ಇಂಧನ ಸಚಿವ ಆರ್ ಕೆ ಸಿಂಗ್ 
ದೇಶ

2025 ಏಪ್ರಿಲ್ ನಿಂದ ದೇಶಾದ್ಯಂತ ಪೀಕ್ ಅವರ್ ನಲ್ಲಿ ವಿದ್ಯುತ್ ಬೆಲೆ ಶೇ.20ರಷ್ಟು ಹೆಚ್ಚಳ

ದೇಶಾದ್ಯಂತ ವಿದ್ಯುತ್ ಬಳಕೆ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ದುಬಾರಿ ದುನಿಯಾ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ವಿದ್ಯುಚ್ಛಕ್ತಿ (ಗ್ರಾಹಕರ ಹಕ್ಕುಗಳು) ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಪ್ರಕಾರ, ಏಪ್ರಿಲ್ 1, 2025ರಿಂದ ಪೀಕ್ ಅವರ್ ಗಳಲ್ಲಿ(peak hour) ವಿದ್ಯುತ್ ಬಳಕೆಯ ಶೇಕಡಾ 10ರಿಂದ ಹೆಚ್ಚು ಪಾವತಿಸಬೇಕಾಗುತ್ತದೆ.

ನವದೆಹಲಿ: ದೇಶಾದ್ಯಂತ ವಿದ್ಯುತ್ ಬಳಕೆ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ದುಬಾರಿ ದುನಿಯಾ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ವಿದ್ಯುಚ್ಛಕ್ತಿ (ಗ್ರಾಹಕರ ಹಕ್ಕುಗಳು) ನಿಯಮಗಳಲ್ಲಿ ಮಾಡಲಾದ ತಿದ್ದುಪಡಿಗಳ ಪ್ರಕಾರ, ಏಪ್ರಿಲ್ 1, 2025ರಿಂದ ಪೀಕ್ ಅವರ್ ಗಳಲ್ಲಿ(peak hour) ವಿದ್ಯುತ್ ಬಳಕೆಯ ಶೇಕಡಾ 10ರಿಂದ ಹೆಚ್ಚು ಪಾವತಿಸಬೇಕಾಗುತ್ತದೆ. ಆದರೆ ಹಗಲಿನ ಸಮಯದಲ್ಲಿ ಸಾಮಾನ್ಯ ದರಕ್ಕಿಂತ ಶೇಕಡಾ 10ರಿಂದ 20ರಷ್ಟು ಕಡಿಮೆಯಾಗಲಿದೆ. 

ನಿನ್ನೆ ವಿದ್ಯುತ್ ಸಚಿವಾಲಯವು ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳಲ್ಲಿ ಎರಡು ಬದಲಾವಣೆಗಳನ್ನು ಪ್ರಕಟಿಸಿದೆ. ಪರಿಚಯಿಸಲಾದ ದಿನದ ಸಮಯ ದರ( Time of Day-ToD) ತೆರಿಗೆ ಮತ್ತು ಸ್ಮಾರ್ಟ್ ಮೀಟರಿಂಗ್ ನಿಬಂಧನೆಗಳ ತರ್ಕಬದ್ಧಗೊಳಿಸುವಿಕೆ ಎಂಬ ವಿಧಾನ ಪ್ರಕಟಿಸಿದೆ. ToD ಕಾರ್ಯವಿಧಾನದ ಪ್ರಕಾರ, ಹಗಲಿನಲ್ಲಿ ವಿದ್ಯುತ್ ಸುಂಕವು ಸಾಮಾನ್ಯ ಸುಂಕಕ್ಕಿಂತ ಶೇಕಡಾ 10ಕ್ಕಿಂತ 20ರಷ್ಟು ಕಡಿಮೆಯಿರುತ್ತದೆ, ಆದರೆ ಬೆಳಗ್ಗೆ ಮತ್ತು ರಾತ್ರಿ ಸಮಯದಲ್ಲಿ ದರವು ಶೇಕಡಾ 10ರಿಂದ 20ರಷ್ಟು ಹೆಚ್ಚಾಗಲಿದೆ. 

ಯಾವಾಗ ಜಾರಿ?: ಹೊಸ ದರವು 10 KW ಮತ್ತು ಅದಕ್ಕಿಂತ ಹೆಚ್ಚಿನ ಬಳಕೆಯನ್ನು ಹೊಂದಿರುವ ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಗಳ ಬಳಕೆ ಗ್ರಾಹಕರಿಗೆ 1 ಏಪ್ರಿಲ್ 2024 ರಿಂದ ಹೊಸ ದರ ಅನ್ವಯವಾಗುತ್ತದೆ. ರೈತರನ್ನು ಹೊರತುಪಡಿಸಿ ಉಳಿದ ಎಲ್ಲಾ ಗ್ರಾಹಕರಿಗೆ, ನಿಯಮವು 1 ನೇ ಏಪ್ರಿಲ್ 2025 ರಿಂದ ಅನ್ವಯಿಸುತ್ತದೆ.

ರಾತ್ರಿ ಮತ್ತು ಮುಂಜಾನೆ ಹೊತ್ತು ಉಷ್ಣ, ಜಲವಿದ್ಯುತ್ ಮತ್ತು ಅನಿಲ ಆಧಾರಿತ ಸಾಮರ್ಥ್ಯವನ್ನು ಬಳಸಲಾಗುತ್ತದೆ. ಅವು ಸೌರ ಶಕ್ತಿಗಿಂತ ಹೆಚ್ಚಿನ ವೆಚ್ಚವನ್ನು ಹೊಂದಿವೆ, ಇದರರ್ಥ ಗ್ರಾಹಕರು ತಮ್ಮ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ತಮ್ಮ ಬಳಕೆಯನ್ನು ಯೋಜಿಸಬಹುದು. ವಿದ್ಯುತ್ ವೆಚ್ಚಗಳು ಕಡಿಮೆ ಇರುವಾಗ ಸೌರ ಸಮಯದಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಯೋಜಿಸಬಹುದು.

ಹೆಚ್ಚಿನ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳು (SERC) ಈಗಾಗಲೇ ದೊಡ್ಡ ವಾಣಿಜ್ಯ ಮತ್ತು ಕೈಗಾರಿಕಾ (C&I) ಗ್ರಾಹಕರಿಗೆ ದಿನದ ಸಮಯ ದರಗಳನ್ನು- ToD ಜಾರಿಗೆ ತಂದಿವೆ. ಸ್ಮಾರ್ಟ್ ಮೀಟರ್‌ಗಳ ಸ್ಥಾಪನೆಯೊಂದಿಗೆ, ದರ ನೀತಿಯ ಆದೇಶದಂತೆ ದೇಶೀಯ ಗ್ರಾಹಕರ ಮಟ್ಟದಲ್ಲಿ ಮೀಟರಿಂಗ್ ಟಿಒಡಿಯನ್ನು ಪರಿಚಯಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT