ಇಸ್ರೊ ಬಿಡುಗಡೆ ಮಾಡಿರುವ ಚಿತ್ರ 
ದೇಶ

ಚಂದ್ರನ ಮೇಲೆ ಲ್ಯಾಂಡರ್‌ನಿಂದ ರೋವರ್ ಪ್ರಗ್ಯಾನ್ ಹೊರಡುವ ವಿಡಿಯೊ ಬಿಡುಗಡೆ ಮಾಡಿದ ಇಸ್ರೊ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಭಾರತದ ರೋಬೋಟ್‌ಗಳಾದ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಮೇಲ್ಮೈಯಿಂದ ತೆಗೆದ ಮೊದಲ ಸೆಲ್ಫಿಗಳನ್ನು ಹಂಚಿಕೊಳ್ಳುವುದರೊಂದಿಗೆ ಶತಕೋಟಿ ಭಾರತೀಯರು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಕ್ಷಣವು ಕೊನೆಗೂ ಬಂದಿದೆ.

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಭಾರತದ ರೋಬೋಟ್‌ಗಳಾದ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನ ಮೇಲ್ಮೈಯಿಂದ ತೆಗೆದ ಮೊದಲ ಸೆಲ್ಫಿಗಳನ್ನು ಹಂಚಿಕೊಳ್ಳುವುದರೊಂದಿಗೆ ಶತಕೋಟಿ ಭಾರತೀಯರು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಕ್ಷಣವು ಕೊನೆಗೂ ಬಂದಿದೆ.

ಪ್ರಗ್ಯಾನ್ ರೋವರ್ ಶರ ವೇಗದಲ್ಲಿದ್ದಂತೆ ವಿಕ್ರಮ್ ಲ್ಯಾಂಡರ್ ಅದರ ರಾಂಪ್‌ನ ಚಿತ್ರಗಳನ್ನು ಮತ್ತು ವೀಡಿಯೊವನ್ನು ತೆಗೆದುಕೊಂಡಿತು.

ಟ್ವೀಟ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಇಸ್ರೋ, ಚಂದ್ರಯಾನ-3 ರೋವರ್ ಲ್ಯಾಂಡರ್‌ನಿಂದ ಚಂದ್ರನ ಮೇಲ್ಮೈಗೆ ಹೇಗೆ ರಾಂಪ್ ಮಾಡಿತು ಎಂಬುದು ಇಲ್ಲಿದೆ ಎಂದು ಬರೆದಿದೆ.

ಚಂದ್ರಯಾನ-3 ಮೊನ್ನೆ ಆಗಸ್ಟ್ 23ರಂದು ಬುಧವಾರ ಸಂಜೆ 6.04ಕ್ಕೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ನ್ನು ಯಶಸ್ವಿಯಾಗಿ ನಡೆಸಿತು, ಭಾರತವು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶವಾಗಿದೆ. ಸುಮಾರು 4 ಗಂಟೆಗಳ ನಂತರ, ಪ್ರಗ್ಯಾನ್ ರೋವರ್ ಮೇಲ್ಮೈಯಲ್ಲಿ ಹೊರಬಂದಿತು, ಈ ಕ್ಷಣವನ್ನು ಇಸ್ರೋ ಹಂಚಿಕೊಂಡ ಇತ್ತೀಚಿನ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದ ಕಲರ್ ವೀಡಿಯೋದಲ್ಲಿ ಪ್ರಗ್ಯಾನ್ ರೋವರ್‌ನ ಸೌರ ಫಲಕವು ಸೂರ್ಯನ ಬೆಳಕನ್ನು ಪಡೆಯುತ್ತಿದೆ. ಚಂದ್ರನ ಮೇಲ್ಮೈಯಲ್ಲಿ ಪ್ರಗ್ಯಾನ್ ರೋವರ್‌ನ ಸುಂದರವಾದ ನೆರಳು ಕೂಡ ಕಂಡುಬರುತ್ತಿದೆ.

ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಲು ಯಾವುದೇ ಬಾಹ್ಯಾಕಾಶ ನೌಕೆಗೆ ಸಾಧ್ಯವಾಗದ ಕಾರಣ ಚಂದ್ರಯಾನ-3 ರ ಸಾಧನೆ ವಿಶೇಷವಾಗಿದೆ. ಇಲ್ಲಿ ಕುಳಿಗಳು ಮತ್ತು ಆಳವಾದ ಕಂದಕಗಳಿಂದ ತುಂಬಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವಿಕ್ರಮ್ ತುಲನಾತ್ಮಕವಾಗಿ ಬಯಲು ಪ್ರದೇಶಕ್ಕೆ ಬಂದಿಳಿದಿದ್ದಾರೆ ಎಂದು ತೋರಿಸುತ್ತದೆ, ಅದು ಪ್ರಗ್ಯಾನ್ ಮೂನ್‌ವಾಕ್ ಮಾಡಲು ಅವಕಾಶವನ್ನು ನೀಡುತ್ತದೆ.

ವಿಕ್ರಮ್ ಬಂದಿಳಿದ ಚಂದ್ರನ ಮೇಲೆ ಸೂರ್ಯನ ಬೆಳಕು 14 ದಿನಗಳ ಕಾಲ ಇರಲಿದ್ದು, ರೋವರ್ ಈಗಾಗಲೇ ವೈಜ್ಞಾನಿಕ ಪ್ರಯೋಗಗಳ ಸರಣಿಯನ್ನು ಆರಂಭಿಸಿದೆ. ಚಂದ್ರಯಾನ-3 ಮಿಷನ್‌ನ ಸಂಶೋಧನೆಗಳು ಚಂದ್ರನ ನೀರಿನ ಮಂಜುಗಡ್ಡೆಯ ಜ್ಞಾನವನ್ನು ವಿಸ್ತರಿಸಬಹುದು, ಇದು ಚಂದ್ರನ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಒಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT