ಪ್ರಾತಿನಿಧಿಕ ಚಿತ್ರ 
ದೇಶ

ಕೊಟ್ಟಾಯಂನ ಆಶ್ರಯ ಮನೆಯಿಂದ ನಾಪತ್ತೆಯಾಗಿದ್ದ 9 ಹುಡುಗಿಯರು ಆರು ಗಂಟೆಗಳ ಬಳಿಕ ಪತ್ತೆ!

ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಗನಂ ಎಂಬಲ್ಲಿ ಖಾಸಗಿ ಆಶ್ರಯ ಮನೆಯಿಂದ (ಶೆಲ್ಟರ್ ಹೋಂ) ಒಂಬತ್ತು ಬಾಲಕಿಯರು ಸೋಮವಾರ ನಸುಕಿನಲ್ಲಿ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ, ಅವರು ಮಧ್ಯಾಹ್ನದ ವೇಳೆಗೆ ಪಿರವಮ್ ಬಳಿಯ ಎಲಂಜಿಯಲ್ಲಿರುವ ಕೈದಿಗಳ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಗನಂ ಎಂಬಲ್ಲಿ ಖಾಸಗಿ ಆಶ್ರಯ ಮನೆಯಿಂದ (ಶೆಲ್ಟರ್ ಹೋಂ) ಒಂಬತ್ತು ಬಾಲಕಿಯರು ಸೋಮವಾರ ನಸುಕಿನಲ್ಲಿ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ, ಅವರು ಮಧ್ಯಾಹ್ನದ ವೇಳೆಗೆ ಪಿರವಮ್ ಬಳಿಯ ಎಲಂಜಿಯಲ್ಲಿರುವ ಕೈದಿಗಳ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಬೆಳಗ್ಗೆ 5.30ರ ಸುಮಾರಿಗೆ ಕೈದಿಗಳನ್ನು ಎಬ್ಬಿಸಲು ಶೆಲ್ಟರ್ ಅಧಿಕಾರಿಗಳು ಕೊಠಡಿಗಳಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಎನ್‌ಜಿಒ ಮಹಿಳಾ ಸಮಾಖ್ಯ ನಡೆಸುತ್ತಿರುವ ಆಶ್ರಯ ಮನೆ ಸಾಮಾಜಿಕ ನ್ಯಾಯ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಡಿಯಲ್ಲಿ ಮಾನ್ಯತೆ ಪಡೆದಿದೆ.

ಶೆಲ್ಟರ್ ಹೋಮ್ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ, ಕೊಟ್ಟಾಯಂ ಪಶ್ಚಿಮ ಪೊಲೀಸ್ ಠಾಣೆಯು ಬಾಲಕಿಯರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿತು ಮತ್ತು ಎಲಾಂಜಿಯಲ್ಲಿರುವ ಕೈದಿಗಳ ಮನೆಯೊಂದರಲ್ಲಿ ಅವರನ್ನು ಪತ್ತೆ ಮಾಡಿದೆ.

ಪೊಸ್ಕೊ ಪ್ರಕರಣದ ಸಂತ್ರಸ್ತರು ಸೇರಿದಂತೆ ನಾಪತ್ತೆಯಾಗಿದ್ದ ಹುಡುಗಿಯರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೆಲ್ಟರ್ ಮನೆಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದ ಮೇರೆಗೆ ಅವರನ್ನು ಆಶ್ರಯದಲ್ಲಿ ಇರಿಸಲಾಗಿತ್ತು.

ಕಳೆದ ಕೆಲವು ದಿನಗಳಿಂದ ಶೆಲ್ಟರ್ ಹೋಮ್ ತೊರೆಯಬೇಕೆಂದು ಹೇಳಿಕೊಂಡು ಬಾಲಕಿಯರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಇದಕ್ಕೆ ಸಿಡಬ್ಲ್ಯುಸಿ, ನ್ಯಾಯಾಲಯದ ವಿಶೇಷ ಅನುಮತಿ ಬೇಕಾಗಿರುವುದರಿಂದ ಹೊರಹೋಗಲು ಅವಕಾಶ ನೀಡಿರಲಿಲ್ಲ. ಆದರೆ, ಇಂದು ಬೆಳಗ್ಗೆ ನಾಪತ್ತೆಯಾಗಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ರಾತ್ರಿ ವೇಳೆ ಬಾಲಕಿಯರ ಕಿರುಚಾಟ ಕೇಳುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಪೊಲೀಸರು ಪತ್ತೆಯಾಗಿರುವ ಬಾಲಕಿಯರನ್ನು ಕೊಟ್ಟಾಯಂಗೆ ಕರೆತರಲು ಮುಂದಾಗಿದ್ದು, ಅವರ ಮುಂದಿನ ವಾಸ್ತವ್ಯದ ಕುರಿತು ಪೊಲೀಸರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ಕೊಟ್ಟಾಯಂನಿಂದ ವರದಿಯಾದ ಮೂರನೇ ಘಟನೆ ಇದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT