ಮಲ್ಲಿಕಾರ್ಜುನ ಖರ್ಗೆ 
ದೇಶ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ: ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಗೊಂದಲ, ನಾಯಕರಿಗೆ ಚುನಾವಣೆ ಮೇಲೆ ಒಲವು

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬುಧವಾರ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹೊತ್ತಿನಲ್ಲಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ(CWC) ಚುನಾವಣೆ ನಡೆಸಲಿದ್ದಾರೆಯೇ ಎಂಬುದು ಅತ್ಯಂತ ನಿರ್ಣಾಯಕ ಪ್ರಶ್ನೆಯಾಗಿದೆ.

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬುಧವಾರ ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಈ ಹೊತ್ತಿನಲ್ಲಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ(CWC) ಚುನಾವಣೆ ನಡೆಸಲಿದ್ದಾರೆಯೇ ಎಂಬುದು ಅತ್ಯಂತ ನಿರ್ಣಾಯಕ ಪ್ರಶ್ನೆಯಾಗಿದೆ. CWCಯ ಚುನಾವಣೆ ಕೊನೆಯ ಬಾರಿಗೆ ನಡೆದದ್ದು 1997 ರಲ್ಲಿ AICC ಯ ಕೋಲ್ಕತ್ತಾ ಸರ್ವಸದಸ್ಯರ ಸಭೆಯಲ್ಲಿ. 

ಕಾಂಗ್ರೆಸ್ ಕಾರ್ಯಕಾರಿ ಸಮಿತಿ-CWC 23 ಸದಸ್ಯರನ್ನು ಒಳಗೊಂಡಿದೆ, ಅದರಲ್ಲಿ 12 ಚುನಾಯಿತರಾಗಿದ್ದಾರೆ, 11 ನಾಮನಿರ್ದೇಶಿತರಾಗಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಸದಸ್ಯರು ಸ್ಪರ್ಧೆಯ ಸಂದರ್ಭದಲ್ಲಿ 12 CWC ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಕಾಲೇಜ್ ನ್ನು ರಚಿಸುತ್ತಾರೆ.

CWC, ಪಕ್ಷದ ಅತ್ಯುನ್ನತ ಕಾರ್ಯಕಾರಿ ಸಮಿತಿ ಮತ್ತು ಇತರ ಸ್ಥಾನಗಳಿಗೆ ಚುನಾವಣೆಗಳು, G-23 ಗುಂಪಿನ ಹಿರಿಯ ನಾಯಕರು ಎತ್ತಿರುವ ಕೆಲವು ಬೇಡಿಕೆಗಳಾಗಿವೆ. ಕಾಂಗ್ರೆಸ್ ತನ್ನ ಭರವಸೆಯಂತೆ ಸಿಡಬ್ಲ್ಯುಸಿ ಚುನಾವಣೆಯನ್ನು ನಡೆಸಿದರೆ ಅದು ಮಹತ್ವದ್ದಾಗಿದೆ.

CWC ಪಕ್ಷದ ಉನ್ನತ ನಾಯಕತ್ವವನ್ನು ಒಳಗೊಂಡಿದೆ. ಹಲವು ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥರು ಈಗಾಗಲೇ ಹೊಸ ಕಾಂಗ್ರೆಸ್ ಅಧ್ಯಕ್ಷರಿಗೆ ಪಿಸಿಸಿ ಮುಖ್ಯಸ್ಥರು ಮತ್ತು ಎಐಸಿಸಿ ಸದಸ್ಯರನ್ನು ನಾಮನಿರ್ದೇಶನ ಮಾಡಲು ಅಧಿಕಾರ ನೀಡುವ ನಿರ್ಣಯಗಳನ್ನು ಅಂಗೀಕರಿಸಿರುವುದರಿಂದ ಸಿಡಬ್ಲ್ಯುಸಿ ಚುನಾವಣೆಗಳನ್ನು ನಡೆಸಲು ಪಕ್ಷವು ಉತ್ಸುಕವಾಗಿದೆಯೇ ಎಂದು ಕೆಲವು ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. 

ಅಧ್ಯಕ್ಷರ ಆಯ್ಕೆಯ ಜೊತೆಗೆ ಸಿಡಬ್ಲ್ಯುಸಿ, ಪಿಸಿಸಿ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿಗಳು, ಪಿಸಿಸಿ ಕಾರ್ಯನಿರ್ವಾಹಕರು ಮತ್ತು ಎಐಸಿಸಿ ಸದಸ್ಯರಿಗೆ ಪಿಸಿಸಿ ಸಾಮಾನ್ಯ ಸಭೆಯ ಚುನಾವಣೆಯೂ ನಡೆಯಲಿದೆ ಎಂದು ಪಕ್ಷವು ಮೊದಲು ಘೋಷಿಸಿದೆ.

ಕಾಂಗ್ರೆಸ್ ಸಂವಿಧಾನದ ಪ್ರಕಾರ, CWC ಕಾಂಗ್ರೆಸ್ ಅಧ್ಯಕ್ಷರು, ಸಂಸತ್ತಿನಲ್ಲಿ ಅದರ ನಾಯಕ ಮತ್ತು 23 ಸದಸ್ಯರನ್ನು ರಚಿಸುತ್ತದೆ, ಅವರಲ್ಲಿ 12 ಮಂದಿ AICC ಯಿಂದ ಆಯ್ಕೆಯಾಗುತ್ತಾರೆ. ಹಿಂದೆ, ಸಿಡಬ್ಲ್ಯುಸಿಗೆ ಕ್ರಮವಾಗಿ 1992 ಮತ್ತು 1997 ರಲ್ಲಿ ಪಿವಿ ನರಸಿಂಹ ರಾವ್ ಮತ್ತು ಸೀತಾರಾಮ್ ಕೇಸರಿ ನೇತೃತ್ವದಲ್ಲಿ ಚುನಾವಣೆಗಳು ನಡೆದವು.

ಅಧ್ಯಕ್ಷೀಯ ಚುನಾವಣೆಯಲ್ಲಿ ಖರ್ಗೆಯವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದ ಶಶಿ ತರೂರ್ ಅವರು ತಮ್ಮ ಪ್ರಣಾಳಿಕೆಯಲ್ಲಿ ಸಿಡಬ್ಲ್ಯುಸಿಗೆ ಚುನಾವಣೆ ಮತ್ತು ಪಕ್ಷದ ಸಂಸದೀಯ ಮಂಡಳಿಯ ಪುನರುಜ್ಜೀವನದ ಭರವಸೆ ನೀಡಿದ್ದರು. ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಜಿ -23 ಗುಂಪಿನ ಸದಸ್ಯ ಪೃಥ್ವಿರಾಜ್ ಚವಾಣ್, ಹೊಸ ಅಧ್ಯಕ್ಷರು ಪಕ್ಷದ ಎಲ್ಲಾ ಪ್ರಮುಖ ಸ್ಥಾನಗಳಿಗೆ ಪ್ರಜಾಸತ್ತಾತ್ಮಕ ಚುನಾವಣೆಗಳನ್ನು ನಡೆಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. 

ಪಿಸಿಸಿ ಮುಖ್ಯಸ್ಥರು ಮತ್ತು ಎಐಸಿಸಿ ಸದಸ್ಯರನ್ನು ನೇಮಿಸಲು ಹೊಸ ಎಐಸಿಸಿ ಅಧ್ಯಕ್ಷರಿಗೆ ಅಧಿಕಾರ ನೀಡುವ ನಿರ್ಣಯವನ್ನು ಮಹಾರಾಷ್ಟ್ರವು ಅಂಗೀಕರಿಸಿದ್ದರೂ, ಪಿಸಿಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲು ನಾವು ಹೊಸ ಅಧ್ಯಕ್ಷರಿಗೆ ಮನವಿ ಮಾಡುತ್ತೇವೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆ ಬೇಕೋ ಬೇಡವೋ ಎಂಬುದು ಪಕ್ಷಕ್ಕೆ ಬಿಟ್ಟದ್ದು ಎಂದಿದ್ದಾರೆ. 

ಎಐಸಿಸಿ ಸದಸ್ಯರನ್ನು ಸರ್ವಸದಸ್ಯರ ಅವಧಿಯಲ್ಲಿ ಆಯ್ಕೆ ಮಾಡಲಾಗುವುದು ಮತ್ತು ಸದಸ್ಯರು ಚುನಾವಣೆ ಅಥವಾ ನಾಮನಿರ್ದೇಶನದ ಮೂಲಕ ಸಿಡಬ್ಲ್ಯುಸಿ ರಚಿಸಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡಲಿದ್ದಾರೆ ಎಂದು ಕೇರಳದ ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ''ಎಐಸಿಸಿ ಸದಸ್ಯರನ್ನು ಸರ್ವಸದಸ್ಯರ ಅಧಿವೇಶನದಲ್ಲಿ ಆಯ್ಕೆ ಮಾಡಲಾಗುವುದು. ಎಐಸಿಸಿ ಸದಸ್ಯರು ಚುನಾವಣೆ ಅಥವಾ ನಾಮನಿರ್ದೇಶನಗಳ ಮೂಲಕ ಸಿಡಬ್ಲ್ಯುಸಿ ರಚಿಸಲು ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನು ಒಪ್ಪಿಸುವ ನಿರ್ಣಯವನ್ನು ಅಂಗೀಕರಿಸುತ್ತಾರೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT