ಗುಲಾಂ ನಬಿ ಆಜಾದ್ 
ದೇಶ

ಜನರಿಗೆ ಹಾನಿ, ದುಃಖವನ್ನು ತರುವ ಶಸ್ತ್ರಾಸ್ತ್ರ ತ್ಯಜಿಸಿ ಎಂದು ಉಗ್ರರಿಗೆ ಹೇಳಿದ ಗುಲಾಂ ನಬಿ ಆಜಾದ್‌, ಜೀವ ಬೆದರಿಕೆ

ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸುವ ಮುನ್ನ ಸರಣಿ ಸಾರ್ವಜನಿಕ ಸಭೆಗಳನ್ನು ನಡೆಸಿದ ಗುಲಾಂ ನಬಿ ಆಜಾದ್, ಜನರಿಗೆ ಹಾನಿ ಮತ್ತು ದುಃಖವನ್ನು ಮಾತ್ರ ತರುವ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಎಂದು ಭಯೋತ್ಪಾದಕರಿಗೆ ಮನವಿ ಮಾಡಿದರು.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸುವ ಮುನ್ನ ಸರಣಿ ಸಾರ್ವಜನಿಕ ಸಭೆಗಳನ್ನು ನಡೆಸಿದ ಗುಲಾಂ ನಬಿ ಆಜಾದ್, ಜನರಿಗೆ ಹಾನಿ ಮತ್ತು ದುಃಖವನ್ನು ಮಾತ್ರ ತರುವ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಎಂದು ಭಯೋತ್ಪಾದಕರಿಗೆ ಮನವಿ ಮಾಡಿದರು.

ಆಜಾದ್ ಹೀಗೆ ಹೇಳಿದ್ದೇ ತಡ, ಉಗ್ರ ಸಂಘಟನೆಗಳಿಂದ ಕೊಲೆ ಬೆದರಿಕೆ ಬಂದಿದ್ದು, ಬಿಜೆಪಿಯ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವ 'ದೇಶದ್ರೋಹಿ' ಎಂದು ಕರೆದಿದೆ.

ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆಜಾದ್, ದಕ್ಷಿಣ ಕಾಶ್ಮೀರವು ಆಗಾಗ್ಗೆ ಎನ್‌ಕೌಂಟರ್‌ಗಳನ್ನು ನೋಡುತ್ತಿರುವ ಪ್ರದೇಶ ಮತ್ತು ಹೆಚ್ಚಿನ ಸ್ಥಳೀಯ ಭಯೋತ್ಪಾದಕ ನೇಮಕಾತಿಗಳಿಗೆ ನೆಲೆಯಾಗಿದೆ. ಬಂದೂಕು ಸಂಸ್ಕೃತಿಯು ಪೀಳಿಗೆಗೆ ಹಾನಿ ಮಾಡಿದೆ ಮತ್ತು ಕಾಶ್ಮೀರ ಕಣಿವೆಯಲ್ಲಿ ಹೆಚ್ಚು ಯುವಕರು ಸಾಯುವುದನ್ನು ನೋಡಲು ಬಯಸುವುದಿಲ್ಲ ಎಂದು ಹೇಳಿದರು.

'ಬಂದೂಕು ಹಿಡಿದವರಿಗೆ ನನ್ನ ವಿನಂತಿ, ನೆನಪಿಡಿ, ಈ ಬಂದೂಕು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಬಂದೂಕು ವಿನಾಶ ಮತ್ತು ದುಃಖವನ್ನು ಮಾತ್ರ ತರುತ್ತದೆ' ಎಂದು ಹೇಳಿದರು.

ಆಜಾದ್ ಅವರು ಕಳೆದ ತಿಂಗಳು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು. ತಮ್ಮದೇ ಪಕ್ಷ ಕಟ್ಟುವ ಮುನ್ನ ಜಮ್ಮು-ಕಾಶ್ಮೀರದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿದ್ದು, ಮುಂದಿನ ಒಂದು ವಾರದಲ್ಲಿ ಹೊಸ ಪಕ್ಷ ಘೋಷಣೆಯಾಗುವ ನಿರೀಕ್ಷೆ ಇದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಗಾಗಿ ಪಾಕಿಸ್ತಾನವನ್ನು ದೂಷಿಸಿದ ಆಜಾದ್, ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರವು ಸಾವಿರಾರು ಮಹಿಳೆಯರನ್ನು ವಿಧವೆಯರನ್ನಾಗಿ ಮತ್ತು ಲಕ್ಷಗಟ್ಟಲೆ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ನನಗೆ ಹೆಚ್ಚು ರಕ್ತಪಾತ ಮತ್ತು ಯುವಕರ ಮೃತದೇಹಗಳು ಬೇಕಾಗಿಲ್ಲ. ಸೋತ ದೇಶವು ತನ್ನ ಸ್ವಂತ ಮನೆಯನ್ನೇ ಸರಿಯಾಗಿಸಿಕೊಳ್ಳಲು ಸಾಧ್ಯವಾಗಿಲ್ಲ, ಅದು ನಮ್ಮ ರಾಜ್ಯ ಮತ್ತು ದೇಶವನ್ನು ನಾಶಮಾಡಲು ಮುಂದಾಗಿದೆ' ಎಂದು ಹೇಳಿದರು.

ಚುನಾವಣೆಯಲ್ಲಿ ಗೆಲ್ಲಲು ಧಾರ್ಮಿಕ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ನಾಯಕರಂತೆ ನಾನಲ್ಲ. ಭಾವನಾತ್ಮಕ ಮತ್ತು ಸುಳ್ಳು ಘೋಷಣೆಗಳನ್ನು ಮಾಡುವ ಮೂಲಕ ನಾನು ಜನರಿಗೆ ಮೋಸ ಮಾಡುವುದಿಲ್ಲ. ಭಯೋತ್ಪಾದಕ ಗುಂಪು ತನ್ನ ವಿರುದ್ಧ ಕೊಲೆ ಬೆದರಿಕೆಗಳನ್ನು ಹಾಕಿದೆ. ಆದರೆ, ಶಾಂತಿ ಮಾರ್ಗವನ್ನು ಅನುಸರಿಸಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದರು.

2019ರ ಆಗಸ್ಟ್‌ನಲ್ಲಿ  ಕೇಂದ್ರ ಸರ್ಕಾರವು ಹಿಂತೆಗೆದುಕೊಂಡ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ ಎಂದು ಪದೇ ಪದೇ ಆಜಾದ್ ಹೇಳುತ್ತಿದ್ದಾರೆ. 'ಇದನ್ನು ಪುನಃಸ್ಥಾಪಿಸಲು ಸಂಸತ್ತಿನಲ್ಲಿ 2/3 ಬಹುಮತದ ಅಗತ್ಯವಿದೆ. ಸುಪ್ರೀಂ ಕೋರ್ಟ್ ಮತ್ತೊಂದು ಆಯ್ಕೆಯಾಗಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಸುಪ್ರೀಂ ಕೋರ್ಟ್ ಒಮ್ಮೆಯೂ ಈ ಪ್ರಕರಣವನ್ನು ಆಲಿಸಿಲ್ಲ' ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ರಾಜ್ಯದ ಸ್ಥಾನಮಾನ, ಉದ್ಯೋಗಗಳ ರಕ್ಷಣೆ ಮತ್ತು ಭೂಮಿಯ ಹಕ್ಕುಗಳ ಮರುಸ್ಥಾಪನೆ ತನ್ನ ಗಮನವಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗದ್ದುಗೆ ಗುದ್ದಾಟ: 'ಹೈಕಮಾಂಡ್' ನತ್ತ ಎಲ್ಲರ ಚಿತ್ತ, ಮುಂದೇನು?

ಕೇರಳ: ರೂ. 50 ಲಕ್ಷ ಮೌಲ್ಯದ 'ಐಷಾರಾಮಿ ಬೈಕ್' ಬೇಕೆಂದು ಗಲಾಟೆ, ತಂದೆಯಿಂದ ಹಲ್ಲೆಗೊಳಗಾದ ಯುವಕ ಸಾವು!

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

SCROLL FOR NEXT