ಆರ್ಷಿಯಾ-ನೂರುಲ್ಲಾ 
ದೇಶ

ಗರ್ಭಿಣಿ ಅತ್ತಿಗೆ ಅಂತಲೂ ನೋಡದೆ ಪತಿಯ ತಮ್ಮಂದಿರಿಂದ ಕಿರುಕುಳ, ಮನನೊಂದು ಗೃಹಿಣಿ ಆತ್ಮಹತ್ಯೆ!

ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಹೈದರಾಬಾದ್: ಮದುವೆಯಾಗಿ ಒಂದು ವರ್ಷದಲ್ಲೇ ತಾನು ತಾಯಿಯಾಗುತ್ತಿರುವ ಖುಷಿ ಅನುಭವಿಸಬೇಕಿದ್ದ ಗೃಹಿಣಿಯೊಬ್ಬರು ಗಂಡ ಮತ್ತು ಆತನ ಸಹೋದರರ ಕಿರುಕುಳದಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಆರ್ಷಿಯಾ ಎಂದು ಗುರುತಿಸಲಾಗಿದೆ. ಆರ್ಷಿಯಾ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಆಕೆಯನ್ನು 2019ರ ನವೆಂಬರ್ ನಲ್ಲಿ ಹಿಂದೂಪುರದ ಆರ್ಟಿಸಿ ಕಾಲೋನಿಯ ಸಾಫ್ಟ್ ವೇರ್ ಉದ್ಯೋಗಿ ನೂರುಲ್ಲಾಗೆ ಮದುವೆ ಮಾಡಿಕೊಟ್ಟಿದ್ದರು. 

ಮಗಳು ಸುಖವಾಗಿರಲೆಂದು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದು ಅಲ್ಲದೆ 5 ಲಕ್ಷ ವರದಕ್ಷಿಣ ಮತ್ತು ಅರ್ಧ ಕೆಜಿ ಚಿನ್ನಾಭರಣವನ್ನು ಸಹ ನೀಡಿದ್ದರು. ಆದರೆ ಇಷ್ಟಕ್ಕೆ ತೃಪ್ತಿಯಾಗ ನೂರುಲ್ಲಾ ವರದಕ್ಷಿಣೆ ಮತ್ತು ಕಾರು ತರುವಂತೆ ಕಿರುಕುಳ ನೀಡುತ್ತಿದ್ದರು. ಇದೇ ಅಲ್ಲದೆ ಅಣ್ಣ ಜೊತೆ ಸೇರಿ ಸಹೋದರರು ಸಹ ಕಿರುಕುಳ ನೀಡಲು ತೊಡಗಿದರು.

ಇನ್ನು ಅರ್ಷಿಯಾ ಗರ್ಭೀಣಿ ಎಂದು ತಿಳಿದ ಮೇಲೆ ನುರೂಲ್ಲಾ ಅನುಮಾನಿಸಲು ಪ್ರಾರಂಭಿಸಿದ್ದಾನೆ. ಇದರಿಂದ ನಿತ್ಯ ಮನೆಯಲ್ಲಿ ಜಗಳವಾಗುತ್ತಿತ್ತು. ಇದರಿಂದ ನೊಂದ ಆರ್ಷಿಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸುದ್ದಿ ತಿಳಿದ ಆರ್ಷಿಯಾ ಪೋಷಕರು ಅಳಿಯ ನೂರುಲ್ಲನ ವಿರುದ್ಧ ದೂರು ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT