವರು, ಸೇನಾಪಡೆಯ ಸಾಧನೆ, ತ್ಯಾಗ ಹಾಗೂ ಬಲಿದಾನವನ್ನು ಕೊಂಡಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT