ದೇಶ

ಮಾಜಿ ಪ್ರಧಾನಿ ದೇವೇಗೌಡರ ಜೊತೆ ಇಡ್ಲಿ, ದೋಸೆ, ವಡಾ ಸವಿದ ಸಂಸದ ಸುಬ್ರಮಣಿಯನ್ ಸ್ವಾಮಿ

Harshavardhan M

ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ದೇವೇಗೌಡ ಅವರೊಂದಿಗೆ ಉಪಾಹಾರ ಸೇವಿಸಿದ್ದಾರೆ. ಈ ಬಗ್ಗೆ ಸ್ವಾಮಿ ಅವ್ರೇ ಕೂ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 

ಇಡ್ಲಿ, ದೋಸೆ, ವಡಾ ತಿನ್ನಲು ತಮ್ಮನ್ನು ಆಹ್ವಾನಿಸಿದ್ದರು. ಹೀಗಾಗಿ ಇಂದು ಬೆಳಿಗ್ಗೆ ನಾನು ನನ್ನ ಬಹುಕಾಲದ ಗೆಳೆಯರಾದ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದಾಗಿ ಸ್ವಾಮಿ ಹೇಳಿದ್ದಾರೆ.

ಭೇಟಿ ವೇಳೆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಜೊತೆಗೆ ಭವಿಷ್ಯದ ಕುರಿತು ಚರ್ಚಿಸಲಾಯಿತು. ಈ ಭೇಟಿಯಿಂದ ಅಂಧ ಭಕ್ತರಿಗೆ ಆಘಾತವಾಗಿರಲಾಗದು ಎಂದು ಭಾವಿಸುವುದಾಗಿ ಅವರು ಅಣಕವಾಡಿದ್ದಾರೆ. 

SCROLL FOR NEXT