ಮೊರ್ಬಿ ಸೇತುವೆ ಕುಸಿತಗೊಂಡ ಸ್ಥಳದಲ್ಲಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ 
ದೇಶ

ಮೋರ್ಬಿ ಸೇತುವೆ ದುರಸ್ತಿ: ಫ್ಲೋರ್ ಮಾತ್ರ ಬದಲಿಸಲಾಗಿತ್ತು, ಅದರ ಕೇಬಲ್‌ ಬದಲಿಸಿರಲಿಲ್ಲ!

ಮೊರ್ಬಿ ಸೇತುವೆ ಕುಸಿತ ದುರಂತದ ಪ್ರಾಥಮಿಕ ಹಂತದ ತನಿಖೆಯಲ್ಲಿ ಸೇತುವೆಯ ವಿನ್ಯಾಸದ ತಪಾಸಣೆ ಕೈಗೊಳ್ಳುವಲ್ಲಿ ವಿಫಲತೆ, ವಸ್ತುಗಳ ಕಳಪೆ ಆಯ್ಕೆ ಮತ್ತು ತುರ್ತು ರಕ್ಷಣೆ ಮತ್ತು ಸ್ಥಳಾಂತರಿಸುವ ಪೂರ್ವಸಿದ್ಧತೆಯ ಅನುಪಸ್ಥಿತಿ ಸೇರಿದಂತೆ ನವೀಕರಣದಲ್ಲಿ ಹಲವಾರು ಲೋಪಗಳು ಕಂಡುಬಂದಿವೆ.

ಅಹಮದಾಬಾದ್: ಮೊರ್ಬಿ ಸೇತುವೆ ಕುಸಿತ ದುರಂತದ ಪ್ರಾಥಮಿಕ ಹಂತದ ತನಿಖೆಯಲ್ಲಿ ಸೇತುವೆಯ ವಿನ್ಯಾಸದ ತಪಾಸಣೆ ಕೈಗೊಳ್ಳುವಲ್ಲಿ ವಿಫಲತೆ, ವಸ್ತುಗಳ ಕಳಪೆ ಆಯ್ಕೆ ಮತ್ತು ತುರ್ತು ರಕ್ಷಣೆ ಮತ್ತು ಸ್ಥಳಾಂತರಿಸುವ ಪೂರ್ವಸಿದ್ಧತೆಯ ಅನುಪಸ್ಥಿತಿ ಸೇರಿದಂತೆ ನವೀಕರಣದಲ್ಲಿ ಹಲವಾರು ಲೋಪಗಳು ಕಂಡುಬಂದಿವೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಹರ್ಸೇಂದು ಪಾಂಚಾಲ್ ಅವರು ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಒಂಬತ್ತು ಆರೋಪಿಗಳನ್ನು ರಿಮಾಂಡ್ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ, ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಜೆ.ಖಾನ್, ಬಂಧಿತ ಆರೋಪಿಗಳ ಪೈಕಿ ನಾಲ್ವರಾದ OREVA ಗ್ರೂಪ್‌ನ ಇಬ್ಬರು ವ್ಯವಸ್ಥಾಪಕರು ಮತ್ತು ಸೇತುವೆ ದುರಸ್ತಿ ಮಾಡಿದ ಇಬ್ಬರು ಉಪ ಗುತ್ತಿಗೆದಾರರನ್ನು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

ಪಾಂಚಾಲ್ ಬುಧವಾರ ಟಿಎನ್ಐಇ ಜೊತೆಗೆ ಮಾತನಾಡಿ, 'ಪ್ರಾಥಮಿಕ ತನಿಖೆಯ ಪ್ರಕಾರ, ಸೇತುವೆಯ ಕೇಬಲ್‌ಗಳನ್ನು ಹಾಗೆಯೇ ಬಿಡಲಾಗಿದೆ. ಆದರೆ, ಅದರ ಮರದ ನೆಲಹಾಸಿನ ಬದಲಿಗೆ ಅಲ್ಯುಮಿನಿಯಂ ಹಾಳೆಯ ನೆಲಹಾಸನ್ನು ಹಾಕಲಾಗಿದೆ. 'ಅಲ್ಯುಮಿನಿಯಂನ ಹೆಚ್ಚುವರಿ ತೂಕದ ಕಾರಣ ಕೇಬಲ್‌ಗಳು ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಇದು ತನಿಖೆಯ ವಿಷಯವಾಗಿದೆ ಎಂದು ಅವರು ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದರು.

ಸೇತುವೆ ನವೀಕರಣದ ಗುತ್ತಿಗೆಯನ್ನು ಒರೆವಾಗೆ ನೀಡಲಾಯಿತು. ಅದು ಇಬ್ಬರು ಅರ್ಹರಲ್ಲದ ವ್ಯಕ್ತಿಗಳನ್ನು ನಿಯೋಜಿಸಿದೆ. ಒರೆವಾ ತನ್ನ ನವೀಕರಣ ಮತ್ತು ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದ್ದು ಇದು ಮೂರನೇ ಬಾರಿ ಎಂದು ತಿಳಿಸಿದರು.

ಸೇತುವೆಯ ನಾಲ್ಕು ಮುಖ್ಯ ಕೇಬಲ್‌ಗಳು ಹಳೆಯದಾಗಿವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿ ಹೇಳಿದೆ.

ಮುರಿದ ಆಂಕರ್ ಪಿನ್

ಸೇತುವೆ ಮೇಲೆ ತೆರಳಿದ ಜನರ ಹೆಚ್ಚುವರಿ ತೂಕದಿಂದಾಗಿ, ಸೇತುವೆಯ ಕೊನೆಯಲ್ಲಿ ದರ್ಬಾರ್‌ಗಢದಲ್ಲಿ  ಸೇತುವೆಯ ಆಂಕರ್ ಪಿನ್ ಮುರಿದಿದೆ. 'ಆಂಕರ್ ಪಿನ್ ಸಾಮರ್ಥ್ಯವು 125 ಆಗಿತ್ತು. ಆದರೆ, ಸೇತುವೆಯನ್ನು ತೆರೆದಾಗ ಭಾನುವಾರ 350ಕ್ಕೂ ಹೆಚ್ಚು ಜನರು ಅದರ ಮೇಲಿದ್ದರು' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT