ನವದೆಹಲಿ: ಕೊರೊನಾ ನಂತರ ಲಾಕ್ ಡೌನ್ ಹಿಂಪಡೆಕೊಂಡಿರುವುದರಿಂದ ಹಾಗೂ ಸಾಲು ಸಾಲು ಹಬ್ಬಗಳಿಂದಾಗಿ ನಗರಪ್ರದೇಶಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಉದ್ಯೋಗಾವಕಾಶಗಳು ಮತ್ತೆ ಏರುಗತಿಯಲ್ಲಿ ಸಾಗಿದೆ. ಅದರ ಪರಿಣಾಮವಾಗಿ ದೇಶಾದ್ಯಂತ ನೇಮಕಾತಿ ಪ್ರಮಾಣವೂ ಹೆಚ್ಚುತ್ತಿರುವ ಬೆಳವಣಿಗೆ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಇದೇ ವೇಳೆ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿರುವುದು ಕಳವಳ ಹುಟ್ಟಿಸಿದೆ. ನಾಲ್ಕು ತಿಂಗಳ ಹಿಂದೆ ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.7.75ರಷ್ಟಿತ್ತು. ಈಗ ಆ ಪ್ರಮಾಣ ಶೇ.7.38ಕ್ಕೆ ಕುಸಿದಿದೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ಮಹಾರಾಷ್ಟ್ರ ಮಾದರಿ ಅಳವಡಿಸಿಕೊಳ್ಳಿ: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ
ನಾಲ್ಕು ತಿಂಗಳ ಕೆಳಗೆ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.6.86ರಷ್ಟಿತ್ತು. ಈಗ ಈ ಪ್ರಮಾಣ ಶೇ.7.91ಕ್ಕೆ ಏರಿಕೆಯಾಗಿದೆ. ನಗರಪ್ರದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಐಟಿ ಕ್ಷೇತ್ರದಲ್ಲಿನ ಪ್ರಗತಿ ಕಾರಣ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಳ: ಕೊರೊನಾ ಹಿನ್ನೆಲೆಯ ಬಡತನ ಮತ್ತು ನಿರುದ್ಯೋಗ ಕಾರಣ
ದೇಶವನ್ನು ನಿರುದ್ಯೋಗ ಕೊಂಪೆ ಮಾಡುವತ್ತ ಪ್ರಧಾನಿ ಮೋದಿ ಆಡಳಿತ: ಡಿಕೆ ಶಿವಕುಮಾರ್ ಕಿಡಿ
ಕೇಂದ್ರದ ಎನ್ಎಂಪಿ ನೀತಿಯಿಂದ ನಿರುದ್ಯೋಗ ಸೃಷ್ಟಿ: ಮಲ್ಲಿಕಾರ್ಜುನ ಖರ್ಗೆ
ಜಪಾನ್ ನಲ್ಲಿ ನಿರುದ್ಯೋಗಿ ಸ್ಮಾರ್ಟ್ ಮಡದಿಯರ ಸಂಖ್ಯಾ ಸ್ಫೋಟ
ಮಹಾರಾಷ್ಟ್ರ: ಅನಾರೋಗ್ಯ ಪೀಡಿತ ಪತ್ನಿಯ ಆರೈಕೆ ಮಾಡಿ ಬೇಸತ್ತ ನಿರುದ್ಯೋಗಿ ವ್ಯಕ್ತಿಯಿಂದ ಆಕೆಯ ಹತ್ಯೆ!
ಯುವ ಜನತೆ ಉದ್ಯೋಗಕ್ಕಾಗಿ ಆಗ್ರಹಿಸುತ್ತಿದ್ದು, ಸರ್ಕಾರ ನಿರುದ್ಯೋಗ ನೀಡಿದೆ: ರಾಹುಲ್, ಪ್ರಿಯಾಂಕಾ ಕಿಡಿ
ನೋಟ್ ಬ್ಯಾನ್ ನಿಂದಾಗಿ ನಿರುದ್ಯೋಗ ಸಿಕ್ಕಾಪಟ್ಟೆ ಹೆಚ್ಚಾಗಿದೆ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್