ಚಿದಂಬರಂ 
ದೇಶ

ಕಚ್ಚತೀವು ದ್ವೀಪ ವಿಚಾರಕ್ಕಿಂತ ಚೀನಾ ಆಕ್ರಮಣದ ಬಗ್ಗೆ ಮಾತನಾಡಿ: ಪ್ರಧಾನಿ ಮೋದಿಗೆ ಚಿದಂಬರಂ ತಾಕೀತು

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಲು ಮತ್ತು ಲಕ್ಷಾಂತರ ತಮಿಳು ಜನರ ಜೀವ ಉಳಿಸಲು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ಬಗ್ಗೆ ಮಾತನಾಡುವ ಬದಲು ಭಾರತದ ಭೂಪ್ರದೇಶ ಆಕ್ರಮಿಸಿಕೊಂಡಿರುವ ಚೀನಾದ ಬಗ್ಗೆ ಮಾತನಾಡಬೇಕು ಎಂದು ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೋಮವಾರ ತಾಕೀತು ಮಾಡಿದ್ದಾರೆ

ಶಿವಗಂಗಾ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಲು ಮತ್ತು ಲಕ್ಷಾಂತರ ತಮಿಳು ಜನರ ಜೀವ ಉಳಿಸಲು ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ಬಗ್ಗೆ ಮಾತನಾಡುವ ಬದಲು ಭಾರತದ ಭೂಪ್ರದೇಶ ಆಕ್ರಮಿಸಿಕೊಂಡಿರುವ ಚೀನಾದ ಬಗ್ಗೆ ಮಾತನಾಡಬೇಕು ಎಂದು ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೋಮವಾರ ತಾಕೀತು ಮಾಡಿದ್ದಾರೆ. 1974 ರಲ್ಲಿಯೇ ಇತ್ಯರ್ಥಗೊಂಡ ವಿವಾದವನ್ನು ಪ್ರಧಾನಿ ಏಕೆ ಪ್ರಸ್ತಾಪಿಸುತ್ತಿದ್ದಾರೆ ಎಂದು ಮಾಜಿ ಕೇಂದ್ರ ಗೃಹ ಸಚಿವ ಚಿದಂಬರಂ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆ ವರ್ಷ ಇಂದಿರಾ ಗಾಂಧಿ ಸರ್ಕಾರವು ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಅಲ್ಲಿನ ಲಕ್ಷಾಂತರ ತಮಿಳರಿಗೆ ಸಹಾಯ ಮಾಡಲು ದ್ವೀಪ ರಾಷ್ಟ್ರದ ಸರ್ಕಾರದೊಂದಿಗೆ ಮಾತುಕತೆ ನಡೆಸಿತು. ಮಾತುಕತೆಗಳ ನಂತರ, ಸುಮಾರು 1.9 ಚದರ ಕಿ.ಮೀ ವಿಸ್ತೀರ್ಣದ ಅತ್ಯಂತ ಚಿಕ್ಕ ದ್ವೀಪವಾದ ಕಚ್ಚತೀವುನಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು ಮತ್ತು ಕಚ್ಚತೀವು ಶ್ರೀಲಂಕಾಕ್ಕೆ ಸೇರಿದೆ ಎಂದು ಭಾರತ ಒಪ್ಪಿಕೊಂಡಿತು ಎಂದು ಅವರು ಹೇಳಿದರು. ಪ್ರತಿಯಾಗಿ, ಆರು ಲಕ್ಷ ತಮಿಳರು ಭಾರತಕ್ಕೆ ಬರಲು ಅವಕಾಶ ನೀಡಿದರು. "ಅವರು ಇಲ್ಲಿಗೆ ಬಂದಿದ್ದಾರೆ, ಅವರ ಕುಟುಂಬಗಳು ಇಲ್ಲಿದ್ದಾರೆ, ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ, ಅವರು ಮುಕ್ತ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಇಲ್ಲಿದ್ದಾರೆ. ಸಮಸ್ಯೆಯನ್ನು 50 ವರ್ಷಗಳ ಹಿಂದೆಯೇ ಇತ್ಯರ್ಥಪಡಿಸಲಾಯಿತು ಎಂದು ಅವರು ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ವಿಶೇಷ ಸಂದರ್ಶನದಲ್ಲಿ ಚಿದಂಬರಂ, ಇತ್ತೀಚಿನ ವಿಷಯಗಳ ಬಗ್ಗೆ ಮಾತನಾಡುವ ಬದಲು ಪ್ರಧಾನಿ ಮೋದಿ ಈಗ ಏಕೆ ಆ ವಿಷಯವನ್ನು ಎತ್ತುತ್ತಿದ್ದಾರೆ. 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಾದ ಸೈನಿಕರು ಆಕ್ರಮಿಸಿಕೊಂಡಿರುವುದು ಸತ್ಯ. ಲಡಾಖ್ ಸಂಸದ (ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್) ಇದನ್ನು ಸೂಚಿಸಿದ್ದಾರೆ ಮತ್ತು ಭಾರತವು ಚೀನಾವನ್ನು 21 ಚರ್ಚೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲಾಗುತ್ತದೆ. ಆದರೂ, ಭಾರತದ ಭೂಪ್ರದೇಶದಲ್ಲಿ ಯಾವುದೇ ಚೀನೀ ಸೈನಿಕರು ಇಲ್ಲ ಮತ್ತು ಭಾರತದ ಭೂಪ್ರದೇಶದ ಯಾವುದೇ ಭಾಗಗಳು ಚೀನಾದ ಸೈನಿಕರ ವಶದಲ್ಲಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಹೀಗೆ ಎಲ್ಲಾ ಪಕ್ಷಗಳು, ಮುಖ್ಯಮಂತ್ರಿಗಳಿಗೆ ಸಾರ್ವಜನಿಕವಾಗಿ ಮೋದಿ ಹೇಳಿದ್ದು, ಚೀನಾಕ್ಕೆ ಕ್ಲೀನ್ ಚೀಟ್ ನೀಡಿದ್ದಾರೆ.

ಚೀನಾದ ಮಾಧ್ಯಮಗಳು ಕೂಡಾ "ಭಾರತದ ಪ್ರಧಾನಿ ಕ್ಲೀನ್ ಚಿಟ್ ನೀಡಿದ್ದಾರೆ" ಎಂದು ವರದಿ ಮಾಡಿವೆ ಎಂದು ತಿಳಿಸಿದರು.

ಪ್ರಧಾನಿ ಮೋದಿ ಅವರು ಸುಮಾರು 50 ವರ್ಷಗಳ ಹಿಂದೆ ನಡೆದ ಸಂಗತಿಯ ಬಗ್ಗೆ ಮಾತನಾಡುವ ಬದಲು ಕಳೆದ 2-3 ವರ್ಷಗಳಲ್ಲಿ ಏನಾಯಿತು ಎಂಬುದರ ಬಗ್ಗೆ ಮಾತನಾಡಬೇಕು. 1974 ರ ಆ ಒಪ್ಪಂದವು ಪರಸ್ಪರ ಮಾತುಕತೆಗಳನ್ನು ಆಧರಿಸಿದೆ ಮತ್ತು ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಮತ್ತು ಲಕ್ಷಗಟ್ಟಲೆ ತಮಿಳರ ಜೀವಗಳನ್ನು ಉಳಿಸಲು ಆದ ಒಪ್ಪಂದವಾಗಿದೆ. ಆದರೆ, ಚೀನಾದ ಆಕ್ರಮಣವು ಆಕ್ರಮಣಕಾರಿಯಾಗಿದೆ. ಚೀನಾ ನಮ್ಮ ಪ್ರದೇಶವನ್ನು ಬಲವಂತವಾಗಿ ಆಕ್ರಮಿಸಿಕೊಂಡಿದೆ ಮತ್ತು ಅದರ ಬಗ್ಗೆ ಪ್ರಧಾನಿ ಮಾತನಾಡಬೇಕು ಎಂದು ಮನವಿ ಮಾಡುವುದಾಗಿ ಚಿದಂಬರಂ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT