ಪ್ರಾತಿನಿಧಿಕ ಚಿತ್ರ 
ದೇಶ

ಕೊಟ್ಟಾಯಂನ ಆಶ್ರಯ ಮನೆಯಿಂದ ನಾಪತ್ತೆಯಾಗಿದ್ದ 9 ಹುಡುಗಿಯರು ಆರು ಗಂಟೆಗಳ ಬಳಿಕ ಪತ್ತೆ!

ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಗನಂ ಎಂಬಲ್ಲಿ ಖಾಸಗಿ ಆಶ್ರಯ ಮನೆಯಿಂದ (ಶೆಲ್ಟರ್ ಹೋಂ) ಒಂಬತ್ತು ಬಾಲಕಿಯರು ಸೋಮವಾರ ನಸುಕಿನಲ್ಲಿ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ, ಅವರು ಮಧ್ಯಾಹ್ನದ ವೇಳೆಗೆ ಪಿರವಮ್ ಬಳಿಯ ಎಲಂಜಿಯಲ್ಲಿರುವ ಕೈದಿಗಳ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಗನಂ ಎಂಬಲ್ಲಿ ಖಾಸಗಿ ಆಶ್ರಯ ಮನೆಯಿಂದ (ಶೆಲ್ಟರ್ ಹೋಂ) ಒಂಬತ್ತು ಬಾಲಕಿಯರು ಸೋಮವಾರ ನಸುಕಿನಲ್ಲಿ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ, ಅವರು ಮಧ್ಯಾಹ್ನದ ವೇಳೆಗೆ ಪಿರವಮ್ ಬಳಿಯ ಎಲಂಜಿಯಲ್ಲಿರುವ ಕೈದಿಗಳ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಬೆಳಗ್ಗೆ 5.30ರ ಸುಮಾರಿಗೆ ಕೈದಿಗಳನ್ನು ಎಬ್ಬಿಸಲು ಶೆಲ್ಟರ್ ಅಧಿಕಾರಿಗಳು ಕೊಠಡಿಗಳಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಎನ್‌ಜಿಒ ಮಹಿಳಾ ಸಮಾಖ್ಯ ನಡೆಸುತ್ತಿರುವ ಆಶ್ರಯ ಮನೆ ಸಾಮಾಜಿಕ ನ್ಯಾಯ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಡಿಯಲ್ಲಿ ಮಾನ್ಯತೆ ಪಡೆದಿದೆ.

ಶೆಲ್ಟರ್ ಹೋಮ್ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ, ಕೊಟ್ಟಾಯಂ ಪಶ್ಚಿಮ ಪೊಲೀಸ್ ಠಾಣೆಯು ಬಾಲಕಿಯರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿತು ಮತ್ತು ಎಲಾಂಜಿಯಲ್ಲಿರುವ ಕೈದಿಗಳ ಮನೆಯೊಂದರಲ್ಲಿ ಅವರನ್ನು ಪತ್ತೆ ಮಾಡಿದೆ.

ಪೊಸ್ಕೊ ಪ್ರಕರಣದ ಸಂತ್ರಸ್ತರು ಸೇರಿದಂತೆ ನಾಪತ್ತೆಯಾಗಿದ್ದ ಹುಡುಗಿಯರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೆಲ್ಟರ್ ಮನೆಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದ ಮೇರೆಗೆ ಅವರನ್ನು ಆಶ್ರಯದಲ್ಲಿ ಇರಿಸಲಾಗಿತ್ತು.

ಕಳೆದ ಕೆಲವು ದಿನಗಳಿಂದ ಶೆಲ್ಟರ್ ಹೋಮ್ ತೊರೆಯಬೇಕೆಂದು ಹೇಳಿಕೊಂಡು ಬಾಲಕಿಯರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಇದಕ್ಕೆ ಸಿಡಬ್ಲ್ಯುಸಿ, ನ್ಯಾಯಾಲಯದ ವಿಶೇಷ ಅನುಮತಿ ಬೇಕಾಗಿರುವುದರಿಂದ ಹೊರಹೋಗಲು ಅವಕಾಶ ನೀಡಿರಲಿಲ್ಲ. ಆದರೆ, ಇಂದು ಬೆಳಗ್ಗೆ ನಾಪತ್ತೆಯಾಗಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ರಾತ್ರಿ ವೇಳೆ ಬಾಲಕಿಯರ ಕಿರುಚಾಟ ಕೇಳುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಪೊಲೀಸರು ಪತ್ತೆಯಾಗಿರುವ ಬಾಲಕಿಯರನ್ನು ಕೊಟ್ಟಾಯಂಗೆ ಕರೆತರಲು ಮುಂದಾಗಿದ್ದು, ಅವರ ಮುಂದಿನ ವಾಸ್ತವ್ಯದ ಕುರಿತು ಪೊಲೀಸರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ಕೊಟ್ಟಾಯಂನಿಂದ ವರದಿಯಾದ ಮೂರನೇ ಘಟನೆ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ