ಸಂಗ್ರಹ ಚಿತ್ರ 
ದೇಶ

ಪ್ರಾಜೆಕ್ಟ್ ಸ್ಟಿಂಗ್: ಭಾರತ-ಬಾಂಗ್ಲಾ ಗಡಿಯಲ್ಲಿ 'ಅಪರಾಧಗಳ ನಿಯಂತ್ರಣಕ್ಕೆ' ಜೇನುನೊಣಗಳನ್ನು ನಿಯೋಜಿಸಿದ BSF!

ಪಶ್ಚಿಮ ಬಂಗಾಳದಲ್ಲಿನ ಭಾರತ-ಬಾಂಗ್ಲಾದೇಶ ಗಡಿಯನ್ನು ಜೇನುಗೂಡುಗಳನ್ನು ಸ್ಥಾಪಿಸುವ ವಿಶಿಷ್ಟ ಪ್ರಯೋಗವನ್ನು ಗಡಿ ಭದ್ರತಾ ಪಡೆ (BSF) ಕೈಗೊಂಡಿದ್ದು, ಜೀವನೋಪಾಯಕ್ಕಾಗಿ ಸ್ಥಳೀಯರು ದನಗಳ ಕಳ್ಳಸಾಗಣೆ ಮತ್ತು ಇತರ ಅಪರಾಧಗಳಿಗೆ ಬೇಲಿಯನ್ನು...

ನವದೆಹಲಿ/ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿನ ಭಾರತ-ಬಾಂಗ್ಲಾದೇಶ ಗಡಿಯನ್ನು ಜೇನುಗೂಡುಗಳನ್ನು ಸ್ಥಾಪಿಸುವ ವಿಶಿಷ್ಟ ಪ್ರಯೋಗವನ್ನು ಗಡಿ ಭದ್ರತಾ ಪಡೆ (BSF) ಕೈಗೊಂಡಿದ್ದು, ಜೀವನೋಪಾಯಕ್ಕಾಗಿ ಸ್ಥಳೀಯರು ದನಗಳ ಕಳ್ಳಸಾಗಣೆ ಮತ್ತು ಇತರ ಅಪರಾಧಗಳಿಗೆ ಬೇಲಿಯನ್ನು ಕತ್ತರಿಸುವ ನಿದರ್ಶನಗಳನ್ನು ಇದರಿಂದ ತಡೆಯಬಹುದು.

ಗಡಿ ಭದ್ರತೆಯನ್ನು ಖಾತ್ರಿಪಡಿಸುವ ಮತ್ತು ಜೇನುಸಾಕಣೆಯ ಮೂಲಕ ಸ್ಥಳೀಯ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ನಾಡಿಯಾ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಬಿಎಸ್‌ಎಫ್‌ನ 32ನೇ ಬೆಟಾಲಿಯನ್ ಇತ್ತೀಚೆಗೆ ಮೊದಲ ಬಾರಿಗೆ ಈ ರೀತಿಯ ಉಪಕ್ರಮವನ್ನು ಪ್ರಾರಂಭಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶವು ಸರಿಸುಮಾರು 4,096-ಕಿಮೀ ಗಡಿಯನ್ನು ಹಂಚಿಕೊಂಡಿದ್ದರೆ ಅದರಲ್ಲಿ ಪಶ್ಚಿಮ ಬಂಗಾಳವು ಸುಮಾರು 2,217 ಕಿ.ಮೀ. ಗಡಿ ಹೊಂದಿದೆ. ಈ ಯೋಜನೆಗಾಗಿ ಬಿಎಸ್‌ಎಫ್ ಅನ್ನು ಆಯುಷ್ ಸಚಿವಾಲಯ ನಿಯೋಜಿಸಿದೆ.

ಸಚಿವಾಲಯವು ಜೇನುಗೂಡುಗಳನ್ನು ಗಡಿ-ಕಾವಲು ಪಡೆಗೆ ಒದಗಿಸಿದೆ. ಮಿಶ್ರಲೋಹದಿಂದ ತಯಾರಿಸಿದ 'ಸ್ಮಾರ್ಟ್ ಬೇಲಿ'ಯಲ್ಲಿ ಅವುಗಳನ್ನು ಅಳವಡಿಸುವ ಪರಿಣತಿಯನ್ನು ನೀಡಿದೆ. ಈ ಕಲ್ಪನೆಯನ್ನು ರೂಪಿಸಿದ 32ನೇ ಬಿಎಸ್‌ಎಫ್ ಬೆಟಾಲಿಯನ್ ಕಮಾಂಡೆಂಟ್ ಸುಜೀತ್ ಕುಮಾರ್, ಪಿಟಿಐಗೆ ಈ ಪಡೆ ಕೇಂದ್ರದ 'ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ' (ವಿವಿಪಿ) ಅಡಿಯಲ್ಲಿ ಉಪಕ್ರಮವನ್ನು ಕೈಗೊಂಡಿದೆ. ಆಯುಷ್ ಸಚಿವಾಲಯಕ್ಕೆ ಔಷಧೀಯ ಸಸ್ಯಗಳನ್ನು ಒದಗಿಸುವಂತೆ ವಿನಂತಿಸುವ ಮೂಲಕ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಹೇಳಿದರು. ಇದು ಹೂವುಗಳನ್ನು ಹೊಂದುತ್ತದೆ. ಈ ಜೇನು ಪೆಟ್ಟಿಗೆಗಳ ಸುತ್ತಲೂ ನೆಡಬಹುದು ಇದರಿಂದ ಜೇನುನೊಣಗಳು ಹೇರಳವಾಗಿ ಪರಾಗಸ್ಪರ್ಶ ಮಾಡಬಹುದು.

ಭಾರತ-ಬಾಂಗ್ಲಾದೇಶ ಗಡಿ ಬೇಲಿಗೆ ಜೇನುಗೂಡುಗಳನ್ನು ಕಟ್ಟುವ ಕಲ್ಪನೆಯನ್ನು ನವೆಂಬರ್ 2ರಂದು ಪ್ರಾರಂಭಿಸಲಾಯಿತು. ಜೇನುನೊಣಗಳ ಪೆಟ್ಟಿಗೆಗಳು ಜೇನುನೊಣ ಕೃಷಿಯಲ್ಲಿ ತೊಡಗಿರುವ ಸ್ಥಳೀಯರಿಗೆ ಲಭ್ಯವಾಗುವಂತೆ ಬಿಎಸ್ಎಫ್ ಮಾಡಿದೆ. ಇನ್ನು ಇದಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ದಕ್ಷಿಣ ಬಂಗಾಳದ ಗಡಿಭಾಗದ ಗಡಿ ಪ್ರದೇಶಗಳು ದನ, ಚಿನ್ನ, ಬೆಳ್ಳಿ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಯಂತಹ ಗಡಿಯಾಚೆಗಿನ ಅಪರಾಧಗಳಿಗೆ ಗುರಿಯಾಗುತ್ತವೆ. ಈ ಹಿಂದೆ ದುಷ್ಕರ್ಮಿಗಳು ಮತ್ತು ಕಳ್ಳಸಾಗಾಣಿಕೆಗೆ ಗಡಿ ಬೇಲಿಗಳನ್ನು ಕತ್ತರಿಸಿದ ನಿದರ್ಶನಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT