ಸಂಗ್ರಹ ಚಿತ್ರ 
ದೇಶ

ಅರುಣಾಚಲ ಪ್ರದೇಶದ ಐಪಿಎಸ್ ಆಕಾಂಕ್ಷಿಗಳಿಗೆ ಕನಿಷ್ಠ ಎತ್ತರ ನಿಯಮಾವಳಿಯಲ್ಲಿ ವಿನಾಯಿತಿ ಕೊಡಿ: ಕೇಂದ್ರಕ್ಕೆ ಬಿಜೆಪಿ ಸಂಸದ ಮನವಿ

ಅರುಣಾಚಲ ಪ್ರದೇಶದ ಅಭ್ಯರ್ಥಿಗಳಿಗೆ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಗೆ ಸೇರಲು ಅನುಕೂಲವಾಗುವಂತೆ ಕನಿಷ್ಠ ಎತ್ತರ ಮಿತಿಯನ್ನು ಸಡಿಲಿಸುವಂತೆ ಬಿಜೆಪಿ ಲೋಕಸಭಾ ಸಂಸದ ತಪೀರ್ ಗಾವೋ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಟಾನಗರ: ಅರುಣಾಚಲ ಪ್ರದೇಶದ ಅಭ್ಯರ್ಥಿಗಳಿಗೆ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಗೆ ಸೇರಲು ಅನುಕೂಲವಾಗುವಂತೆ ಕನಿಷ್ಠ ಎತ್ತರ ಮಿತಿಯನ್ನು ಸಡಿಲಿಸುವಂತೆ ಬಿಜೆಪಿ ಲೋಕಸಭಾ ಸಂಸದ ತಪೀರ್ ಗಾವೋ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅರುಣಾಚಲ ಪ್ರದೇಶದ ಅಭ್ಯರ್ಥಿಗಳಿಗೆ ಎತ್ತರದ ನಿಯಮಾವಳಿಯಲ್ಲಿ ವಿನಾಯಿತಿ ನೀಡಿದರೆ ಅರ್ಹರಾಗಿರುವ ಸಮುದಾಯಗಳಿಗೆ ಸೇರಿದವರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಅರುಣಾಚಲ ಪ್ರದೇಶದ ಪೂರ್ವ ಕ್ಷೇತ್ರದ ಸಂಸದ ಗಾವೊ ಅವರು ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಅರುಣಾಚಲ ಪ್ರದೇಶದ ವೈದ್ಯರೊಬ್ಬರು 2.5 ಸೆಂ.ಮೀ. ಎತ್ತರದಲ್ಲಿನ ವ್ಯತ್ಯಾಸದಿಂದ ಕನಸನ್ನು ಕೈಬಿಟ್ಟರೆಂದಿದ್ದಾರೆ.

ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಓಜಿಂಗ್ ದಮೆಂಗ್ ಅವರು ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಪರಿಶಿಷ್ಟ ಪಂಗಡ ವಿಭಾಗದಲ್ಲಿ ಐಪಿಎಸ್ ಅಧಿಕಾರಿಗಳ ತಾತ್ಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಐಪಿಎಸ್‌ಗೆ ಅನರ್ಹನೆಂದು ತಿಳಿದುಬಂದಿದೆ ಏಕೆಂದರೆ ಅವರ ಎತ್ತರ 162.5 ಸೆಂ.ಮೀ ಇದು ಐಪಿಎಸ್‌ಗಾಗಿ ಪುರುಷ ಅಭ್ಯರ್ಥಿಗಳಿಗೆ ಅಗತ್ಯವಿರುವ ಕನಿಷ್ಠ ಎತ್ತರ 165 ಸೆಂ.ಮೀ ಗಿಂತ 2.5 ಸೆಂ.ಮೀ ಕಡಿಮೆ.    

ಕನಿಷ್ಠ 165 ಸೆಂ.ಮೀ ಎತ್ತರವು ಅರುಣಾಚಲ ಪ್ರದೇಶದ ಆಕಾಂಕ್ಷಿಗಳ ಐಪಿಎಸ್ ಕನಸನ್ನು ಮುರಿಯುತ್ತಿದೆ ಎಂದು ಗಾವೊ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ರಾಜ್ಯ ಪೊಲೀಸ್ ಅಧಿಕಾರಿಗಳ ನೇಮಕದಲ್ಲಿ ಕನಿಷ್ಠ 160 ಸೆಂ.ಮೀ ಎತ್ತರ(ಪುರುಷರಿಗೆ) ಪರಿಗಣಿಸಲಾಗುವುದು. ಎಂದು ಅವರು ಹೇಳಿದರು. ಈ ಅಧಿಕಾರಿಗಳನ್ನು ನಂತರ ಐಪಿಎಸ್‌ಗೆ ಬಡ್ತಿ ನೀಡಲಾಗುತ್ತದೆ. "ಇದನ್ನು ಗಮನದಲ್ಲಿಟ್ಟುಕೊಂಡು, ಅರುಣಾಚಲ ಪ್ರದೇಶದ ಸಾವಿರಾರು ನಾಗರಿಕ ಸೇವಾ ಆಕಾಂಕ್ಷಿಗಳು ಪ್ರತಿವರ್ಷ ಯುಪಿಎಸ್ಸಿ ಪರೀಕ್ಷೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶಗಳನ್ನು ಕಸಿದುಕೊಳ್ಳುವಂತಾಗಬಾರದು ಎಂಬ ಅಂಶವನ್ನು ಪರಿಗಣಿಸಿ. ಈ ವಿಷಯವನ್ನು ಗಮನಿಸಲು ನಾನು ವಿನಂತಿಸುತ್ತೇನೆ ಮತ್ತು ಅರುಣಾಚಲ ಪ್ರದೇಶದ ಜನರ ಹಿತದೃಷ್ಟಿಯಿಂದ ಅಗತ್ಯ ನಿರ್ದೇಶನಗಳು ಮತ್ತು ಕ್ರಮಗಳನ್ನು ತೆಗೆದುಕೊಳ್ಳುವುದು" ಬಿಜೆಪಿ ಸಂಸದ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ: ಇರಾನ್ ಪ್ರಮುಖ ಸೇತುವೆ ಧ್ವಂಸ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬನ್ನಿ; ಟೆಹ್ರಾನ್'ಗೆ ಟ್ರಂಪ್ ಎಚ್ಚರಿಕೆ

'ನಾನಿನ್ನೂ IPL ಮುಖ್ಯಸ್ಥನಾಗಿದ್ರೆ ತಕ್ಷಣವೇ ಸಂಜೀವ್ ಗೋಯೆಂಕಾ ಬ್ಯಾನ್' ಮಾಡ್ತಿದೆ- ಲಲಿತ್ ಮೋದಿ

ಡಾಕ್ಟರ್ ಮಗ ಡಾಕ್ಟರ್ ಆಗ್ತಾನೆ, MLA ಮಗ MLA ಆಗೋದ್ರಲ್ಲಿ ತಪ್ಪೇನು?: ಕುಟುಂಬ ರಾಜಕೀಯಕ್ಕೆ ಎಂ.ಬಿ.ಪಾಟೀಲ್ ಸಮರ್ಥನೆ

LPG ಬಿಕ್ಕಟ್ಟು ತೀವ್ರ: ಬೆಂಗಳೂರಿನ ಆಟೋ ಚಾಲಕರ ಬದುಕು ಬೀದಿಗೆ!

IPL 2026: ರನ್ ಕದಿಯಲು ಹೋಗಿ ರನೌಟ್ ಆದ ರಘುವಂಶಿ, ಮೈದಾನದಲ್ಲೇ ಸಿಟ್ಟಾದ ರಿಂಕ್ ಸಿಂಗ್ !Video

SCROLL FOR NEXT