ಮಣಿಪುರದಲ್ಲಿ ಬಿಜೆಪಿ-ಎನ್ ಪಿಪಿ ಮೈತ್ರಿ ನಡುವೆ ಬಿರುಕು!: ಬಿಜೆಪಿಯಿಂದ ದ್ರೋಹದ ಆರೋಪ! 
ದೇಶ

ಮಣಿಪುರದಲ್ಲಿ ಬಿಜೆಪಿ-ಎನ್ ಪಿಪಿ ಮೈತ್ರಿ ನಡುವೆ ಬಿರುಕು!: ಬಿಜೆಪಿಯಿಂದ ದ್ರೋಹದ ಆರೋಪ! 

ಮಣಿಪುರದಲ್ಲಿ ಬಿಜೆಪಿ-ಎನ್ ಪಿಪಿ ಮೈತ್ರಿ ನಡುವೆ ಬಿರುಕು ಮೂಡಿರುವಂತೆ ಕಾಣುತ್ತಿದೆ. 

ಮಣಿಪುರ: ಮಣಿಪುರದಲ್ಲಿ ಬಿಜೆಪಿ-ಎನ್ ಪಿಪಿ ಮೈತ್ರಿ ನಡುವೆ ಬಿರುಕು ಮೂಡಿರುವಂತೆ ಕಾಣುತ್ತಿದೆ. 

ಬಿಜೆಪಿ ಸರ್ಕಾರದಲ್ಲಿ ತನ್ನ ಪಕ್ಷದ ನಾಲ್ವರು ಸಚಿವರ ಪೈಕಿ ಇಬ್ಬರನ್ನು ಕೈಬಿಟ್ಟಿರುವುದನ್ನು ದ್ರೋಹ ಎಂದು ಎನ್ ಪಿಪಿ ಹೇಳಿದೆ. 

ಗುವಾಹಟಿಯಲ್ಲಿರುವ ನಾಲ್ವರು ಎನ್ ಪಿಪಿ ಶಾಸಕರು ಸಭೆ ನಡೆಸಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾನುವಾರ ಸಂಜೆ ಮತ್ತೊಂದು ಸುತ್ತಿನ ಸಭೆಯ ಬಳಿಕ ಬಿಜೆಪಿ ಜೊತೆಗಿನ ಎನ್ ಪಿಪಿ ಮೈತ್ರಿ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಲಾಗುತ್ತಿದೆ. 

ನಮಗೆ ಅಸಮಾಧಾನ ಉಂಟಾಗಿದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ನಮಗೆ ಭರವಸೆ ನೀಡಿದ್ದರು, ಆದರೆ ಈಗ ಅದು ಈಡೇರಿಕೆಯಾಗಿಲ್ಲ. ನಮಗೆ ದ್ರೋಹವಾಗಿದೆ ಎಂದು ಎನ್ ಪಿಪಿ ಶಾಸಕರೊಬ್ಬರು ಹೇಳಿದ್ದಾರೆ. 

ನಾಲ್ವರು ಶಾಸಕರು ಉಪಮುಖ್ಯಮಂತ್ರಿ ವೈ ಜೋಯ್ ಕುಮಾರ್ ಸಿಂಗ್, ಸಚಿವ ಲೆಟ್ಪೌ ಹೌಕಿಪ್, ಸಂಪುಟದಿಂದ ಕೈಬಿಡಲಾದ ಎಲ್ ಜಯಂತಕುಮಾರ್, ಎನ್ ಕಯಿಸಿ ಗುವಾಹಟಿಯಲ್ಲಿದ್ದಾರೆ. 

ಗುರುವಾರದಂದು ಮಣಿಪುರದ ಬಿಜೆಪಿ ನೇತೃತ್ವದ ಸಿಎಂ ಎನ್ ಬಿರೇನ್ ಸಿಂಗ್ ಸಚಿವ ಸಂಪುಟ ಪುನಾರಚನೆಯಲ್ಲಿ ಮೂವರು ಬಿಜೆಪಿ ಸಚಿವರೂ ಸೇರಿ ಒಟ್ಟು 6 ಸಚಿವರನ್ನು ಸಂಪುಟದಿಂದ ಕೈಬಿಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT