ಮೃತ ರಾಜು 
ದೇಶ

ಸೈದಾಬಾದ್ ಅತ್ಯಾಚಾರ ಆರೋಪಿ ಸಾವು: ನ್ಯಾಯಾಂಗ ತನಿಖೆಗೆ ತೆಲಂಗಾಣ ಹೈಕೋರ್ಟ್ ಆದೇಶ

ಸಿಂಗರೇಣಿ ಕಾಲೋನಿ 6 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪಾಲಕೊಂಡ ರಾಜು ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆಗೆ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ. 

ಹೈದರಾಬಾದ್: ಸಿಂಗರೇಣಿ ಕಾಲೋನಿ 6 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಪಾಲಕೊಂಡ ರಾಜು ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆಗೆ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ. 

ರಾಜು ಸಾವಿನ ಕುರಿತಂತೆ ನಾಗರಿಕ ಹಕ್ಕುಗಳ ಮುಖಂಡರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ಎಸ್.ರಾಮಚಂದರ್ ರಾವ್ ಮತ್ತು ನ್ಯಾಯಮೂರ್ತಿ ಟಿ.ಅಮರನಾಥ ಗೌಡ್ ನೇತೃತ್ವದ ವಿಭಾಗೀಯ ಪೀಠವು ಅತ್ಯಾಚಾರ ಪ್ರಕರಣದ ಆರೋಪಿ ಪಾಲಕೊಂಡ ರಾಜು ಆತ್ಮಹತ್ಯೆ ಸಾವಿನ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ವಾರಂಗಲ್ ನ 3 ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗೆ ಆದೇಶಿಸಿದೆ. 

ಅಂತೆಯೇ ಅವರ ಸ್ಥಳೀಯ ನ್ಯಾಯವ್ಯಾಪ್ತಿಯಲ್ಲೇ ಈ ಅಪರಾಧ ನಡೆದಿದ್ದು, ಇದು ನ್ಯಾಯಾಂಗ ವಿಚಾರಣೆಗೆ ಕಾರಣವಾಗಿದೆ ಎಂದು ನ್ಯಾಯಾಧೀಶರು 3 ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್, ವಾರಂಗಲ್‌ಗೆ ನಿರ್ದೇಶನ ನೀಡಿದೆ. ಅಲ್ಲದೆ ಪೊಲೀಸರು ಮತ್ತು ಮೃತ ಪಾಲಕೊಂಡ ರಾಜು ಅಥವಾ ಇತರ ಯಾವುದೇ ವ್ಯಕ್ತಿಗಳ ಕುಟುಂಬ ಸದಸ್ಯರು, ಈ ವಿಷಯದ ಬಗ್ಗೆ ಯಾವುದೇ ವಿಷಯವನ್ನುತಿಳಿದಿದ್ದರೆ, 4 ವಾರಗಳಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬಹುದು. ಈ ಮ್ಯಾಜಿಸ್ಟ್ರೇಟ್ ತನ್ನ ವಿಚಾರಣೆಯ ವರದಿಯನ್ನು ಹೈಕೋರ್ಟ್‌ಗೆ ಸೀಲ್ ಮಾಡಿದ ಕವರ್‌ನಲ್ಲಿ ರಿಜಿಸ್ಟ್ರಾರ್ ನ್ಯಾಯಾಂಗಕ್ಕೆ ಸಲ್ಲಿಸಬೇಕು ಎಂದು ಹೈಕೋರ್ಟ್ ಹೇಳಿದೆ. 

ಇದಕ್ಕೂ ಮೊದಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ತೆಲಂಗಾಣ ಪೊಲೀಸರೇ ರಾಜುವನ್ನು ಹತ್ಯೆ ಮಾಡಿ ಬಳಿಕ ಅದನ್ಮು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ. ಹೀಗಾಗಿ ಈ ಕುರಿತು ಕೂಲಂಕುಷ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಗೆ ಮನವಿ ಮಾಡಿದ್ದರು. ಅಲ್ಲದೆ ಅರ್ಜಿದಾರರು ಪಾಲಕೊಂಡ ರಾಜುವಿನ ಪೋಷಕರ ಹೇಳಿಕೆಯನ್ನೂ ತಮ್ಮ ಅರ್ಜಿಯಲ್ಲಿ ದಾಖಲಿಸಿದ್ದು, ರಾಜುವಿನ ತಾಯಿ ಮತ್ತು ಪತ್ನಿ ಕೂಡ ರಾಜನ ಆತ್ಮಹತ್ಯೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ರಾಜುವಿನ ಪತ್ನಿ ಮೌನಿಕಾ ತನ್ನ ಪತಿಯನ್ನು ಪೊಲೀಸರು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜನನ್ನು ಪತ್ತೆ ಮಾಡಲಾಗಿದೆ ಮತ್ತು ಆತನನ್ನು ಎದುರಿಸಲು ಮೇಲಾಧಿಕಾರಿಗಳಿಂದ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸರು ಹೇಳುವುದನ್ನು ತಾವು ಕೇಳಿದ್ದೇವೆ ಎಂದು ಮೌನಿಕಾ ಹೇಳಿದ್ದರು. “ಇದು ನಮ್ಮ ಗಮನಕ್ಕೆ ಬಂದಿತು. ತನ್ನ ಪತಿಯನ್ನು ಪೊಲೀಸರು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೌನಿಕಾ ಹೇಳಿದ್ದಾರೆ. 

ಇತ್ತ ರಾಜು ತಾಯಿ, ನಾನು, ನನ್ನ ಸೊಸೆಯಂದಿರು ಅನಾಥರಾಗಿದ್ದೇವೆ. ಭಾನುವಾರವೇ ಆತ ಸಿಕ್ಕಿದ್ದಾನೆ ಎಂದು  ಹೇಳಿದರು. ಬಳಿಕ ಆತ ಸಿಗಲಿಲ್ಲ ಎಂದು ಹೇಳಿದರು. ಬುಧವಾರ ರಾತ್ರಿ ನಮ್ಮನ್ನು ಮನೆಗೆ ಕಳುಹಿಸುವಾಗ ಪೊಲೀಸರು ನಮಗೆ ಸೊಸೆ ಮತ್ತು ಮೊಮ್ಮಗಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದರು. ಆಗ ನಮಗೆ ಅನುಮಾನ ಬಂದಿತು ಎಂದು ರಾಜುವಿನ ತಾಯಿ ಈರಮ್ಮ ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

26/11 ದಾಳಿಯ ನಂತರ ಪ್ರತೀಕಾರ ತಡೆದವರು ಯಾರು ಎಂಬುದನ್ನು ಕಾಂಗ್ರೆಸ್ ದೇಶಕ್ಕೆ ತಿಳಿಸಬೇಕು: ಪ್ರಧಾನಿ ಮೋದಿ

ಸಿಜೆಐ ಮೇಲೆ ಶೂ ಎಸೆದ ವಕೀಲನ ವಿರುದ್ಧ ನಿರ್ಣಾಯಕ ಕ್ರಮಕೈಗೊಳ್ಳಿ: ಕೇಂದ್ರ ಸರ್ಕಾರಕ್ಕೆ ಖರ್ಗೆ ಒತ್ತಾಯ

ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ; ICUನಿಂದ ವಾರ್ಡ್​ ಗೆ ಶಿಫ್ಟ್

ಔರಂಗಜೇಬ್ ಆಡಳಿತದಡಿ ಮಾತ್ರ India ಅಖಂಡವಾಗಿತ್ತು; ಭಾರತದೊಂದಿಗೆ ಯುದ್ಧದ ಸಾಧ್ಯತೆ ನಿಜ: ಪಾಕಿಸ್ತಾನ ರಕ್ಷಣಾ ಸಚಿವ

ಬಿಹಾರ ಚುನಾವಣೆ: ನಿತೀಶ್ ಕುಮಾರ್ NDA CM ಅಭ್ಯರ್ಥಿ; ಕೇಂದ್ರ ಸಚಿವ ಗಿರಿರಾಜ್ ಸಿಂಗ್

SCROLL FOR NEXT