ಜಿಜೆಎಂ ನಾಯಕ ರೋಷನ್ ಗಿರಿ 
ದೇಶ

ಟಿಎಂಸಿ ನಾಯಕರ ಸರಣಿ ರಾಜೀನಾಮೆ ಬೆನ್ನಲ್ಲೇ ಮಮತಾ ಬ್ಯಾನರ್ಜಿಗೆ ಜಿಜೆಎಂ ಬೆಂಬಲ

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ನಾಯಕರ ಸರಣಿ ರಾಜೀನಾಮೆಯಿಂದ ಕಂಗೆಟ್ಟಿದ್ದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೆ ಜಿಜೆಎಂ ಬೆಂಬಲ ಘೋಷಿಸಿದ್ದು ಹೊಸ ಆಶಾಕಿರಣ ಮೂಡಿದೆ.

ಸಿಲಿಗಿರಿ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಪಕ್ಷದ ನಾಯಕರ ಸರಣಿ ರಾಜೀನಾಮೆಯಿಂದ ಕಂಗೆಟ್ಟಿದ್ದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಗೆ ಜಿಜೆಎಂ ಬೆಂಬಲ ಘೋಷಿಸಿದ್ದು ಹೊಸ ಆಶಾಕಿರಣ ಮೂಡಿದೆ.

ಗೋರ್ಖಾ ಜನಮುಕ್ತಿ ಮೋರ್ಚಾ (ಬಿಮಾಲ್ ಗುರುಂಗ್ ಬಣ)ದ ರೋಷನ್ ಗಿರಿ ಈ ಬಗ್ಗೆ ಮಾತನಾಡಿದ್ದು, 2021 ರ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. 

ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ರೋಷನ್ ಗಿರಿ, "ನಮಗೆ ಮೋಸ ಮಾಡಿದ ಬಿಜೆಪಿಯನ್ನು ಮಣಿಸಲು ನಾವು ನಿರ್ಧರಿಸಿದ್ದೇವೆ, 2009-2020 ರವರೆಗೆ ಅವರು ನೀಡಿರುವ ಭರವಸೆಗಳ ಪೈಕಿ ಒಂದೇ ಒಂದು ಭರವಸೆಯನ್ನೂ ಅವರು ಈಡೇರಿಸಿಲ್ಲ. ಅವರು ಕೇವಲ ಭರವಸೆಗಳನ್ನಷ್ಟೇ ನೀಡುತ್ತಾರೆ. ಉತ್ತರ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ನಾವು ಬೆಂಬಲಿಸಲಿದ್ದೇವೆ, ಅವರು ಮೂರನೇ ಬಾರಿ ಮುಖ್ಯಮಂತ್ರಿಯಾಗಬೇಕೆಂಬುದು ನಮ್ಮ ಆಶಯ" ಎಂದು ತಿಳಿಸಿದ್ದಾರೆ.

2024 ರ ಲೋಕಸಭಾ ಚುನಾವಣೆಯಲ್ಲಿ ಗೋರ್ಖಾಲ್ಯಾಂಡ್ ವಿಷಯಕ್ಕೆ ಯಾರು ಬೆಂಬಲಿಸುತ್ತಾರೋ ಅವರನ್ನು ನಾವು ಬೆಂಬಲಿಸುತ್ತೇವೆ ಎಂದು ರೋಷನ್ ಗಿರಿ ತಿಳಿಸಿದ್ದಾರೆ. 2021 ರಲ್ಲಿ 294 ಸ್ಥಾನಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಬಿರುಸಿನ ಪ್ರಚಾರ ಪ್ರಾರಂಭಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

“ನಮ್ಮನ್ನು ಕೆಣಕದಿರಿ”...: ಕೋಲ್ಕತಾ ಹೆಸರೆತ್ತಿ ಭಾರತಕ್ಕೆ ಪಾಕ್ ಬೆದರಿಕೆ, ಪದೇ ಪದೇ ಯುದ್ಧೋತ್ಸಾಹದ ಮಾತು..!

Uniform Civil Code: ಇದು ಸಂವಿಧಾನ ಉಲ್ಲಂಘನೆ, ಮುಸ್ಲಿಮರ ಮೇಲೆ ಹಿಂದೂ ಕಾಯ್ದೆ ಹೇರಿಕೆ ಒಪ್ಪಲ್ಲ; ಅಸಾದುದ್ದೀನ್ ಓವೈಸಿ

ಮಡಿಕೇರಿ: 3 ದಿನಗಳಾದರೂ ಪತ್ತೆಯಾಗದ ಟ್ರೆಕ್ಕಿಂಗ್ ಗೆ ತೆರಳಿದ್ದ ಕೇರಳದ ಯುವತಿ, ANF ನಿಂದ ತೀವ್ರ ಹುಡುಕಾಟ

ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ರಕ್ಷಿಸಿದರೆ, ಮೋದಿ ಸರ್ಕಾರ ಜನರ ಜೇಬು ಕತ್ತರಿಸುತ್ತಿದೆ: ರಂದೀಪ್ ಸಿಂಗ್ ಸುರ್ಜೆವಾಲಾ

SCROLL FOR NEXT