ಸಂಗ್ರಹ ಚಿತ್ರ PTI
ದೇಶ

ನೀರಿನ ಬಿಕ್ಕಟ್ಟು, ನಗರದಲ್ಲಿ ದಾಖಲೆಯ ತಾಪಮಾನ: ಬೆಂಗಳೂರಿನ ನಿವಾಸಿಗಳಿಗೆ ತಪ್ಪದ ಬವಣೆ!

ನಗರದಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದ್ದು, ಈ ನಡುವೆ ತಾಪಮಾನ ಏರುಗತಿಯಲ್ಲಿದೆ. ಬಿಸಿಲಿನಿಂದ ಕಂಗೆಟ್ಟಿರುವ ಜನತೆ, ತಮ್ಮ ದಿನಚರಿಯನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.

ನವದೆಹಲಿ: ನಗರದಲ್ಲಿ ನೀರಿನ ಬಿಕ್ಕಟ್ಟು ಎದುರಾಗಿದ್ದು, ಈ ನಡುವೆ ತಾಪಮಾನ ಏರುಗತಿಯಲ್ಲಿದೆ. ಬಿಸಿಲಿನಿಂದ ಕಂಗೆಟ್ಟಿರುವ ಜನತೆ, ತಮ್ಮ ದಿನಚರಿಯನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ್ದರೆ, 2016 ರ ಏಪ್ರಿಲ್ ನಲ್ಲಿ ದಾಖಲಾಗಿದ್ದ ಗರಿಷ್ಠ ತಾಪಮಾನ 39.2 ಡಿಗ್ರಿ ಸೆಲ್ಸಿಯಸ್ ಸನಿಹಕ್ಕೆ ಬರುತ್ತಿದೆ.

ಪ್ರಸ್ತುತ ತಾಪಮಾನವು ಬೆಂಗಳೂರು ಏಪ್ರಿಲ್‌ನಲ್ಲಿರುತ್ತಿದ್ದ ವಾಡಿಕೆಯ ತಾಪಮಾನಕ್ಕಿಂತ ಕನಿಷ್ಠ ಮೂರು ಡಿಗ್ರಿಗಳಷ್ಟು ಹೆಚ್ಚಾಗಿದೆ. ಈ ರೀತಿಯ ತಾಪಮಾನ ಹೆಚ್ಚಳಕ್ಕೆ ಕಾರಣವನ್ನು ವಿಶ್ಲೇಷಿಸಿರುವ ವಿಜ್ಞಾನಿ ಡಾ ಎನ್ ಪುವಿಯರಸನ್, ಕಳೆದ ವರ್ಷ ಈಶಾನ್ಯ ಮಾನ್ಸೂನ್‌ನಿಂದ ಬೆಂಗಳೂರಿನಲ್ಲಿ ಕಡಿಮೆ ಮಳೆಯಾಗಿದೆ, ಮುಖ್ಯವಾಗಿ ಹವಾಮಾನ ಬದಲಾವಣೆ ಮತ್ತು ಎಲ್ ನಿನೊ ಪರಿಸ್ಥಿತಿಗಳಿಂದಾಗಿ ಬೆಂಗಳೂರಿನಲ್ಲಿ ಚಳಿಗಾಲದಲ್ಲಿಯೂ ಮಳೆಯಾಗಲಿಲ್ಲ ಪರಿಣಾಮ ತಾಪಮಾನ ವಾಡಿಕೆಗಿಂತಲೂ ತೀವ್ರಗೊಂಡಿದೆ ಎಂದು ಹೇಳಿದ್ದಾರೆ.

ಭಾರತದ ಹವಾಮಾನ ಇಲಾಖೆಯೊಂದಿಗೆ ಕೆಲಸ ಮಾಡುತ್ತಿರುವ ಡಾ ಪುವಿಯರಸನ್, ನಗರದಲ್ಲಿನ ಹೆಚ್ಚಿನ ತಾಪಮಾನಕ್ಕೆ ತ್ವರಿತ ನಗರೀಕರಣವು ಹೇಗೆ ಸಂಬಂಧಿಸಿದೆ ಎಂಬುದನ್ನು ಸಹ ವಿಶ್ಲೇಷಿಸಿದ್ದಾರೆ.

ಏತನ್ಮಧ್ಯೆ, ನಿವಾಸಿಗಳು ಬಿಸಿಲಿನಿಂದ ಪಾರಾಗಲು ತಮ್ಮ ದಿನಚರಿಯನ್ನು ಬದಲಾಯಿಸಲು ಒತ್ತಾಯಿಸಿದ್ದಾರೆ. "ನನ್ನ ಸಂಪೂರ್ಣ ದಿನಚರಿಯನ್ನು ಬದಲಾಯಿಸಿದೆ. ನಾನು ಊಟದ ನಂತರ ವಾಕಿಂಗ್‌ಗೆ ಹೋಗುತ್ತಿದ್ದೆ. ಈಗ ಅದು ತುಂಬಾ ಭಯಾನಕವಾಗಿದೆ, ನಾನು ಕಚೇರಿಯಿಂದ ಹೊರಬರಲು ಸಹ ಸಾಧ್ಯವಿಲ್ಲ. ಎಸಿಯಲ್ಲಿ ಕುಳಿತುಕೊಳ್ಳುವುದು ಒಂದೇ ಆಯ್ಕೆ" ಎಂದು ನಿವಾಸಿಯೊಬ್ಬರು ಹೇಳಿದ್ದಾರೆ. "10 ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಾಗ, ಇಲ್ಲಿನ ವಾತಾವರಣ ಸಂಪೂರ್ಣವಾಗಿ ವಿಭಿನ್ನವಾದ ಕಥೆಯಾಗಿತ್ತು. ನಾವು ಈ ರೀತಿಯ ಹವಾಮಾನವನ್ನು ಎಂದಿಗೂ ಎದುರಿಸಲಿಲ್ಲ ಎಂದು ಹೇಳಿದ್ದಾರೆ.

ನಗರದಲ್ಲಿ ನಿನ್ನೆ ರಾತ್ರಿಯ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಇದು ದೆಹಲಿ ಮತ್ತು ಗುರುಗ್ರಾಮ್‌ಗಿಂತ ಹೆಚ್ಚಾಗಿದೆ. ಐಟಿ ಹಬ್ ಈಗ ಬೇಸಿಗೆಯ ಮಳೆಯ ನಿರೀಕ್ಷೆಯಲ್ಲಿದೆ, ಸುಮಾರು ಏಪ್ರಿಲ್ 14 ರಂದು ನಿರೀಕ್ಷಿಸಲಾಗಿದ್ದು ಬಿಸಿಲಿನ ಶಾಖಕ್ಕೆ ಸ್ವಲ್ಪವಾದರೂ ಪರಿಹಾರ ನೀಡುತ್ತದೆ ಎಂಬ ಭರವಸೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT