ಠಾಕ್ರೆ ಬೆಂಬಲಿಗರಿಂದ ಗೋಮೂತ್ರ ಸಿಂಪಡಣೆ 
ದೇಶ

ಸೇನೆ Vs ಸೇನೆ: ಮಹಾ ಸಿಎಂ ಶಿಂಧೆ ಕಾರ್ಯಕ್ರಮದ ನಂತರ ಠಾಕ್ರೆ ಬೆಂಬಲಿಗರಿಂದ ಗೋಮೂತ್ರ ಸಿಂಪಡಣೆ

ಮಹಾರಾಷ್ಟ್ರದಲ್ಲಿ ಶಿವಸೇನೆ ವರ್ಸಸ್ ಶವಸೇನೆ ಸಮರ ದಿನೇ ದಿನೇ ಜೋರಾಗ್ತಿದೆ.  ಶಿವಸೇನೆಯಲ್ಲಿನ ಬಣ ರಾಜಕೀಯ ಘರ್ಷಣೆಯ ರೂಪ ಪಡೆಯುತ್ತಿದೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬೆಂಬಲಿಗರು ಮಂಗಳವಾರ ಮಹಾರಾಷ್ಟ್ರದ...

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ವರ್ಸಸ್ ಶವಸೇನೆ ಸಮರ ದಿನೇ ದಿನೇ ಜೋರಾಗ್ತಿದೆ.  ಶಿವಸೇನೆಯಲ್ಲಿನ ಬಣ ರಾಜಕೀಯ ಘರ್ಷಣೆಯ ರೂಪ ಪಡೆಯುತ್ತಿದೆ. ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಬೆಂಬಲಿಗರು ಮಂಗಳವಾರ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಾರ್ಯಕ್ರಮದ ಆ ಸ್ಥಳದಲ್ಲಿ ಗೋಮೂತ್ರ ಸಿಂಪಡಿಸಿ ಪ್ರದಕ್ಷಿಣೆ ಹಾಕಿದ್ದಾರೆ.

ಬಿಡ್ಕಿನ್ ನಲ್ಲಿ ನಡೆದಿರೋ ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಂಬೆ ಎಲೆಗಳನ್ನು ಬಳಸಿ ಪುರುಷರ ಗುಂಪು ಗೋಮೂತ್ರ ಸಿಂಪಡಿಸಿದೆ.  “50 ಖೋಖೆ, ಏಕ್ ದಮ್ ಓಕೆ” ಎಂಬ ಘೋಷಣೆಯನ್ನು ಕೂಗಿದ ಅವರು ಶಿಂಧೆ ಪಾಳಯದಲ್ಲಿರುವ ಶಾಸಕರು ತಲಾ  50 ಕೋಟಿ ರೂ. ಆಫರ್ ಪಡೆದ ನಂತರ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದರು ಎಂದು ಠಾಕ್ರೆ ಬೆಂಬಲಿಗರು ಆರೋಪಿಸಿದ್ದಾರೆ. ಆದರೆ ಈ ಪ್ರತಿಭಟನೆಗೆ ಶಿಂಧೆ ಪಾಳಯ ಇನ್ನೂ ಸ್ಪಂದಿಸಿಲ್ಲ.

ಸೇನೆಯ ಎರಡು ಬಣಗಳ ನಡುವೆ ಆಗಾಗ್ಗೆ ಘರ್ಷಣೆಗಳು ನಡೆಯುತ್ತಿದ್ದು, ಇತ್ತೀಚಿಗೆ ಗಣೇಶ ಮೂರ್ತಿ ವಿಸರ್ಜನೆ ಘರ್ಷಣೆ ಬಳಿಕ ಈ ಪ್ರಕರಣ ಜರುಗಿದೆ. ಶಿಂಧೆ ನೇತೃತ್ವದ ಬಂಡಾಯವು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಿದಾಗಿನಿಂದ ಶಿವಸೇನೆ ಬಣ ರಾಜಕೀಯ ತೀವ್ರಗೊಂಡಿದೆ.

ಮುಂಬೈನ ದಾದರ್‌ನಲ್ಲಿ ಶನಿವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಎರಡು ಬಣಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಎರಡೂ ಕಡೆಯವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡರು. ಎರಡು ಕಡೆಯವರು ಮೊದಲು ಪ್ರಭಾದೇವಿಯಲ್ಲಿ ಮತ್ತು ನಂತರ ದಾದರ್ ಪೊಲೀಸ್ ಠಾಣೆಯ ಹೊರಗೆ ಘರ್ಷಣೆ ನಡೆಸಿದರು. ದಾದರ್‌ನಲ್ಲಿ ನಡೆದ ಘರ್ಷಣೆಯಲ್ಲಿ ಶಿಂಧೆ ಪಾಳೆಯದ ಶಿವಸೇನಾ ಶಾಸಕ ಸದಾ ಸರ್ವಾಂಕರ್ ಗುಂಡು ಹಾರಿಸಿದ ಆರೋಪ ಹೊರಿಸಲಾಗಿದೆ. ಘರ್ಷಣೆಗೆ ಸಂಬಂಧಿಸಿದಂತೆ ಠಾಕ್ರೆ ಶಿಬಿರದ ಐವರು ಸೇನಾ ಕಾರ್ಯಕರ್ತರನ್ನು ಬಂಧಿಸಲಾಯಿತು. ಆದರೆ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಎರಡೂ ಕಡೆಯ ಕನಿಷ್ಠ 10 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT