ದೇಶ

20 ದಿನಗಳಿಂದ ಸ್ಟ್ರಾ, ಸಿಪ್ಪರ್ ಗಾಗಿ ಕೇಳುತ್ತಿರುವ ಭೀಮಾ ಕೊರೆಗಾಂವ್ ನ ಆರೋಪಿ ಸ್ತಾನ್ ಸ್ವಾಮಿ

ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಬಂಧನಕ್ಕೊಳಗಾಗಿರುವ ಫಾದರ್ ಸ್ತಾನ್ ಸ್ವಾಮಿ ಜೈಲಿನಲ್ಲಿದ್ದು ಕಳೆದ 20 ದಿನಗಳಿಂದ ಸ್ಟ್ರಾ ಮತ್ತು ಸಿಪ್ಪರ್ ಗಳಿಗಾಗಿ ಕೇಳುತ್ತಿದ್ದು, ಅವುಗಳನ್ನು ಕನಿಷ್ಟ ಮುಂದಿನ ಶುಕ್ರವಾರದವರೆಗೂ ಕಾಯಬೇಕಾಗುತ್ತದೆ.   

ಮುಂಬೈ: ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಲ್ಲಿ ಬಂಧನಕ್ಕೊಳಗಾಗಿರುವ ಬುಡಕಟ್ಟು ಹಕ್ಕು ಹೋರಾಟಗಾರ ಫಾದರ್ ಸ್ತಾನ್ ಸ್ವಾಮಿ ಜೈಲಿನಲ್ಲಿದ್ದು ಕಳೆದ 20 ದಿನಗಳಿಂದ ಸ್ಟ್ರಾ ಮತ್ತು ಸಿಪ್ಪರ್ ಗಳಿಗಾಗಿ ಕೇಳುತ್ತಿದ್ದು, ಅವುಗಳನ್ನು ಕನಿಷ್ಟ ಮುಂದಿನ ಶುಕ್ರವಾರದವರೆಗೂ ಕಾಯಬೇಕಾಗುತ್ತದೆ.   

ಪಾರ್ಕಿನ್ಸನ್ ಸಮಸ್ಯೆ ಎದುರಿಸುತ್ತಿರುವ ಫಾದರ್ ಸ್ತಾನ್ ಸ್ವಾಮಿ, ಚಳಿಗಾಲಕ್ಕೆ ಧರಿಸುವ ಬಟ್ಟೆಗಳನ್ನೂ ಕೇಳಿದ್ದರು.

ತಮ್ಮ ಬಂಧನದ ವೇಳೆ ವಶಕ್ಕೆ ಪಡೆಯಲಾಗಿದ್ದ ಸ್ಟ್ರಾ ಮತ್ತು ಸಿಪ್ಪರ್ ನ್ನು ತಮಗೆ ವಾಪಸ್ ನೀಡಬೇಕೆಂದು ಮನವಿ ಮಾಡಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಎನ್ಐಎ, ತನಿಖಾ ಸಂಸ್ಥೆ ಅದನ್ನು ವಶಕ್ಕೆ ಪಡೆದಿಲ್ಲ ಎಂದು ಕೋರ್ಟ್ ಗೆ ಸ್ಪಷ್ಟನೆ ನೀಡಿದೆ.

ಎನ್ಐಎ ಸ್ತಾನ್ ಸ್ವಾಮಿ ಅವರನ್ನು ಎಂದಿಗೂ ವಶಕ್ಕೆ ಪಡೆದಿಲ್ಲ, ಆದ್ದರಿಂದ ಅವರಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳೂ ಇಲ್ಲ, ಅವರನ್ನು ನೇರವಾಗಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿತ್ತು, ಆದ್ದರಿಂದ ಅವರು ಜೈಲು ಅಧಿಕಾರಿಗಳನ್ನೇ ಕೇಳಬೇಕೆಂದು ಎನ್ಐಎ ಹೇಳಿದೆ.

ಈಗ ನ್ಯಾಯಾಲಯ ಜೈಲು ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿದ್ದು ಡಿ.4 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT