ಸಂಗ್ರಹ ಚಿತ್ರ 
ದೇಶ

ವಿದೇಶಿ IT ಸಂಸ್ಥೆಗಳ ಆನ್ಲೈನ್ ಉದ್ಯೋಗ ಆಫರ್ ಬಗ್ಗೆ ಜಾಗರೂಕರಾಗಿರಿ: ಕೇಂದ್ರ ಸರ್ಕಾರ ಎಚ್ಚರಿಕೆ

ಸಂಶಯಾಸ್ಪದ ಮತ್ತು ವಿದೇಶಿ ಐಟಿ ಸಂಸ್ಥೆಗಳಿಂದ ಬರುವ ಆನ್ಲೈನ್ ಉದ್ಯೋಗ ಆಫರ್ ಗಳ ಬಗ್ಗೆ ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಶನಿವಾರ ಎಚ್ಚರಿಕೆ ನೀಡಿದೆ.

ನವದೆಹಲಿ: ಸಂಶಯಾಸ್ಪದ ಮತ್ತು ವಿದೇಶಿ ಐಟಿ ಸಂಸ್ಥೆಗಳಿಂದ ಬರುವ ಆನ್ಲೈನ್ ಉದ್ಯೋಗ ಆಫರ್ ಗಳ ಬಗ್ಗೆ ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಶನಿವಾರ ಎಚ್ಚರಿಕೆ ನೀಡಿದೆ.

ಥೈಲ್ಯಾಂಡ್ ಮೂಲದ ಲಾಭದಾಯಕ ಉದ್ಯೋಗ ಅಥವಾ ಐಟಿ ಉದ್ಯೋಗಗಳ ನೀಡಿಕೆ ಕುರಿತು ಭಾರತೀಯ ಯುವಕರನ್ನು ಆಕರ್ಷಿಸಲು ಉದ್ದೇಶಿಸಿರುವ ನಕಲಿ ಆಫರ್ ಗಳ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶನಿವಾರ ಎಚ್ಚರಿಕೆ ನೀಡಿದ್ದು, ಸಾಮಾಜಿಕ ಮಾಧ್ಯಮ ಜಾಹೀರಾತುಗಳ ಮೂಲಕ ದುಬೈ ಮತ್ತು ಭಾರತ ಮೂಲದ ಏಜೆಂಟರಿಂದ ಥೈಲ್ಯಾಂಡ್‌ನಲ್ಲಿ ಲಾಭದಾಯಕ ಡೇಟಾ ಎಂಟ್ರಿ ಉದ್ಯೋಗಗಳ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದೆ.

"ಕಾಲ್ ಸೆಂಟರ್ ಹಗರಣ ಮತ್ತು ಕ್ರಿಪ್ಟೋ-ಕರೆನ್ಸಿ ವಂಚನೆಯಲ್ಲಿ ತೊಡಗಿರುವ ಸಂಶಯಾಸ್ಪದ ಐಟಿ ಸಂಸ್ಥೆಗಳಿಂದ ಥಾಯ್ಲೆಂಡ್‌ನ ಬ್ಯಾಂಕಾಕ್ ಮತ್ತು ಮ್ಯಾನ್ಮಾರ್‌ನಲ್ಲಿ 'ಡಿಜಿಟಲ್ ಸೇಲ್ಸ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್' ಹುದ್ದೆಗಳಿಗೆ ಭಾರತೀಯ ಯುವಕರನ್ನು ಆಕರ್ಷಿಸಲು ಲಾಭದಾಯಕ ಉದ್ಯೋಗಗಳನ್ನು ನೀಡುವ ನಕಲಿ ಉದ್ಯೋಗ ಹಗರಣಗಳ ನಿದರ್ಶನಗಳು ಇತ್ತೀಚೆಗೆ ನಮ್ಮ ಮಿಷನ್‌ಗಳಿಂದ ನಮ್ಮ ಗಮನಕ್ಕೆ ಬಂದಿವೆ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಉದ್ಯೋಗದ ಆಮಿಷ ಒಡ್ಡಿ ಯುವಕರನ್ನು ಅಕ್ರಮವಾಗಿ ಹೆಚ್ಚಾಗಿ ಮ್ಯಾನ್ಮಾರ್‌ಗೆ ಕರೆದೊಯ್ಯಲಾಗುತ್ತದೆ. ಹೀಗೆ ತೆರಳಿದ ಯುವಕರು ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಬಂಧಿತರಾಗಿದ್ದಾರೆ ಎಂದು ವರದಿಯಾಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಅಥವಾ ಇತರ ಮೂಲಗಳ ಮೂಲಕ ಬರುತ್ತಿರುವ ಇಂತಹ ನಕಲಿ ಉದ್ಯೋಗ ಆಫರ್‌ಗಳಲ್ಲಿ ಸಿಲುಕಿಕೊಳ್ಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗುತ್ತದೆ. ಯಾವುದೇ ಉದ್ಯೋಗ ಪ್ರಸ್ತಾಪವನ್ನು ತೆಗೆದುಕೊಳ್ಳುವ ಮೊದಲು ವಿದೇಶದಲ್ಲಿರುವ ಸಂಬಂಧಪಟ್ಟ ಸರ್ಕಾರಿ ಕಚೇರಿಗಳ ಮೂಲಕ ವಿದೇಶಿ ಉದ್ಯೋಗದಾತರ ರುಜುವಾತುಗಳನ್ನು ಪರಿಶೀಲಿಸುವಂತೆ ವಿದೇಶಾಂಗ ಇಲಾಖೆ ಭಾರತೀಯರಿಗೆ ಸಲಹೆ ನೀಡಿದೆ.

ಉದ್ಯೋಗದ ಉದ್ದೇಶಗಳಿಗಾಗಿ ಪ್ರವಾಸಿ ಅಥವಾ ಭೇಟಿ ವೀಸಾಗಳಲ್ಲಿ ಪ್ರಯಾಣಿಸುವ ಮೊದಲು, ಭಾರತೀಯ ಪ್ರಜೆಗಳು ವಿದೇಶದಲ್ಲಿ ಮಿಷನ್‌ಗಳ ಮೂಲಕ ವಿದೇಶಿ ಉದ್ಯೋಗದಾತರ ರುಜುವಾತುಗಳನ್ನು ಪರಿಶೀಲಿಸಬೇಕು.. ಅವರು ಉದ್ಯೋಗದ ಪ್ರಸ್ತಾಪವನ್ನು ತೆಗೆದುಕೊಳ್ಳುವ ಮೊದಲು ನೇಮಕಾತಿ ಏಜೆಂಟ್‌ಗಳು ಮತ್ತು ಯಾವುದೇ ಕಂಪನಿಯ ಪೂರ್ವವರ್ತನೆಗಳನ್ನು ಸಹ ಪರಿಶೀಲಿಸಬೇಕು. ಥಾಯ್ಲೆಂಡ್ ಮತ್ತು ಮ್ಯಾನ್ಮಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಈಗಾಗಲೇ ಹಗರಣದ ಬಗ್ಗೆ ಸಲಹೆಗಳನ್ನು ನೀಡಿದ್ದು, ಭಾರತವು ಎರಡೂ ದೇಶಗಳೊಂದಿಗೆ ವಿಷಯವನ್ನು ತೆಗೆದುಕೊಂಡಿದೆ. ನಿರ್ಬಂಧಿತ ಪ್ರವೇಶದೊಂದಿಗೆ ಮ್ಯಾನ್ಮಾರ್‌ನ ಪ್ರದೇಶದಿಂದ 32 ಭಾರತೀಯ ಪ್ರಜೆಗಳಿಗೆ ಸಹಾಯ ಮಾಡಲಾಗಿದ್ದು, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನ ರಾಯಭಾರ ಕಚೇರಿಗಳು ಸಹಾಯ ಕೋರಿರುವ 50 ರಿಂದ 60 ಭಾರತೀಯರೊಂದಿಗೆ ಸಂಪರ್ಕದಲ್ಲಿವೆ.

ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯಲ್ಲಿನ ಭದ್ರತಾ ಪರಿಸ್ಥಿತಿಯು ಭಾರತೀಯರನ್ನು ಆಮಿಷವೊಡ್ಡುವ ಕಂಪನಿಗಳ ಚಟುವಟಿಕೆಗಳನ್ನು ಸುಗಮಗೊಳಿಸಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ. ಹೆಚ್ಚಿನ ಕಾರ್ಮಿಕರು ಮೂಲಭೂತ ಕಂಪ್ಯೂಟರ್ ಕೌಶಲ್ಯಗಳನ್ನು ಹೊಂದಿದ್ದರು ಮತ್ತು ಅವರನ್ನು ಬಲವಂತವಾಗಿ ಥಾಯ್ ಗಡಿಯ ಮೂಲಕ ಮ್ಯಾನ್ಮಾರ್‌ಗೆ ಕರೆದೊಯ್ಯುವ ಯಾವುದೇ ಸುಳಿವು ಇರಲಿಲ್ಲ ಎಂದು ಸಂತ್ರಸ್ಥರು ಹೇಳಿದ್ದಾರೆ ಎಂದು ಹೇಳಲಾಗಿದೆ.

ಲಾಭದಾಯಕ ಐಟಿ ಉದ್ಯೋಗದ ನೆಪದಲ್ಲಿ ಮ್ಯಾನ್ಮಾರ್‌ನ ದೂರದ ಭಾಗಕ್ಕೆ ಕರೆದೊಯ್ಯಲಾಗಿದ್ದ 32 ಭಾರತೀಯರನ್ನು ಅಧಿಕಾರಿಗಳು ಇದುವರೆಗೆ ರಕ್ಷಿಸಿದ್ದಾರೆ. ಅದೇ ಪ್ರದೇಶದಲ್ಲಿ ಸಿಲುಕಿರುವ ಇತರ 60 ಮಂದಿಗೆ ಸಹಾಯ ಮಾಡಲು ಭಾರತವು ಥೈಲ್ಯಾಂಡ್ ಮತ್ತು ಮ್ಯಾನ್ಮಾರ್‌ನೊಂದಿಗೆ ಕೆಲಸ ಮಾಡುತ್ತಿದೆ ಎಂದು ಸಚಿವಾಲಯ ಹೇಳಿದೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel