ದೇಶ

ವರದಿಗಾರರ ವಿರುದ್ಧ ನಕಲಿ ಪ್ರಕರಣ ದಾಖಲು: ಯೋಗಿ ಸರ್ಕಾರದ ವಿರುದ್ಧ ಯುಪಿ ಪತ್ರಕರ್ತರು ಪ್ರತಿಭಟನೆ

Lingaraj Badiger

ಬಹ್ರೇಚ್(ಉತ್ತರ ಪ್ರದೇಶ): ವರದಿಗಾರರ ವಿರುದ್ಧ ನಕಲಿ ಪ್ರಕರಣ ದಾಖಲಿಸಿದ್ದನ್ನು ವಿರೋಧಿಸಿ ಪತ್ರಕರ್ತರು ಬುಧವಾರ ಜಿಲ್ಲೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು ಮತ್ತು ಈ ಸಂಬಂಧ ನಗರ್ ಕೊಟ್ವಾಲಿಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.

ಉತ್ತರ ಪ್ರದೇಶ ಉತ್ತರ ಪ್ರದೇಶದ ಕಾರ್ಯನಿರತ ಪತ್ರಕರ್ತರ ಸಂಘ(ಯುಪಿಡಬ್ಲ್ಯುಜೆಯು)ದ ಜಿಲ್ಲಾ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಕ್ಲಾಕ್ ಟವರ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಇನ್ಸ್‌ಪೆಕ್ಟರ್ ಇನ್-ಚಾರ್ಜ್ ಮಧುಪ್ ನಾಥ್ ಮಿಶ್ರಾ ಮತ್ತು ಪೊಲೀಸ್ ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸುವಂತೆ ಪತ್ರಕರ್ತರು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಒತ್ತಾಯಿಸಿದರು. 

ನಂತರ ಪತ್ರಕರ್ತರ ಪ್ರತಿನಿಧಿಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು ಮತ್ತು 24 ಗಂಟೆಗಳಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ಯೂನಿಯನ್‌ನ ಬಹ್ರೇಚ್ ಘಟಕದ ಅಧ್ಯಕ್ಷ ವೀರೇಂದ್ರ ಶ್ರೀವಾಸ್ತವ ಮಾತನಾಡಿ, ರಾಷ್ಟ್ರಮಟ್ಟದ ಟಿವಿ ಚಾನೆಲ್ ಮತ್ತು ಸುದ್ದಿ ಸಂಸ್ಥೆ ಸಲೀಮ್ ಸಿದ್ದಿಕಿ ಅವರೊಂದಿಗೆ ಕೆಲವು ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಮಿಶ್ರಾ ಅವರು ವಕ್ಫ್ ಭೂಮಿಯ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಈ ತಿಂಗಳು ನಕಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

SCROLL FOR NEXT