ಕೇಂದ್ರ ಸಚಿವ ಜಿತೇಂದ್ರ ಸಿಂಗ್ 
ದೇಶ

ಒಂದು ಜೀವಕ್ಕೆ ಅಪಾಯವಿದ್ದರೆ ಹತ್ತಾರು ಕಚೇರಿಗಳ ಮುಚ್ಚಿಯಾದರೂ ಆ ಜೀವ ಉಳಿಸುವುದು ಉತ್ತಮ: ಕೇಂದ್ರ ಸರ್ಕಾರ

ಒಂದು ಜೀವಕ್ಕೆ ಅಪಾಯವಿದ್ದರೆ, ಹತ್ತಾರು ಕಚೇರಿಗಳನ್ನು ಮುಚ್ಚುವುದಾದರೂ ಆ ಜೀವವನ್ನು ಉಳಿಸುವುದು ಉತ್ತಮ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

ಜಮ್ಮು: ಒಂದು ಜೀವಕ್ಕೆ ಅಪಾಯವಿದ್ದರೆ, ಹತ್ತಾರು ಕಚೇರಿಗಳನ್ನು ಮುಚ್ಚುವುದಾದರೂ ಆ ಜೀವವನ್ನು ಉಳಿಸುವುದು ಉತ್ತಮ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಹೇಳಿದ್ದಾರೆ.

 ಜಲೋಟಾ ಪ್ರದೇಶದಲ್ಲಿ ಬಖ್ತಾದಿಂದ ಮಗ್ಲೂರ್‌ವರೆಗಿನ ಕೇಂದ್ರ ಪಿಎಂಜಿಎಸ್'ವೈ ರಸ್ತೆಯ ಶಂಕುಸ್ಥಾಪನೆಗಾಗಿ ಕಥುವಾಗೆ ಸಚಿವರು ಭೇಟಿ ನೀಡಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಜೀವಕ್ಕೆ ಅಪಾಯವಿದ್ದರೆ, ಹತ್ತಾರು ಕಚೇರಿಗಳನ್ನು ಮುಚ್ಚುವುದಾದರೂ ಆ ಜೀವವನ್ನು ಉಳಿಸುವುದು ಉತ್ತಮ ಎಂದು ಹೇಳಿದರು.

ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, ವಿರೋಧ ಪಕ್ಷಗಳು "ಅಮಾನವೀಯ" ಮಟ್ಟಿಗೆ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿವೆ ಎಂದು ತಿಳಿಸಿದರು.

ಈ ಪಕ್ಷಗಳು ಜನರ ನಡುವೆ ತಾರತಮ್ಯ ಮಾಡುವುದಲ್ಲದೆ ಕೇವಲ ಮತದ ವಿಚಾರಕ್ಕಾಗಿ ಗಡಿ ನಿಯಂತ್ರಣ ರೇಖೆ ಮತ್ತು ಅಂತರಾಷ್ಟ್ರೀಯ ಗಡಿ ನಡುವೆ ತಾರತಮ್ಯ ಮಾಡುವ ಮಟ್ಟಕ್ಕೆ ಹೋಗಿವೆ ಎಂದು ಆರೋಪಿಸಿದರು.

"ಇದನ್ನು ಸೌಹಾರ್ದಯುತವಾಗಿ ಮತ್ತು ಸಂವೇದನಾಶೀಲತೆಯಿಂದ ಪರಿಹರಿಸಬೇಕು. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಮಾನವನ ಜೀವಕ್ಕಿಂತ ಅಮೂಲ್ಯವಾದುದು ಯಾವುದೂ ಇಲ್ಲ" ಎಂದರು.

ಶಂಕುಸ್ಥಾಪನೆ ಸಮಾರಂಭದ ನಂತರ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ವಿರೋಧ ಪಕ್ಷಗಳ ನೇತೃತ್ವದ ಹಿಂದಿನ ಸರ್ಕಾರಗಳು ಎಲ್ಒಸಿ ಉದ್ದಕ್ಕೂ ವಾಸಿಸುವ ಜನರಿಗೆ ಮೀಸಲಾತಿಯನ್ನು ನೀಡಿದಾಗ ನೈತಿಕತೆ ಮತ್ತು ಔಚಿತ್ಯದ ಎಲ್ಲಾ ಮಿತಿಗಳನ್ನು ದಾಟಿದವು. ಆದರೆ, ಅಂತರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ವಾಸಿಸುವ ಜನರಿಗೆ ಅದೇ ಪ್ರಯೋಜನಗಳನ್ನು ನಿರಾಕರಿಸಿದರು. ಇದಕ್ಕೆ ಕಾರಣ ಅವರ ಶಾಸಕರು ಎಲ್‌ಒಸಿಯ ಉದ್ದಕ್ಕೂ ಇರುವ ಪ್ರದೇಶಗಳಿಂದ ಚುನಾಯಿತರಾಗಿದ್ದು. ಅವರಲ್ಲಿ ಕೆಲವರು ಮಂತ್ರಿಗಳೂ ಆದರು. ಐಬಿ ಅಥವಾ ಪಾಕಿಸ್ತಾನದ ಗಡಿಯಲ್ಲಿ ಹೆಚ್ಚಾಗಿ ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ವಾಸಿಸುವ ಜನರಿಗೆ ಅದೇ ಪ್ರಯೋಜನವನ್ನು ನಿರಾಕರಿಸಿದರು. ಇಲ್ಲಿನ ಜನರು ಅವರಿಗೆ ಮತ ಹಾಕಿಲ್ಲ ಎಂದು ತಿಳಿಸಿದರು.

ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವೇ ಐಬಿ ಬಳಿ ವಾಸಿಸುವ ಜನರಿಗೆ ಶೇಕಡಾ 4ರಷ್ಟು ಮೀಸಲಾತಿಯೊಂದಿಗೆ ನ್ಯಾಯ ದೊರಕಿಸಿಕೊಟ್ಟಿತು. ನಂತರ ಈ ವ್ಯತ್ಯಾಸವನ್ನು ಸರಿಪಡಿಸಲಾಗಿದೆ ಎಂದರು.

ಕಥುವಾದಲ್ಲಿ ಉಪಗ್ರಹ ಆಸ್ಪತ್ರೆ ಮತ್ತು ಟಾಟಾ ಕ್ಯಾನ್ಸರ್ ಕೇಂದ್ರವನ್ನು ಸ್ಥಾಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಕ್ಯಾನ್ಸರ್ ರೋಗಿಗಳಿಗೆ ಹೈಟೆಕ್ ಸೌಲಭ್ಯವನ್ನು ಒದಗಿಸುತ್ತದೆ ಎಂದು ಸಿಂಗ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

T20 World Cup 2026: ಸೂಪರ್ 8 ಹಂತಕ್ಕೆ ಭಾರತ ಲಗ್ಗೆ; ದೇಶಾದ್ಯಂತ ಸಂಭ್ರಮಾಚರಣೆ, ಗಣ್ಯರ ಶುಭಾಶಯ!

T20 World Cup 2026: 27 ಬಾಲ್ ಗಳಲ್ಲಿ ಅರ್ಧಶತಕ ಹೊಡೆದು, ಭಾರತದ ಸ್ಕೋರ್ ಹೆಚ್ಚಿಸಿದ ಇಶಾನ್ ಕಿಶಾನ್!

RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ!

SCROLL FOR NEXT