ಪ್ರಾತಿನಿಧಿಕ ಚಿತ್ರ 
ದೇಶ

ಕೊಟ್ಟಾಯಂನ ಆಶ್ರಯ ಮನೆಯಿಂದ ನಾಪತ್ತೆಯಾಗಿದ್ದ 9 ಹುಡುಗಿಯರು ಆರು ಗಂಟೆಗಳ ಬಳಿಕ ಪತ್ತೆ!

ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಗನಂ ಎಂಬಲ್ಲಿ ಖಾಸಗಿ ಆಶ್ರಯ ಮನೆಯಿಂದ (ಶೆಲ್ಟರ್ ಹೋಂ) ಒಂಬತ್ತು ಬಾಲಕಿಯರು ಸೋಮವಾರ ನಸುಕಿನಲ್ಲಿ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ, ಅವರು ಮಧ್ಯಾಹ್ನದ ವೇಳೆಗೆ ಪಿರವಮ್ ಬಳಿಯ ಎಲಂಜಿಯಲ್ಲಿರುವ ಕೈದಿಗಳ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಮಂಗನಂ ಎಂಬಲ್ಲಿ ಖಾಸಗಿ ಆಶ್ರಯ ಮನೆಯಿಂದ (ಶೆಲ್ಟರ್ ಹೋಂ) ಒಂಬತ್ತು ಬಾಲಕಿಯರು ಸೋಮವಾರ ನಸುಕಿನಲ್ಲಿ ನಾಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ, ಅವರು ಮಧ್ಯಾಹ್ನದ ವೇಳೆಗೆ ಪಿರವಮ್ ಬಳಿಯ ಎಲಂಜಿಯಲ್ಲಿರುವ ಕೈದಿಗಳ ಮನೆಯಲ್ಲಿ ಪತ್ತೆಯಾಗಿದ್ದಾರೆ.

ಬೆಳಗ್ಗೆ 5.30ರ ಸುಮಾರಿಗೆ ಕೈದಿಗಳನ್ನು ಎಬ್ಬಿಸಲು ಶೆಲ್ಟರ್ ಅಧಿಕಾರಿಗಳು ಕೊಠಡಿಗಳಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಎನ್‌ಜಿಒ ಮಹಿಳಾ ಸಮಾಖ್ಯ ನಡೆಸುತ್ತಿರುವ ಆಶ್ರಯ ಮನೆ ಸಾಮಾಜಿಕ ನ್ಯಾಯ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಡಿಯಲ್ಲಿ ಮಾನ್ಯತೆ ಪಡೆದಿದೆ.

ಶೆಲ್ಟರ್ ಹೋಮ್ ಅಧಿಕಾರಿಗಳು ನೀಡಿದ ದೂರಿನ ಆಧಾರದ ಮೇಲೆ, ಕೊಟ್ಟಾಯಂ ಪಶ್ಚಿಮ ಪೊಲೀಸ್ ಠಾಣೆಯು ಬಾಲಕಿಯರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿತು ಮತ್ತು ಎಲಾಂಜಿಯಲ್ಲಿರುವ ಕೈದಿಗಳ ಮನೆಯೊಂದರಲ್ಲಿ ಅವರನ್ನು ಪತ್ತೆ ಮಾಡಿದೆ.

ಪೊಸ್ಕೊ ಪ್ರಕರಣದ ಸಂತ್ರಸ್ತರು ಸೇರಿದಂತೆ ನಾಪತ್ತೆಯಾಗಿದ್ದ ಹುಡುಗಿಯರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೆಲ್ಟರ್ ಮನೆಯಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದ ಮೇರೆಗೆ ಅವರನ್ನು ಆಶ್ರಯದಲ್ಲಿ ಇರಿಸಲಾಗಿತ್ತು.

ಕಳೆದ ಕೆಲವು ದಿನಗಳಿಂದ ಶೆಲ್ಟರ್ ಹೋಮ್ ತೊರೆಯಬೇಕೆಂದು ಹೇಳಿಕೊಂಡು ಬಾಲಕಿಯರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಇದಕ್ಕೆ ಸಿಡಬ್ಲ್ಯುಸಿ, ನ್ಯಾಯಾಲಯದ ವಿಶೇಷ ಅನುಮತಿ ಬೇಕಾಗಿರುವುದರಿಂದ ಹೊರಹೋಗಲು ಅವಕಾಶ ನೀಡಿರಲಿಲ್ಲ. ಆದರೆ, ಇಂದು ಬೆಳಗ್ಗೆ ನಾಪತ್ತೆಯಾಗಿದ್ದರು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ ರಾತ್ರಿ ವೇಳೆ ಬಾಲಕಿಯರ ಕಿರುಚಾಟ ಕೇಳುತ್ತಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಪೊಲೀಸರು ಪತ್ತೆಯಾಗಿರುವ ಬಾಲಕಿಯರನ್ನು ಕೊಟ್ಟಾಯಂಗೆ ಕರೆತರಲು ಮುಂದಾಗಿದ್ದು, ಅವರ ಮುಂದಿನ ವಾಸ್ತವ್ಯದ ಕುರಿತು ಪೊಲೀಸರು ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಇತ್ತೀಚಿನ ತಿಂಗಳುಗಳಲ್ಲಿ ಕೊಟ್ಟಾಯಂನಿಂದ ವರದಿಯಾದ ಮೂರನೇ ಘಟನೆ ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT