ಮಧ್ಯ ಪ್ರದೇಶ ಸಿಎಂ ಡಾ ಮೋಹನ್ ಯಾದವ್  
ದೇಶ

ಐಟಿ ಕ್ಷೇತ್ರ, ಬೃಹತ್ ಉದ್ಯಮಿಗಳು ಮಧ್ಯ ಪ್ರದೇಶದಲ್ಲಿ ಹೂಡಿಕೆ ಮಾಡಿ: ಸಿಎಂ ಮೋಹನ್ ಯಾದವ್ ಆಹ್ವಾನ

ಬೆಂಗಳೂರಿಗೆ ಬಂದಿಳಿದ ಮೋಹನ್ ಯಾದವ್ ಎಚ್‌ಎಎಲ್ ಕ್ಯಾಂಪಸ್‌ಗೆ ಭೇಟಿ ನೀಡಿದರು. ರಕ್ಷಣಾ ಪಿಎಸ್‌ಯು ಮಧ್ಯ ಪ್ರದೇಶದಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಆಸಕ್ತಿಯನ್ನು ತೋರಿಸಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು: ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲು ಮತ್ತು ರಾಜ್ಯದಲ್ಲಿ ಹೂಡಿಕೆಯ ಅವಕಾಶಗಳನ್ನು ಹೆಚ್ಚಿಸಲು ಮಧ್ಯ ಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ತಮ್ಮ ನಿಯೋಗದೊಂದಿಗೆ ಬೆಂಗಳೂರಿಗೆ ಆಗಮಿಸಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದಾತ್ಮಕ ಅಧಿವೇಶನದಲ್ಲಿ ಭಾಗವಹಿಸಿದರು. ರೋಡ್ ಟು ಗ್ಲೋಬಲ್ ಇನ್ವೆಸ್ಟರ್ಸ್ ಸಮ್ಮಿಟ್ (GIS)' ಸರಣಿಯಲ್ಲಿ ಭಾಗವಹಿಸಿದ್ದರು.

ಬೆಂಗಳೂರಿಗೆ ಬಂದಿಳಿದ ಮೋಹನ್ ಯಾದವ್ ಎಚ್‌ಎಎಲ್ ಕ್ಯಾಂಪಸ್‌ಗೆ ಭೇಟಿ ನೀಡಿದರು. ರಕ್ಷಣಾ ಪಿಎಸ್‌ಯು ಮಧ್ಯ ಪ್ರದೇಶದಲ್ಲಿ ತನ್ನ ಘಟಕವನ್ನು ಸ್ಥಾಪಿಸಲು ಆಸಕ್ತಿಯನ್ನು ತೋರಿಸಿದೆ ಎಂದು ಹೇಳಲಾಗುತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಗೆ ಒತ್ತು ನೀಡಲು ಸಿಎಂ ಉತ್ಸುಕರಾಗಿದ್ದಾರೆ ಮತ್ತು ಐಟಿ ಅದರ ಪ್ರಮುಖ ಆದ್ಯತೆಯಾಗಿದೆ. ಮೊದಲ ಬಾರಿಗೆ, ಮಧ್ಯ ಪ್ರದೇಶ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೂಡಿಕೆಗಳನ್ನು ಹುಡುಕುತ್ತಿದೆ. ಈ ಎರಡೂ ಸ್ಥಾಪಿತ ಕ್ಷೇತ್ರಗಳಿಗೆ ಬೆಂಗಳೂರು ಸೂಕ್ತ ಸ್ಥಳವಾಗಿದೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಯಾದವ್, ಐಟಿ ವಲಯದಲ್ಲಿ ಹೂಡಿಕೆ ಅವಕಾಶಗಳನ್ನು ಹುಡುಕಲು ಬೆಂಗಳೂರಿಗಿಂತ ಉತ್ತಮವಾದ ಸ್ಥಳವಿಲ್ಲ ಎಂದು ಹೇಳಿದರು. ನಾವು ಮಧ್ಯ ಪ್ರದೇಶದಲ್ಲಿ ವ್ಯವಹಾರಗಳನ್ನು ಸ್ಥಾಪಿಸಲು ಆಹ್ವಾನದೊಂದಿಗೆ ಐಟಿ ಉದ್ಯಮಿಗಳು ಮತ್ತು ವಿವಿಧ ಉದ್ಯಮಗಳ ವ್ಯಾಪಾರ ಮುಖ್ಯಸ್ಥರನ್ನು ಭೇಟಿ ಮಾಡಲು ಮುಕ್ತವಾದ ಮನಸ್ಥಿತಿಯಿಂದ ಇಲ್ಲಿಗೆ ಬಂದಿದ್ದೇವೆ. ನಮ್ಮ ಉದ್ದೇಶ ಕರ್ನಾಟಕದಿಂದ ಹೂಡಿಕೆಗಳನ್ನು ಕಸಿದುಕೊಳ್ಳುವುದಲ್ಲ, ಆದರೆ ಅವರನ್ನು ಆಹ್ವಾನಿಸುವುದು. ನಾವು ವ್ಯಾಪಾರ-ಸ್ನೇಹಿ ಉದ್ಯಮ ನೀತಿಯನ್ನು ಹೊಂದಿದ್ದೇವೆ. ನಮ್ಮ 2023 ರ ಐಟಿ ನೀತಿಯು ದೇಶದಲ್ಲೇ ಅತ್ಯುತ್ತಮವಾಗಿದೆ ಎಂದು ಹೇಳಿದರು.

ಮಧ್ಯ ಪ್ರದೇಶದಲ್ಲಿ ಹೂಡಿಕೆ ಮಾಡುವ ದೊಡ್ಡ ಅನುಕೂಲವೆಂದರೆ ಸ್ಪರ್ಧಾತ್ಮಕ ಜೀವನ ವೆಚ್ಚ. ಕೈಗಾರಿಕೆಗಳು ತಮ್ಮ ವ್ಯವಹಾರವನ್ನು ಬೆಂಗಳೂರಿಗಿಂತ ಹೆಚ್ಚು ಸ್ಪರ್ಧಾತ್ಮಕ ವೆಚ್ಚದಲ್ಲಿ ಮಾಡಬಹುದು. ಇದು ಅವರಿಗೆ ಮತ್ತು ಅವರ ಉದ್ಯೋಗಿಗಳಿಗೆ ಗೆಲುವು ನೀಡುತ್ತದೆ ಎಂದರು.

ನಾನು ಇಂದು ಬೆಂಗಳೂರಿಗೆ ಆಗಮಿಸುವ ಕೆಲವು ದಿನಗಳ ಮೊದಲು ಕೈಗಾರಿಕೆಗಳ ವೀಕ್ಷಣೆಗೆ ತಂಡವನ್ನು ಕಳುಹಿಸಿದ್ದೆ. ನಮಗೆ ಕರ್ನಾಟಕ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಅಧಿವೇಶನದಲ್ಲಿ, ಆ ಆಸಕ್ತಿಗಳನ್ನು ಬದ್ಧತೆಗಳಾಗಿ ಪರಿವರ್ತಿಸಲು ನಾವು ಆಶಿಸುತ್ತೇವೆ. ಆಗಸ್ಟ್ 28 ರಂದು ಗ್ವಾಲಿಯರ್‌ನಲ್ಲಿ ನಡೆಯುವ ಪ್ರಾದೇಶಿಕ ಸಮಾವೇಶಕ್ಕೆ ಮಧ್ಯ ಪ್ರದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿರುವ ಎಲ್ಲರನ್ನು ಆಹ್ವಾನಿಸುತ್ತಿದ್ದೇವೆ ಎಂದರು.

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ 'ಇನ್ವೆಸ್ಟ್ ಮಧ್ಯಪ್ರದೇಶ-ಜಾಗತಿಕ ಹೂಡಿಕೆದಾರರ ಶೃಂಗಸಭೆ 2025' ಗಾಗಿ ತಯಾರಿ ನಡೆಸುತ್ತಿದೆ. ಯಾದವ್ ಅವರು 2025ನ್ನು ಕೈಗಾರಿಕಾ ವರ್ಷವೆಂದು ಘೋಷಿಸಿದ್ದಾರೆ. ಬೆಂಗಳೂರಿಗೂ ಮುನ್ನ ಅವರು ಮುಂಬೈ ಮತ್ತು ಕೊಯಮತ್ತೂರ್‌ಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT