ಪ್ರಧಾನಿ ಮೋದಿ 
ದೇಶ

2029ರಲ್ಲೂ ಮತ್ತೆ ಬರುತ್ತೇನೆ: 'ಪ್ರಧಾನಿ' ನರೇಂದ್ರ ಮೋದಿ ವಿಶ್ವಾಸ

ದೆಹಲಿಯಲ್ಲಿ ನಡೆದ 5ನೇ Global Fintech Festನಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಸಂಸ್ಥೆಯ 10ನೇ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ ಕಾರ್ಯಕ್ರಮಕ್ಕೂ ತಾವು ಬರುತ್ತೇವೆ ಎಂದು ಫಿನ್‌ಟೆಕ್ ಉದ್ಯಮದ ನಾಯಕರ ಸಭೆಗೆ ತಿಳಿಸಿದರು.

ನವದೆಹಲಿ: 2029ರಲ್ಲಿ ದಾಖಲೆಯ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಮರಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ BJP ಪಕ್ಷವು ಬಹುಮತ ಗಳಿಸದಿರುವುದರಿಂದ ನರೇಂದ್ರ ಮೋದಿ ಅವರ ಪ್ರಾಬಲ್ಯ ಕುಂದುತ್ತಿದೆ ಎಂಬ ಚರ್ಚೆಗಳ ನಡುವೆಯೇ ಪ್ರಧಾನಿ ಮೋದಿ ತಾವು ಮತ್ತೆ 2029ರಲ್ಲಿ ಸತತ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿ ಬರುತ್ತೇನೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ 5ನೇ Global Fintech Festನಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಸಂಸ್ಥೆಯ 10ನೇ ಗ್ಲೋಬಲ್ ಫಿನ್ ಟೆಕ್ ಫೆಸ್ಟ್ ಕಾರ್ಯಕ್ರಮಕ್ಕೂ ತಾವು ಬರುತ್ತೇವೆ ಎಂದು ಫಿನ್‌ಟೆಕ್ ಉದ್ಯಮದ ನಾಯಕರ ಸಭೆಗೆ ತಿಳಿಸಿದರು.

"ಇದು ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನ 5 ನೇ ಆವೃತ್ತಿಯಾಗಿದೆ. ನಾನು 10 ನೇ ಆವೃತ್ತಿಯಲ್ಲಿಯೂ ಬರುತ್ತೇನೆ. ಭಾರತದ ಫಿನ್‌ಟೆಕ್ ಪರಿಸರ ವ್ಯವಸ್ಥೆಯು ಇಡೀ ಪ್ರಪಂಚದ ಜೀವನವನ್ನು ಸುಗಮಗೊಳಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ನಮ್ಮ ಅತ್ಯುತ್ತಮವಾದವು ಇನ್ನೂ ಬರಬೇಕಿದೆ... ನಾನು ಇಲ್ಲಿ ಕೆಲವು ಸ್ಟಾರ್ಟ್‌ಅಪ್‌ಗಳನ್ನು ಭೇಟಿ ಮಾಡಿದ್ದೇನೆ ಮತ್ತು ಫಿನ್‌ಟೆಕ್ ಅತ್ಯಂತ ಭರವಸೆಯ ಕ್ಷೇತ್ರವಾಗಿರುವುದರಿಂದ ಅವರಿಗೆ 10 ಕಾರ್ಯಗಳನ್ನು ವಹಿಸಿದ್ದೇನೆ ಎಂದು ಮೋದಿ ಹೇಳಿದರು.

ಅಂತೆಯೇ ಭಾರತದ ಫಿನ್‌ಟೆಕ್ ಆವಿಷ್ಕಾರವನ್ನು ಶ್ಲಾಘಿಸಿದ ಮೋದಿ, 'ಈ ಹಿಂದೆ ಭಾರತಕ್ಕೆ ಭೇಟಿ ನೀಡುವ ವಿದೇಶಿ ಅತಿಥಿಗಳು ಇಲ್ಲಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಂಡು ಬೆರಗಾಗುತ್ತಿದ್ದರು. ಈಗ ಅವರು ನಮ್ಮ ಫಿನ್‌ಟೆಕ್ ವೈವಿಧ್ಯತೆಯಿಂದ ಆಶ್ಚರ್ಯಚಕಿತರಾಗಿದ್ದಾರೆ.

ಭಾರತದ ಫಿನ್‌ಟೆಕ್ ಕ್ರಾಂತಿಯು ವ್ಯಾಪಕವಾಗಿದೆ ಮತ್ತು ಒಬ್ಬರು ವಿಮಾನ ನಿಲ್ದಾಣಕ್ಕೆ ಬಂದ ಕ್ಷಣದಿಂದ ಬೀದಿ ಆಹಾರ ಮತ್ತು ಶಾಪಿಂಗ್ ಕೇಂದ್ರಗಳವರೆಗೆ ಅದನ್ನು ವೀಕ್ಷಿಸಬಹುದು. ಕಳೆದ 10 ವರ್ಷಗಳಲ್ಲಿ ಉದ್ಯಮವು 500 ಪ್ರತಿಶತದಷ್ಟು ಆರಂಭಿಕ ಬೆಳವಣಿಗೆಗೆ ಸಾಕ್ಷಿಯಾಗಿ 31 ಶತಕೋಟಿ ಡಾಲರ್ ಗಿಂತ ಹೆಚ್ಚಿನ ದಾಖಲೆಯ ಹೂಡಿಕೆಯನ್ನು ಸ್ವೀಕರಿಸಿದೆ. ಕೈಗೆಟುಕುವ ಮೊಬೈಲ್ ಫೋನ್‌ಗಳು, ಅಗ್ಗದ ಡೇಟಾ ಮತ್ತು ಶೂನ್ಯ ಬ್ಯಾಲೆನ್ಸ್‌ನಿಂದ ಪ್ರಾರಂಭವಾಗುವ ಜನ್ ಧನ್ ಬ್ಯಾಂಕ್ ಖಾತೆಗಳು ಈ ಕ್ರಾಂತಿಗೆ ಕಾರಣವಾಗಿವೆ ಎಂದರು.

ಅಲ್ಲದೆ ಇದೇ ವೇಳೆ ಪ್ರತಿಪಕ್ಷಗಳನ್ನು ಪ್ರಮುಖವಾಗಿ ಮಾಜಿ ಕೇಂದ್ರ ಸಚಿವ ಚಿದಂಬರಂರ ಅವರ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ, 'ಭಾರತದ ಫಿನ್‌ಟೆಕ್ ಪ್ರಗತಿಯ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಹಳ್ಳಿಗಳಿಗೆ ಇಂಟರ್ನೆಟ್ ಸಂಪರ್ಕ ಮತ್ತು ವಿದ್ಯುತ್ ಸಂಪರ್ಕವಿಲ್ಲ. ಅಲ್ಲಿ ಹೇಗೆ ಪಿಒಎಸ್ ಗಳನ್ನು ಬಳಸಲು ಸಾಧ್ಯ ಎಂದು ವ್ಯಂಗ್ಯ ಮಾಡಿದ್ದರು.

ಆದರೆ ಅವರಿಗೆ ಈಗ ಉತ್ತರ ಸಿಕ್ಕಿದೆ. ಜ್ಞಾನದ ದೇವತೆಯಾದ 'ಸರಸ್ವತಿ ಮಾತೆ' ಬುದ್ಧಿವಂತಿಕೆಯನ್ನು ನೀಡುತ್ತಿರುವಾಗ, ಕೆಲವು ಸ್ವಯಂಘೋಷಿತ ತಜ್ಞರು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದರು. ಅವರು ಫಿನ್ಟೆಕ್ ಕ್ರಾಂತಿ ಹೇಗೆ ಸಂಭವಿಸಬಹುದು ಎಂದು ಅವರು ಪ್ರಶ್ನಿಸುತ್ತಾರೆ. ಆದರೆ, ಕೇವಲ ಒಂದು ದಶಕದಲ್ಲಿ, ಭಾರತವು ಗಮನಾರ್ಹವಾದ ಪರಿವರ್ತನೆಯನ್ನು ಕಂಡಿದೆ ಎಂದು ಮೋದಿ ಹೇಳಿದರು.

2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಸ್ವಂತ ಬಲದಿಂದ ಬಹುಮತ ಗಳಿಸಿತ್ತು, ಆದರೆ 2024ರಲ್ಲಿ ಅದಕ್ಕೆ ಅಗತ್ಯವಿರುವ 272 ಸಂಸದರನ್ನು ಪಡೆಯುವಲ್ಲಿ ವಿಫಲವಾಗಿತ್ತು. ಹೀಗಾಗಿ ಈ ಬಾರಿ ಸರ್ಕಾರ ರಚನೆಗೆ ಮೈತ್ರಿ ಪಕ್ಷಗಳ ಬೆಂಬಲ ಪಡೆದಿತ್ತು. ಮುಂದಿನ ಸಾರ್ವತ್ರಿಕ ಚುನಾವಣೆ ಏಪ್ರಿಲ್-ಮೇ 2029ರಲ್ಲಿ ನಡೆಯಲಿವೆ. ಅಂದಹಾಗೆ Global Fintech ವಾರ್ಷಿಕ ಉತ್ಸವವು 2020 ರಲ್ಲಿ ಪ್ರಾರಂಭವಾಗಿದ್ದು, 10ನೇ ಆವೃತ್ತಿಯು 2029 ರಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT