ನವದೆಹಲಿ: ಬಿಜೆಪಿ ನಾಯಕ, ಮಾಜಿ ಸಂಸದ ಹರಿನಾರಾಯಣ್ ರಾಜ್ಭರ್ ಅವರು ರೈತನಾಯಕ, ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಉಗ್ರಗಾಮಿ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಎಂಎಸ್ ಪಿ ಕಾನೂನು ಜಾರಿಗೊಳಿಸಿ ಅಥವಾ ಗಣರಾಜ್ಯ ದಿನದಂದು ಮತ್ತೊಂದು ಪ್ರಬಲ ಪ್ರತಿಭಟನೆ ಎದುರಿಸಿ: ಟಿಕಾಯತ್
ಕೇಂದ್ರ ಇತ್ತೀಚಿಗೆ ಹಿಂಪಡೆದ ಕೃಷಿ ಕಾನೂನಿನಿಂದ ನಿಜವಾದ ರೈತರಿಗೆ ಲಾಭವಾಗುತ್ತಿತ್ತು, ಆದರೆ ಅದರ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಖಲಿಸ್ತಾನಿ ಗೂಂಡಾಗಳಿಗೆ ಲಾಭವಾಗುವ ಹಾಗೆ ರಾಕೇಶ್ ಟಿಕಾಯತ್ ಮಾಡಿದ್ದಾರೆ ಎಂದು ಹರಿನಾರಾಯಣ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ಒಂದೇ ಅಲ್ಲ, ನಮ್ಮ ಬೇಡಿಕೆ ಈಡೇರುವತನಕ ರೈತ ಪ್ರತಿಭಟನೆ ನಿಲ್ಲದು: ರಾಕೇಶ್ ಟಿಕಾಯತ್ ಗುಡುಗು
ರೈತ ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟ 700 ಮಂದಿ ರೈತರ ಸಾವಿಗೆ ರಾಕೇಶ್ ಟಿಕಾಯತ್ ಕಾರಣವೇ ಹೊರತು ಕೇಂದ್ರ ಸರ್ಕಾರ ಅಲ್ಲ ಎಂದು ಅವರು ತೀವ್ರವಾಗಿ ಕಿಡಿ ಕಾರಿದ್ದಾರೆ.