ನಮೀಬಿಯನ್ ಚೀತಾ ಓಬನ್ 
ದೇಶ

6 ಸಾವುಗಳ ನಡುವೆಯೇ ಕುನೋ ಅರಣ್ಯಕ್ಕೆ ಮತ್ತೆ 7 ನಮೀಬಿಯನ್ ಚೀತಾಗಳ ಬಿಡುಗಡೆ

6 ಚೀತಾಗಳ ಸಾವಿನ ಹೊರತಾಗಿಯೂ ಕುನೋ ಅರಣ್ಯಕ್ಕೆ ಮತ್ತೆ 7 ನಮೀಬಿಯನ್ ಚೀತಾಗಳ ಬಿಡುಗಡೆ ಮಾಡುವ ಕುರಿತು ಸಿದ್ಧತೆ ಆರಂಭವಾಗಿದೆ.

ಭೋಪಾಲ್: 6 ಚೀತಾಗಳ ಸಾವಿನ ಹೊರತಾಗಿಯೂ ಕುನೋ ಅರಣ್ಯಕ್ಕೆ ಮತ್ತೆ 7 ನಮೀಬಿಯನ್ ಚೀತಾಗಳ ಬಿಡುಗಡೆ ಮಾಡುವ ಕುರಿತು ಸಿದ್ಧತೆ ಆರಂಭವಾಗಿದೆ.

ಹೌದು.. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ಹೆಣ್ಣು ಸೇರಿದಂತೆ ಇನ್ನೂ ಏಳು ಚಿರತೆಗಳನ್ನು ಜೂನ್ ಮೂರನೇ ವಾರದೊಳಗೆ ಕಾಡಿಗೆ ಗುರುವಾರ ಬಿಡಲಾಗುವುದು ಎಂದು ಚೀತಾ ಮರುಪರಿಚಯ ಯೋಜನೆಯ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ರಚಿಸಲಾದ ಉನ್ನತ ಮಟ್ಟದ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.

ಇತ್ತೀಚೆಗೆ ಸ್ಥಾಪಿಸಲಾದ 11 ಸದಸ್ಯರ ಚೀತಾ ಪ್ರಾಜೆಕ್ಟ್ ಸ್ಟೀರಿಂಗ್ ಸಮಿತಿಯು ಕುನೋದಲ್ಲಿ ಗುರುವಾರ ಮೊದಲ ಬಾರಿಗೆ ಸಭೆ ಸೇರಿತ್ತು.

ಮಹತ್ವಾಕಾಂಕ್ಷೆಯ ಕಾರ್ಯಕ್ರಮದ ಅಡಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶದ ಕುನೊದಲ್ಲಿ ಕ್ವಾರಂಟೈನ್ ಆವರಣಕ್ಕೆ ನಮೀಬಿಯಾದಿಂದ ಎಂಟು ಚೀತಾಗಳ ಮೊದಲ ಬ್ಯಾಚ್ ಅನ್ನು ಬಿಡುಗಡೆ ಮಾಡಿದ್ದರು. 2ನೇ ಸ್ಥಳಾಂತರದಲ್ಲಿ, 12 ಚೀತಾಗಳನ್ನು ದಕ್ಷಿಣ ಆಫ್ರಿಕಾದಿಂದ ತಂದು ಫೆಬ್ರವರಿ 18 ರಂದು ಕುನೊ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಬಿಡಲಾಯಿತು. ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಮೂರು ಚೀತಾ ಅನಾರೋಗ್ಯ ಕಾರಣದಿಂದ ಸಾವನ್ನಪ್ಪಿದ್ದವು. ಉಳಿದಿರುವ 17 ವಯಸ್ಕ ಚೀತಾಗಳ ಪೈಕಿ ಏಳು ಚೀತಾಗಳನ್ನು ಈಗಾಗಲೇ ಕಾಡಿಗೆ ಬಿಡಲಾಗಿದೆ.

"ಯೋಜನೆಯು ಜಾರಿಯಲ್ಲಿದೆ ಮತ್ತು ಆತಂಕಕ್ಕೆ ಯಾವುದೇ ಕಾರಣವಿಲ್ಲ. ಜೂನ್ ಮೂರನೇ ವಾರದೊಳಗೆ ಎರಡು ಹೆಣ್ಣು ಚೀತಾ ಸೇರಿದಂತೆ ಇನ್ನೂ ಏಳು ಚೀತಾಗಳನ್ನು ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ" ಎಂದು ಸಮಿತಿಯ ಅಧ್ಯಕ್ಷ ಮತ್ತು ಗ್ಲೋಬಲ್ ಟೈಗರ್ ಫೋರಂನ ಪ್ರಧಾನ ಕಾರ್ಯದರ್ಶಿ ರಾಜೇಶ್ ಗೋಪಾಲ್ ಹೇಳಿದ್ದಾರೆ.

"ಇನ್ನೂ ಶಿಬಿರಗಳಲ್ಲಿರುವ 10 ಚೀತಾಗಳಲ್ಲಿ ಏಳು ಚೀತಾಗಳನ್ನು ಬಿಡುಗಡೆ ಮಾಡಲಾಗುವುದು. ಉಳಿದ ಮೂರು ಚೀತಾಗಳು ಕ್ವಾರಂಟೈನ್ ನಲ್ಲಿವೆ ಮತ್ತು ಅವುಗಳನ್ನು ರಿವೈಲ್ಡ್ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ" ಎಂದು ಅವರು ಹೇಳಿದರು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಮೇ 8 ರಂದು ಮುಂಗಾರು ಪ್ರಾರಂಭವಾಗುವ ಮೊದಲು ಇನ್ನೂ ಐದು ಚೀತಾಗಳನ್ನು (ಈಗಾಗಲೇ ಕಾಡಿನಲ್ಲಿರುವ ಮೂರು ಚಿರತೆಗಳನ್ನು ಹೊರತುಪಡಿಸಿ) ಬಿಡುಗಡೆ ಮಾಡಲು ನಿರ್ಧರಿಸಿತ್ತು. ಮಾನ್ಸೂನ್ ಅವಧಿಯಲ್ಲಿ ಪ್ರಾಣಿಗಳನ್ನು ಸಾಮಾನ್ಯವಾಗಿ ಕಾಡಿಗೆ ಬಿಡಲಾಗುವುದಿಲ್ಲ. ಏಕೆಂದರೆ ಕಠಿಣ ಹವಾಮಾನ ಪರಿಸ್ಥಿತಿಗಳು ಆಹಾರ ಮತ್ತು ಆಶ್ರಯವನ್ನು ಹುಡುಕಲು ಮತ್ತು ಅವುಗಳ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT