ಸಾಂದರ್ಭಿಕ ಚಿತ್ರ 
ದೇಶ

ತಾನು ಪರಾರಿಯಾಗಿದ್ದ ಉತ್ತರ ಪ್ರದೇಶ ಪ್ರಿಯಕರನಿಂದಲೇ ಹತ್ಯೆಗೀಡಾದ ಜಮ್ಮು ಯುವತಿ!

ತಾನು ಪರಾರಿಯಾಗಿದ್ದ ಉತ್ತರ ಪ್ರದೇಶ ಪ್ರಿಯಕರನಿಂದಲೇ ಜಮ್ಮು ಮೂಲದ ಅಪ್ರಾಪ್ತ ಯುವತಿ ಭೀಕರವಾಗಿ ಹತ್ಯೆಗೀಡಾರುವ ಘಟನೆ ವರದಿಯಾಗಿದೆ.

ಹಾಪುರ್: ತಾನು ಪರಾರಿಯಾಗಿದ್ದ ಉತ್ತರ ಪ್ರದೇಶ ಪ್ರಿಯಕರನಿಂದಲೇ ಜಮ್ಮು ಮೂಲದ ಅಪ್ರಾಪ್ತ ಯುವತಿ ಭೀಕರವಾಗಿ ಹತ್ಯೆಗೀಡಾರುವ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಹಾಪುರ್‌ನ ಭೀಮ್ ನಗರದಲ್ಲಿ ಈ ಘಟನೆ ನಡೆದಿದ್ದು, ಮಾರ್ಚ್ 22 ರಂದು ಹಾಪುರ್‌ನ ಭೀಮ್ ನಗರದಲ್ಲಿರುವ ತನ್ನ ಮನೆಯಲ್ಲಿ ಮಾಹಿನೂರ್‌ ಎಂಬ ಜಮ್ಮು ಮೂಲದ 16 ವರ್ಷದ ಅಪ್ರಾಪ್ತ ಯುವತಿ ಕೊಲೆಯಾಗಿದ್ದಾಳೆ. ಯುವತಿಯನ್ನು ಆಕೆಯ ಪ್ರಿಯಕರ ಆಶು ಎಂಬಾತನೇ ಕತ್ತು ಹಿಸುಕಿ ಕೊಂದು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಕಾರ್ಯಾಚರಣೆ ನಡೆಸಿ ಪೊಲೀಸರು ಕೊಲೆಗೈದ ಪ್ರಿಯಕರ ಆಶುನನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ನಾಲ್ಕು ತಿಂಗಳ ಹಿಂದೆ ಹಾಪುರ್ ಕೊತ್ವಾಲಿ ಪ್ರದೇಶದ ನಿರ್ಗತಿಕರ ಸೇವಾ ಸಮಿತಿಯ ನಿವಾಸಿ ಆಶು ಜಮ್ಮುವಿಗೆ ಬಂದಿದ್ದ. ಈ ವೇಳೆ ಅಲ್ಲಿ ಅವನು 16 ವರ್ಷದ ಅಪ್ರಾಪ್ತ ಯುವತಿ ಮಾಹಿನೂರ್ ಜೊತೆ ಸ್ನೇಹ ಬೆಳೆಸಿದ್ದ. ಬಳಿಕ ಆಕೆಯನ್ನು ಪ್ರೀತಿಸುವುದಾಗಿ ಹೇಳಿ ತನ್ನೊಂದಿಗೆ ಹಾಪುರ್‌ಗೆ ಬರುವಂತೆ ಮನವೊಲಿಸಿ ಆಕೆಯೊಂದಿಗೆ ಹಾಪುರ್ ಗೆ ಪರಾರಿಯಾಗಿದ್ದ ಎಂದು ಹುಡುಗಿಯ ತಂದೆ ತಾಲಿಬ್ ಅಲಿ ಪೊಲೀಸರಿಗೆ ತಿಳಿಸಿದ್ದಾರೆ.

ಆರೋಪಿ ಆಶು ಹಾಪುರಕ್ಕೆ ಬಂದು ಠಾಣಾ ದೆಹತ್ ಪ್ರದೇಶದ ಮೊಹಲ್ಲಾ ಭೀಮನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಆರಂಭಿಸಿದ್ದ. ಮಾರ್ಚ್ 22 ರಂದು, ವಿವಾದದ ನಂತರ, ಅವನು ತನ್ನ ಮಗಳನ್ನು ಕತ್ತು ಹಿಸುಕಿ ಕೊಂದನು. ಪೊಲೀಸರಿಗೆ ವಂಚನೆ ಮಾಡಲು ಮಗಳ ಆತ್ಮಹತ್ಯೆ ಬಗ್ಗೆ ಮಾಹಿತಿ ನೀಡಿದ್ದರು.ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗಳು ಕತ್ತು ಹಿಸುಕಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಶನಿವಾರ ಸಂಜೆ ಆರೋಪಿ ಆಶುವನ್ನು ಬಂಧಿಸಲಾಗಿದೆ ಎಂದು ಠಾಣಾಧಿಕಾರಿ ಆಶಿಶ್ ಕುಮಾರ್ ತಿಳಿಸಿದ್ದಾರೆ.

ಅಸ್ಸಾಂನ ಸೋನಿಪುರ್ ಜಿಲ್ಲೆಯ ಥಾನಾ ರಂಗಪುರ ಪ್ರದೇಶದ ನಮೋನಿಗೌ ಗ್ರಾಮದ ನಿವಾಸಿ ತಾಲಿಬ್ ಅಲಿ ಅವರು ಕಳೆದ ಎಂಟು ವರ್ಷಗಳಿಂದ ಜಮ್ಮುವಿನಲ್ಲಿ ವಾಸಿಸುತ್ತಿದ್ದಾರೆ. ಮಾಹಿನೂರ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಆಶು ಆರಂಭದಲ್ಲಿ ಪೊಲೀಸರಿಗೆ ತಿಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

"ಹುಡುಗಿಯ ಶವಪರೀಕ್ಷೆಯ ಬಳಿಕ ಕತ್ತು ಹಿಸುಕಿದ ಕಾರಣದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಆದ್ದರಿಂದ, ನಾವು ಪ್ರಕರಣವನ್ನು ಕೊಲೆ ಎಂದು ತನಿಖೆ ಮಾಡಿದ್ದೇವೆ ಮತ್ತು ಆಶುವನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ಆಶು ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?