ಬಿಜೆಪಿ 
ದೇಶ

ಕೆಲವು ಕುಟುಂಬಗಳ ಹಿತಾಸಕ್ತಿ ಕಾಪಾಡುವುದೇ INDIA ದ ಉದ್ದೇಶ, ಅದೊಂದು 'ಸ್ವಾರ್ಥ ಮೈತ್ರಿ': ಬಿಜೆಪಿ

ಇಂದು ಮುಂಬೈನಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ನಡೆಯುತ್ತಿದ್ದು, ತನ್ನ ಮೈತ್ರಿಕೂಟದ ಸದಸ್ಯ ಪಕ್ಷಗಳ ಚುಕ್ಕಾಣಿ ಹಿಡಿದಿರುವ ಕುಟುಂಬಗಳ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಗುರಿಯನ್ನು ಹೊಂದಿರುವ 'ಸ್ವಾರ್ಥ ಮೈತ್ರಿ'ಯೇ ಇಂಡಿಯಾ ಒಕ್ಕೂಟ ಎಂದು ವಿರೋಧ ಪಕ್ಷ ಬಿಜೆಪಿ ಗುರುವಾರ ಟೀಕಿಸಿದೆ.

ನವದೆಹಲಿ: ಇಂದು ಮುಂಬೈನಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ ನಡೆಯುತ್ತಿದ್ದು, ತನ್ನ ಮೈತ್ರಿಕೂಟದ ಸದಸ್ಯ ಪಕ್ಷಗಳ ಚುಕ್ಕಾಣಿ ಹಿಡಿದಿರುವ ಕುಟುಂಬಗಳ ಹಿತಾಸಕ್ತಿಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಗುರಿಯನ್ನು ಹೊಂದಿರುವ 'ಸ್ವಾರ್ಥ ಮೈತ್ರಿ'ಯೇ ಇಂಡಿಯಾ ಒಕ್ಕೂಟ ಎಂದು ವಿರೋಧ ಪಕ್ಷ ಬಿಜೆಪಿ ಗುರುವಾರ ಟೀಕಿಸಿದೆ.

ಬಿಜೆಪಿ ವಿರುದ್ಧದ ತಮ್ಮ ಹೋರಾಟದಲ್ಲಿ ಕಾರ್ಯಸೂಚಿ ರೂಪಿಸಲು 28 ವಿರೋಧ ಪಕ್ಷಗಳು ಮುಂಬೈನಲ್ಲಿ ಇಂದು ಸಭೆ ಸೇರಿದ್ದು, ಆಡಳಿತ ಪಕ್ಷದ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್‌ನ 'ಕ್ಷಿಪಣಿ' ಎಂದಿಗೂ ಉಡಾವಣೆಯಾಗುವುದಿಲ್ಲ. ಏಕೆಂದರೆ, ಅದರಲ್ಲಿ ಇಂಧನವಿಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ-3 ರೀತಿ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಯಶಸ್ವಿಯಾಗಿ ಮೂರನೇ ಬಾರಿಗೆ ಲ್ಯಾಂಡ್ ಆಗಲಿದೆ. ಏಕೆಂದರೆ, ಇದು ಅಭಿವೃದ್ಧಿಯಿಂದ ಉತ್ತೇಜಿತವಾಗಿದೆ ಎಂದು ಅವರು ಹೇಳಿದರು.

ಇಂಡಿಯಾ ಮೈತ್ರಿಕೂಟದಲ್ಲಿ ಚರ್ಚಿಸಲಾಗುತ್ತಿರುವ ಸಿಎಂಪಿ (ಸಾಮಾನ್ಯ ಕನಿಷ್ಠ ಕಾರ್ಯಕ್ರಮ) ವಾಸ್ತವವಾಗಿ 'ಭ್ರಷ್ಟಾಚಾರದ ಗರಿಷ್ಠ ಲಾಭ'ವನ್ನು ಹೊಂದಿದೆ. ಏಕೆಂದರೆ, ಈ ಎಲ್ಲಾ ಪಕ್ಷಗಳು ಒಟ್ಟಾಗಿ 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳನ್ನು ಪ್ರತಿನಿಧಿಸುತ್ತವೆ ಎಂದು ಅವರು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸ್ಥಿರ ಮತ್ತು ಅಭಿವೃದ್ಧಿ ಪರ ಆಡಳಿತಕ್ಕೆ ಹಾನಿ ಮಾಡುವ ಅಥವಾ ಅಡ್ಡಿಪಡಿಸುವುದು ಅವರ ಇನ್ನೊಂದು ಗುರಿಯಾಗಿದೆ. ಪ್ರತಿಪಕ್ಷಗಳ ಒಗ್ಗೂಡುವ ಪ್ರಯತ್ನವು ಮ್ಯೂಸಿಕಲ್ ಚೇರ್ ಆಟವಾಗಿದೆ ಮತ್ತು ಈ ಪಕ್ಷಗಳು ಪ್ರತಿ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ಧ ಒಗ್ಗೂಡುತ್ತವೆ. ಆದರೆ, ಅವರ ಮೈತ್ರಿಯಲ್ಲಿಯೇ ಆಂತರಿಕ ಘರ್ಷಣೆಗಳಿವೆ ಮತ್ತು ಪ್ರಧಾನಿ ಅಭ್ಯರ್ಥಿ ಯಾರೆಂದು ನಿರ್ಧರಿಸುವುದೇ ಅವರಿಗೆ ಸವಾಲಾಗಿರುತ್ತದೆ ಎಂದು ಪಾತ್ರಾ ಹೇಳಿದರು.

ಈ ‘ಘಮಾಂಡಿಯಾ ಮೈತ್ರಿ’ ಸ್ವಾರ್ಥದ ಗುಂಪುಗಾರಿಕೆಯಾಗಿದೆ. ಸೋನಿಯಾ ಗಾಂಧಿ ಮತ್ತು ಲಾಲು ಪ್ರಸಾದ್ ಯಾದವ್ ಅವರಂತಹ ನಾಯಕರು ದೇಶದ ಅಭಿವೃದ್ಧಿಗಿಂತ ರಾಜಕೀಯದಲ್ಲಿ ತಮ್ಮ ಮಕ್ಕಳ ಭವಿಷ್ಯ ರೂಪಿಸುವ ಸಾಧ್ಯತೆಯೇ ಹೆಚ್ಚು. 'ಗರಿಷ್ಠ ಪರಿವಾರ'ವೇ ಅವರ ಗುರಿಯಾಗಿದೆ ಎಂದು ಆರೋಪಿಸಿದರು.

ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಯಾವುದೇ ನೀತಿ ಅಥವಾ ಉದ್ದೇಶ ಅಥವಾ ನಾಯಕ ಇಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Ballari banner row: ಯಾರ ಗನ್ ನಿಂದ ಗುಂಡು ಹಾರಿತ್ತು ಎಂದು ತನಿಖೆ ಮಾಡಲು ಹೇಳಿದ್ದೇನೆ: ಸಿಎಂ ಸಿದ್ದರಾಮಯ್ಯ

Ballari clash: ಜನಾರ್ಧನ ರೆಡ್ಡಿ ಗುರಿಯಾಗಿಸಿಯೇ ಫೈರಿಂಗ್‌, Petrol bomb ಎಸೆಯುವ ಪ್ರಯತ್ನ ಕೂಡ ನಡೆದಿದೆ: ಶ್ರೀರಾಮುಲು ಗಂಭೀರ ಆರೋಪ

ಚೆನ್ನೈನಲ್ಲಿಂದು 3ನೇ ಆವೃತ್ತಿಯ ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ

ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಅತಿಸಾರದಿಂದ ಬಳಲುತ್ತಿರುವ ಮಂದಿ: ಮೃತರ ಸಂಖ್ಯೆ 10ಕ್ಕೆ ಏರಿಕೆ

ರಾಜ್ಯದಲ್ಲಿ EVM ಸಮೀಕ್ಷೆ: ಶೇ. 85 ರಷ್ಟು ಮತದಾರರ ನಂಬಿಕೆ, ರಾಹುಲ್ ವಿರುದ್ಧ ಬಿಜೆಪಿ ಕಿಡಿ; ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

SCROLL FOR NEXT