ಆರ್ಷಿಯಾ-ನೂರುಲ್ಲಾ 
ದೇಶ

ಗರ್ಭಿಣಿ ಅತ್ತಿಗೆ ಅಂತಲೂ ನೋಡದೆ ಪತಿಯ ತಮ್ಮಂದಿರಿಂದ ಕಿರುಕುಳ, ಮನನೊಂದು ಗೃಹಿಣಿ ಆತ್ಮಹತ್ಯೆ!

ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಹೈದರಾಬಾದ್: ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಆರ್ಷಿಯಾ ಎಂದು ಗುರುತಿಸಲಾಗಿದೆ. ಆರ್ಷಿಯಾ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆಕೆಯನ್ನು 2019ರ ನವೆಂಬರ್ ನಲ್ಲಿ ಹಿಂದೂಪುರದ ಆರ್ಟಿಸಿ ಕಾಲೋನಿಯ ಸಾಫ್ಟ್ ವೇರ್ ಉದ್ಯೋಗಿ ನೂರುಲ್ಲಾಗೆ ಮದುವೆ ಮಾಡಿಕೊಟ್ಟಿದ್ದರು. 

ಮಗಳು ಸುಖವಾಗಿರಲೆಂದು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದು ಅಲ್ಲದೆ 5 ಲಕ್ಷ ವರದಕ್ಷಿಣ ಮತ್ತು ಅರ್ಧ ಕೆಜಿ ಚಿನ್ನಾಭರಣವನ್ನು ಸಹ ನೀಡಿದ್ದರು. ಆದರೆ ಇಷ್ಟಕ್ಕೆ ತೃಪ್ತಿಯಾಗ ನೂರುಲ್ಲಾ ವರದಕ್ಷಿಣೆ ಮತ್ತು ಕಾರು ತರುವಂತೆ ಕಿರುಕುಳ ನೀಡುತ್ತಿದ್ದರು. ಇದೇ ಅಲ್ಲದೆ ಅಣ್ಣ ಜೊತೆ ಸೇರಿ ಸಹೋದರರು ಸಹ ಕಿರುಕುಳ ನೀಡಲು ತೊಡಗಿದರು.

ಇನ್ನು ಅರ್ಷಿಯಾ ಗರ್ಭೀಣಿ ಎಂದು ತಿಳಿದ ಮೇಲೆ ನುರೂಲ್ಲಾ ಅನುಮಾನಿಸಲು ಪ್ರಾರಂಭಿಸಿದ್ದಾನೆ. ಇದರಿಂದ ನಿತ್ಯ ಮನೆಯಲ್ಲಿ ಜಗಳವಾಗುತ್ತಿತ್ತು. ಇದರಿಂದ ನೊಂದ ಆರ್ಷಿಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುದ್ದಿ ತಿಳಿದ ಆರ್ಷಿಯಾ ಪೋಷಕರು ಅಳಿಯ ನೂರುಲ್ಲನ ವಿರುದ್ಧ ದೂರು ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT