ಮೃತ ರಾಜು 
ದೇಶ

ಸೈದಾಬಾದ್ ಅತ್ಯಾಚಾರ ಆರೋಪಿ ಸಾವು: ನ್ಯಾಯಾಂಗ ತನಿಖೆಗೆ ತೆಲಂಗಾಣ ಹೈಕೋರ್ಟ್ ಆದೇಶ

ಸಿಂಗರೇಣಿ ಕಾಲೋನಿ 6 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪಾಲಕೊಂಡ ರಾಜು ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆಗೆ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ. 

ಹೈದರಾಬಾದ್: ಸಿಂಗರೇಣಿ ಕಾಲೋನಿ 6 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪಾಲಕೊಂಡ ರಾಜು ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆಗೆ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ. 

ರಾಜು ಸಾವಿನ ಕುರಿತಂತೆ ನಾಗರಿಕ ಹಕ್ಕುಗಳ ಮುಖಂಡರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ಎಸ್.ರಾಮಚಂದರ್ ರಾವ್ ಮತ್ತು ನ್ಯಾಯಮೂರ್ತಿ ಟಿ.ಅಮರನಾಥ ಗೌಡ್ ನೇತೃತ್ವದ ವಿಭಾಗೀಯ ಪೀಠವು ಅತ್ಯಾಚಾರ ಪ್ರಕರಣದ ಆರೋಪಿ ಪಾಲಕೊಂಡ ರಾಜು ಆತ್ಮಹತ್ಯೆ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ವಾರಂಗಲ್ ನ 3 ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗೆ ಆದೇಶಿಸಿದೆ. 

ಅಂತೆಯೇ ಅವರ ಸ್ಥಳೀಯ ನ್ಯಾಯವ್ಯಾಪ್ತಿಯಲ್ಲೇ ಈ ಅಪರಾಧ ನಡೆದಿದ್ದು, ಇದು ನ್ಯಾಯಾಂಗ ವಿಚಾರಣೆಗೆ ಕಾರಣವಾಗಿದೆ ಎಂದು ನ್ಯಾಯಾಧೀಶರು 3 ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್, ವಾರಂಗಲ್‌ಗೆ ನಿರ್ದೇಶನ ನೀಡಿದೆ. ಅಲ್ಲದೆ ಪೊಲೀಸರು ಮತ್ತು ಮೃತ ಪಾಲಕೊಂಡ ರಾಜು ಅಥವಾ ಇತರ ಯಾವುದೇ ವ್ಯಕ್ತಿಗಳ ಕುಟುಂಬ ಸದಸ್ಯರು, ಈ ವಿಷಯದ ಬಗ್ಗೆ ಯಾವುದೇ ವಿಷಯವನ್ನುತಿಳಿದಿದ್ದರೆ, 4 ವಾರಗಳಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬಹುದು. ಈ ಮ್ಯಾಜಿಸ್ಟ್ರೇಟ್ ತನ್ನ ವಿಚಾರಣೆಯ ವರದಿಯನ್ನು ಹೈಕೋರ್ಟ್‌ಗೆ ಸೀಲ್ ಮಾಡಿದ ಕವರ್‌ನಲ್ಲಿ ರಿಜಿಸ್ಟ್ರಾರ್ ನ್ಯಾಯಾಂಗಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಹೇಳಿದೆ. 

ಇದಕ್ಕೂ ಮೊದಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ತೆಲಂಗಾಣ ಪೊಲೀಸರೇ ರಾಜುವನ್ನು ಹತ್ಯೆ ಮಾಡಿ ಬಳಿಕ ಅದನ್ಮು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ. ಹೀಗಾಗಿ ಈ ಕುರಿತು ಕೂಲಂಕುಷ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅಲ್ಲದೆ ಅರ್ಜಿದಾರರು ಪಾಲಕೊಂಡ ರಾಜುವಿನ ಪೋಷಕರ ಹೇಳಿಕೆಯನ್ನೂ ತಮ್ಮ ಅರ್ಜಿಯಲ್ಲಿ ದಾಖಲಿಸಿದ್ದು, ರಾಜುವಿನ ತಾಯಿ ಮತ್ತು ಪತ್ನಿ ಕೂಡ ರಾಜನ ಆತ್ಮಹತ್ಯೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ರಾಜುವಿನ ಪತ್ನಿ ಮೌನಿಕಾ ತನ್ನ ಪತಿಯನ್ನು ಪೊಲೀಸರು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜನನ್ನು ಪತ್ತೆ ಮಾಡಲಾಗಿದೆ ಮತ್ತು ಆತನನ್ನು ಎದುರಿಸಲು ಮೇಲಾಧಿಕಾರಿಗಳಿಂದ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸರು ಹೇಳುವುದನ್ನು ತಾವು ಕೇಳಿದ್ದೇವೆ ಎಂದು ಮೌನಿಕಾ ಹೇಳಿದ್ದರು. “ಇದು ನಮ್ಮ ಗಮನಕ್ಕೆ ಬಂದಿತು. ತನ್ನ ಪತಿಯನ್ನು ಪೊಲೀಸರು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೌನಿಕಾ ಹೇಳಿದ್ದಾರೆ. 

ಇತ್ತ ರಾಜು ತಾಯಿ, ನಾನು, ನನ್ನ ಸೊಸೆಯಂದಿರು ಅನಾಥರಾಗಿದ್ದೇವೆ. ಭಾನುವಾರವೇ ಆತ ಸಿಕ್ಕಿದ್ದಾನೆ ಎಂದು  ಹೇಳಿದರು. ಬಳಿಕ ಆತ ಸಿಗಲಿಲ್ಲ ಎಂದು ಹೇಳಿದರು. ಬುಧವಾರ ರಾತ್ರಿ ನಮ್ಮನ್ನು ಮನೆಗೆ ಕಳುಹಿಸುವಾಗ ಪೊಲೀಸರು ನಮಗೆ ಸೊಸೆ ಮತ್ತು ಮೊಮ್ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದರು. ಆಗ ನಮಗೆ ಅನುಮಾನ ಬಂದಿತು ಎಂದು ರಾಜುವಿನ ತಾಯಿ ಈರಮ್ಮ ಹೇಳಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

G20 Summit: ಭಯೋತ್ಪಾದನೆ- ಮಾದಕ ದ್ರವ್ಯ ಸಾಗಾಟ ತಡೆಗೆ ಜಾಗತಿಕ ಕ್ರಮ, ನಾಲ್ಕು ಉಪ ಕ್ರಮ ಪ್ರಸ್ತಾಪಿಸಿದ ಪ್ರಧಾನಿ ಮೋದಿ!

"ಗಾಳ ಹಾಕಿ ಮೀನು ಹಿಡಿಯುವ ಕಲೆಗಾರಿಕೆ ನನಗಿದೆ": ಸಿಎಂ ಎದುರೇ DK Shivakumar ಮಾರ್ಮಿಕ ಮಾತು!

Ashes: ಎರಡೇ ದಿನಕ್ಕೇ Australia vs England ಮೊದಲ ಟೆಸ್ಟ್ ಮುಕ್ತಾಯ; 104 ವರ್ಷಗಳ ಬಳಿಕ ಅತ್ಯಪರೂಪದ ದಾಖಲೆ!

ನೀವು ಮತ ನೀಡದಿದ್ದರೆ ನಾನು ನಿಮ್ಮ ನಗರಕ್ಕೆ ಹಣ ನೀಡುವುದಿಲ್ಲ: ಅಜಿತ್ ಪವಾರ್ ಬಹಿರಂಗ ಬೆದರಿಕೆ

SCROLL FOR NEXT